87 ಕೋಟಿಯ ಸೋರ್ಸ್ ಕೋಡ್,ಡೇಟಾ ಕದ್ದ ಮಾಜಿ ಉದ್ಯೋಗಿ

KannadaprabhaNewsNetwork |  
Published : Jan 28, 2026, 01:45 AM IST
ನಟಿ ಕಾವ್ಯಗೌಡ | Kannada Prabha

ಸಾರಾಂಶ

ಖಾಸಗಿ ಕಂಪನಿಗೆ ಸೇರಿದ್ದ ಸುಮಾರು 87 ಕೋಟಿ ರು. ಮೌಲ್ಯದ ಸೋರ್ಸ್ ಕೋಡ್ ಕಳ್ಳತನ ಮತ್ತು ಗೌಪ್ಯವಾದ ಡೇಟಾ ಕದ್ದ ಆರೋಪದ ಮೇಲೆ ಐಟಿ ಸಂಸ್ಥೆಯ ಮಾಜಿ ಉದ್ಯೋಗಿ ವಿರುದ್ಧ ವೈಟ್‌ಫೀಲ್ಡ್‌ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಕಂಪನಿಗೆ ಸೇರಿದ್ದ ಸುಮಾರು 87 ಕೋಟಿ ರು. ಮೌಲ್ಯದ ಸೋರ್ಸ್ ಕೋಡ್ ಕಳ್ಳತನ ಮತ್ತು ಗೌಪ್ಯವಾದ ಡೇಟಾ ಕದ್ದ ಆರೋಪದ ಮೇಲೆ ಐಟಿ ಸಂಸ್ಥೆಯ ಮಾಜಿ ಉದ್ಯೋಗಿ ವಿರುದ್ಧ ವೈಟ್‌ಫೀಲ್ಡ್‌ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲ್ ಕಫೀಲ್ ಎಂಬ ಅಧಿಕಾರಿ ನೀಡಿದ ದೂರಿನನ್ವಯ ಅಶುತೋಷ್ ನಿಗಮ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಶುತೋಷ್ ನಿಗಮ್ 2020 ಫೆಬ್ರವರಿ 1 ರಿಂದ ಅಮೆಡಿಯಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್‌ ಲಿಮಿಟೆಟ್‌ ಎಂಬ ಖಾಸಗಿ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕ ಸಂಶೋಧನಾ ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದರು.ಅಶುತೋಷ್ ನಿಗಮ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ 2025 ರ ಅಕ್ಟೋಬರ್ 11 ರಂದು ಕಂಪನಿಯ ಒಪ್ಪಿಗೆ ಅಥವಾ ಅನುಮೋದನೆಗಳಿಲ್ಲದೆ ತಮ್ಮ ವೈಯಕ್ತಿಕ ಇ-ಮೇಲ್ ಖಾತೆಯಿಂದ ಸೋರ್ಸ್ ಕೋಡ್ ಜತೆಗೆ ಇತರೆ ಗೌಪ್ಯ ಡೇಟಾವನ್ನು ವರ್ಗಾಯಿಸುವ ಮೂಲಕ ಕಂಪನಿಗೆ ಸೇರಿದ ಸಾಫ್ಟ್‌ವೇರ್‌ನೊಂದಿಗೆ ಅನಧಿಕೃತವಾಗಿ ಸೋರ್ಸ್ ಕೋಡ್ ಅನ್ನು ಪ್ರವೇಶಿಸಿ ಎಕ್ಸ್-ಫಿಲ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆಂತರಿಕ ತನಿಖೆ, ದಾಖಲೆಗಳು ಮತ್ತು ವರದಿಗಳೊಂದಿಗೆ ನಿಗಮ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಮೂಲ ಕೋಡ್ ಅನ್ನು ಅಳಿಸಲು ಒಪ್ಪಿಕೊಂಡರು. ಕಂಪನಿಯು ಅದರ ವೀಡಿಯೊದಲ್ಲಿ ರೆಕಾರ್ಡ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಾದ ನಂತರ 2025 ಡಿ.3 ರಂದು ಅವರನ್ನು ಉದ್ಯೋಗದಿಂದ ತೆಗೆದು ಹಾಕಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋರ್ಸ್‌ ಕೋಡ್ ಸೇರಿದಂತೆ ಸಾಫ್ಟ್‌ವೇರ್‌ನ ಅಂದಾಜು ಮೌಲ್ಯ 8,000,000 ಯುರೋಗಳು ಆಗಿದ್ದು, ಅಶುತೋಷ್ ನಿಗಮ್ ಅವರ ಈ ಕೋಡ್ ಅನ್ನು ಕಳ್ಳತನ ಮಾಡಿರುವುದರಿಂದ ಕಂಪನಿಗೆ ತೀವ್ರ ನಷ್ಟ ಉಂಟಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 65, 66 ಮತ್ತು 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ