ಎಚ್.ಎನ್. ವಿಜಯ್ 51ನೇ ಜನ್ಮ‌ದಿನೋತ್ಸವ ಅದ್ದೂರಿ ಆಚರಣೆ

KannadaprabhaNewsNetwork |  
Published : Jul 17, 2025, 12:30 AM IST
51 | Kannada Prabha

ಸಾರಾಂಶ

51 ಮಠಗಳ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಕಾರ್ಯಕ್ರಮ

-------------

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಭಗೀರಥ ಪೀಠದ ಶ್ರೀ ಪುರುಷೋತ್ತಮ ನಂದಾಪುರಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರ 51ನೇ ಜನ್ಮ‌ದಿನೋತ್ಸವದ ಕಾರ್ಯಕ್ರಮ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು.

ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ 51 ಮಠಗಳ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಆನಂತರ 51 ಗರ್ಭಿಣಿ ಮಹಿಳೆಯರಿಗೆ ಮಡಿಲು ತುಂಬಿ ಸೀಮಂತ ಶಾಸ್ತ್ರ ಹಾಗೂ 51 ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದ ಬಳಿಕ 51 ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಭಿನಂದಿಸಲಾಯಿತು. ಇದರ ಜೊತೆಗೆ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳು ನಡೆದವು.ಸಾಮಾನ್ಯವಾಗಿ ಜನ್ಮ ದಿನಾಚರಣೆ ಮತ್ತು ಹುಟ್ಟುಹಬ್ಬದ ಸಂಭ್ರಮಗಳು ರಾಜಕೀಯ ಮುಖಂಡರು, ಸಂಬಂಧಿಗಳ ಸಮ್ಮುಖದಲ್ಲಿ ನಡೆಯುತ್ತವೆ. ಆದರೆ ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರ ಜನ್ಮದಿನೋತ್ಸವ ಪಕ್ಷಾತೀತ ಮತ್ತು ಜಾತ್ಯತೀತ ಹಾಗೂ ಹೃದಯ ಸ್ಪರ್ಷಿಯಾಗಿ ನಡೆದು ಎಲ್ಲರಿಗೂ ಮಾದರಿಯಾಯಿತು.

ಎಚ್.ಎನ್. ವಿಜಯ್ ಅವರನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಠಾಧೀಶರು, ಜನಪ್ರತಿನಿಧಿಗಳು, ರೈತರು, ಸರ್ಕಾರಿ ನೌಕರರು ಹಾಗೂ ಜನ ಸಾಮನ್ಯರು ಸೇರಿದಂತೆ ಸಮಾಜದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಮುಖರು ಕೇರಳ ಮತ್ತು ತಮಿಳುನಾಡು ರಾಜ್ಯದ ಉದ್ಯಮಿಗಳೊಂದಿಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಹರಸಿ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಮಾಂಸಹಾರ ಮತ್ತು ಸಸ್ಯಹಾರದ ಭೋಜನ ಊಣ ಬಡಿಸಲಾಯಿತ್ತಲ್ಲದೆ, ಆರ್ಥಿಕವಾಗಿ ಸಂಕಷ್ಟಕ್ಕೀಡಾದವರು, ನೊಂದವರು ಸೇರಿದಂತೆ ಆಶಕ್ತಿರಿಗೆ ಧಾನ ಧರ್ಮ ಮಾಡಲಾಯಿತು.

ಬೆಳ್ಳಿ ಕಿರೀಟ ತೊಡಿಸಿದ ಅಭಿಮಾನಿಗಳು

ಇದೇ ಸಂದರ್ಭದಲ್ಲಿ ಹೆಚ್.ಎನ್.ವಿಜಯ್ ದಂಪತಿಗಳಿಗೆ ಅಭಿಮಾನಿಗಳು ಬೆಳ್ಳಿ ಕಿರೀಟ ತೊಡಿಸಿ ತಮ್ಮ ಅಭಿಮಾನ ಮೆರೆದರರು. ಬೃಹತ್ ವೇದಿಕೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ನೇತೃತ್ವದಲ್ಲಿ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಹಾಗೂ ಅನುಶ್ರೀ ಅವರ ಸಂಗೀತ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಜನ್ಮದಿನೋತ್ಸವದ ಆಚರಣೆ ಮಾಡಲಾಯಿತು.

ಮಾಜಿ ಸಚಿವ ಸಾ.ರಾ‌. ಮಹೇಶ್, ಶಾಸಕ ಡಿ‌. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿ.ಟಿ. ದೇವೇಗೌಡರ ಪತ್ನಿ ಲಲಿತಾ ದೇವೇಗೌಡ, ಮಕ್ಕಳಾದ ಪೂರ್ಣಿಮಾ, ಯಶೋದಾ ಆನಂದ್, ಎಚ್.ಎನ್. ವಿಜಯ್ ತಾಯಿ ಸೌಭಾಗ್ಯಮ್ಮ ಹಾಗೂ ಪತ್ನಿ ಸವಿತ ಹಾಗೂ ಪುತ್ರ ಸಂದೇಶ್, ಪುತ್ರಿ ಹಾಗೂ ಸಹೋದರ ಎಚ್.ಎನ್. ರವಿ, ನಮಿತ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ಹೂಗುಚ್ಚ ನೀಡಿ ಶುಭ ಕೋರಿದರು.

ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಮುಲ್ ಅಧ್ಯಕ್ಷ ಚೆಲುವರಾಜ್, ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ.ಜೆ. ಮಹೇಶ್, ಮಂಡ್ಯ ಮನ್ ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ, ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತ ಜಗನಾಥಸಾಗರ್, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಎಚ್.ಎನ್. ವಿಜಯ್ ಅಭಿಮಾನಿ ಬಳಗದ ಜಿಲ್ಲಾ ಪತ್ರ ಬರಹಗಾರ ಮಿರ್ಲೆ ರಾಜೀವ್, ನಗರಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್, ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮಿರ್ಲೆ ಅಣ್ಣೇಗೌಡ, ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಕೆಪಿಸಿಸಿ ಮಾಜಿ ಸದಸ್ಯ ಎಸ್.ಪಿ. ತಮ್ಮಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ. ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮು, ಕೇರಳದ ಅಡಿಕೆ ಉದ್ಯಮಿಗಳಾದ ಫೈಸಲ್, ಇಬ್ರಾಹಿಂ, ಕಿಶೋರಿ, ಮಾಣಿಕ್ ಚಂದ್, ಶಿವಮೊಗ್ಗದ ಪ್ರಕಾಶ್, ಕರುಣೇಶ್, ಹರದನಹಳ್ಳಿ ಗ್ರಾಪಂ ಅಧ್ಯಕ್ಷ ಗೋಪಾಲ್, ಮಾಜಿ ಅಧ್ಯಕ್ಷೆ ಮಂಜುಳ ರಮೇಶ್, ಸದಸ್ಯ ದೀಪು ಸೇರಿದಂತೆ ಸಾವಿರಾರು ಮಂದಿ ಅಭಿಮಾನಿಗಳು ಭಾಗವಹಿಸಿದ್ದರು.

ಅರ್ಜುನ್‌ ಜನ್ಯ ತಂಡದಿಂದ ರಸಮಂಜರಿ

ಖ್ಯಾತ ಚಿತ್ರ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಹಾಕಿದ್ದ ಅದ್ದೂರಿ ಸೆಟ್‌ ನಲ್ಲಿ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ತಂಡ ಹಾಗೂ ನಿರೂಪಕಿ ಅನುಶ್ರೀ ಅವರ ಜುಗಲ್ ಬಂದಿ ಜನಮನಸೂರೆಗೊಂಡಿತ್ತು.

ಬಲೇ ಬಲೇ ಜೈ ಭಜರಂಗಿ ಎಂದು ಹಾಡುತ್ತಾ ಬಂದ ಅರ್ಜುನ್ ಜನ್ಯ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೇ ಖ್ಯಾತ ನಿರೂಪಕಿ ಅನುಶ್ರೀ ಈ ಕಾರ್ಯಕ್ರಮದ ಆಹ್ವಾನಪತ್ರಿಕೆಯಲ್ಲಿ ನಮ್ಮಿಬ್ಬರ ಪೋಟೋ ಹಾಕಿದ್ದಾರೆ ಆರತಕ್ಷತೆ ರೀತಿ ಎಂದು ಅರ್ಜುನ್ ಜನ್ಯ ಅವರಿಗೆ ಸಾಥ್ ನೀಡಿ ಸಂಗೀತ ಕಾರ್ಯಕ್ರಮಕ್ಕೆ ತಮ್ಮ ಮಾತಿನ ಚಾಟಕಿ ಹಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ