ಬೆಂಗಳೂರು : ನೀರು ಚೆಲ್ಲಿಕೊಂಡು ಆಟವಾಡುವಾಗ ಶಿಕ್ಷಕಿಯ ಹೊಡೆತಕ್ಕೆ ಮುರಿದ ಹಲ್ಲು !

KannadaprabhaNewsNetwork |  
Published : Nov 09, 2024, 01:23 AM ISTUpdated : Nov 09, 2024, 08:13 AM IST
ಹಲ್ಲು | Kannada Prabha

ಸಾರಾಂಶ

ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ.

 ಬೆಂಗಳೂರು : ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ.

ಜಯನಗರ 4ನೇ ಬ್ಲಾಕ್‌ನ ಹೋಲಿ ಕ್ರೈಸ್ತ ಶಾಲೆಯಲ್ಲಿ ನ.7ರಂದು ಈ ಘಟನೆ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ತಂದೆ ಅನಿಲ್‌ ಕುಮಾರ್‌ ವಿ.ಪೈ ಅವರು ನೀಡಿದ ದೂರಿನ ಮೇರೆಗೆ ಹಿಂದಿ ಶಿಕ್ಷಕಿ ಅಜ್ಮತ್‌ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಜಯನಗರ 4ನೇ ಬ್ಲಾಕ್‌ ನಿವಾಸಿ ಅನಿಲ್‌ ಕುಮಾರ್ ವಿ.ಪೈ ಅವರ 11 ವರ್ಷದ ಪುತ್ರ ಹೋಲಿ ಕ್ರೈಸ್ತ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನ.7ರಂದು ಮಧ್ಯಾಹ್ನ ಸುಮಾರು 12.30ಕ್ಕೆ ದೂರುದಾರರ ಪುತ್ರ ತನ್ನ ಸಹಪಾಠಿಗಳೊಂದಿಗೆ ತರಗತಿಯಲ್ಲಿ ನೀರು ಚೆಲ್ಲುತ್ತಾ ಆಡುವಾಡುತ್ತಿದ್ದ. ಈ ವಿಚಾರ ತಿಳಿದು ಹಿಂದಿ ಶಿಕ್ಷಕಿ ಅಜ್ಮತ್‌ ಕೋಲಿನಿಂದ ವಿದ್ಯಾರ್ಥಿ ಮುಖಕ್ಕೆ ಹೊಡೆದಿದ್ದಾರೆ.

ಇದರಿಂದ ವಿದ್ಯಾರ್ಥಿ ಮುಖಕ್ಕೆ ಗಾಯವಾಗಿದ್ದು, ಹಲ್ಲೊಂದು ಮುರಿದಿದೆ. ಪುತ್ರನ ಮೇಲಿನ ಹಲ್ಲೆ ವಿಚಾರ ತಿಳಿದ ಅನಿಲ್‌ ಕುಮಾರ್‌, ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಹಲ್ಲೆ ಘಟನೆ ಸಂಬಂಧ ಹಿಂದಿ ಶಿಕ್ಷಕಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1ನೇ ಕ್ಲಾಸ್‌ಗೆ ವಯೋಮಿತಿ 5.5 ವರ್ಷಕ್ಕಿಳಿಸಲು ಪೋಷಕರ ಹೋರಾಟ
ಆಟೋ ಎಲ್‌ಪಿಜಿ ಕೊರತೆ ಇಲ್ಲ : ಗ್ರಾಹಕರ ವ್ಯವಹಾರ ಇಲಾಖೆ