ಅಗತ್ಯ ಉಳ್ಳವರಿಗೆ ಕೃತಕ ಕಾಲುಗಳ ಉಚಿತ ವಿತರಣೆ

KannadaprabhaNewsNetwork |  
Published : Jun 16, 2025, 01:19 AM IST
7 | Kannada Prabha

ಸಾರಾಂಶ

ಕೃತಕ ಕಾಲುಗಳ ಮರು ಜೋಡಣೆ ಹೇಗೆ ಎಂಬ ಕುರಿತು ತರಬೇತಿ ನೀಡಿ, ಅಗತ್ಯ ಉಳ್ಳವರಿಗೆ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ ಮೆಂಟ್‌, ಚೆನ್ನೈನ ಪ್ರೀಡಂ ಟ್ರಸ್ಟ್‌ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಭಾನುವಾರ ಉಚಿತವಾಗಿ ಕೃತಕ ಕಾಲುಗಳ ಜೋಡಣೆ, ತರಬೇತಿ ಮತ್ತು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ನಜರಬಾದಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪೀಪಲ್ಸ್‌ ಪಾರ್ಕ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಅಥವಾ ಕಾಲು ಕಳೆದುಕೊಂಡವರಿಗೆ ಕೃತಕ ಕಾಲುಗಳ ಮರು ಜೋಡಣೆ ಹೇಗೆ ಎಂಬ ಕುರಿತು ತರಬೇತಿ ನೀಡಿ, ಅಗತ್ಯ ಉಳ್ಳವರಿಗೆ ವಿತರಿಸಲಾಯಿತು.

ಹಲವು ಮಂದಿ ಅಗತ್ಯವುಳ್ಳವರು ಈ ಕಾರ್ಯಕ್ರಮದ ಲಾಭ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ, ಪ್ರೀಡಂ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಸ್‌. ಸುಂದರ್‌, ಅಪೆಕ್ಸ್‌ ಸದಸ್ಯೆ ಉಷಾ ಭಾರಧ್ವಾಜ್‌, ಸರಗೂರು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮೂಳೆ ಮತ್ತು ಕೀಲುರೋಗ ತಜ್ಞ ಡಾ.ಎಂ.ಆರ್‌. ಸೀತಾರಾಮ್‌ ಮೊದಲಾದರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!