ಕೊರಟಗೆರೆ: ಯಾವ ದೇಶದಲ್ಲಿ ದೇವಾಲಯಗಳಿಗಿಂತ ಹೆಚ್ಚು ಶಾಲೆಗಳು ಇರುತ್ತವೆಯೋ ಅಂತ ದೇಶ ಹೆಚ್ಚು ಪ್ರಗತಿಯನ್ನು ಸಾಧಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ. ನಟರಾಜ್ ತಿಳಿಸಿದರು.
ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಹ ದೇಶ ಇಲ್ಲಿ ಹಲವು ಧರ್ಮಗಳನ್ನು ಪಾಲಿಸುವಂತಹ ಜನರು ಇದ್ದಾರೆ. ಆದರೆ ಎಲ್ಲರೂ ಪಾಲಿಸುವಂತಹ ಧರ್ಮ ಎಂದರೆ ಅದು ಶಿಕ್ಷಣ, ವಿವಿಧತೆಯಲ್ಲಿ ಏಕತೆಯನ್ನು ನಾವು ಸಾರುತ್ತೇವೆ. ಅದೇ ರೀತಿ ನಮ್ಮಲ್ಲಿನ ಎಲ್ಲರೂ ಧರ್ಮದವರೂ ಒಂದೆಡೆ ಸೇರಿ ಕಲಿಯುವಂತಹದ್ದು ಶಾಲೆ ದೇವಾಲಯಗಳಲ್ಲಿ ಘಂಟೆಗಳ ನಾದಕ್ಕೆ ಕೈಮುಗಿಯುತ್ತೇವೆ. ಆದರೆ ಶಾಲೆಯ ಘಂಟೆನಾದನಕ್ಕೆ ನಾವೆಲ್ಲರೂ ಒಂದೇ ಎಂದು ಶಾಲೆಗೆ ಹೋಗುತ್ತೇವೆ ಎಂದು ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರುದ್ರೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಕಲೀಲ್ ಅಹಮದ್ ಷರೀಫ್, ಪ.ಪಂ ಸದಸ್ಯ ಜಿ. ನಾಗರಾಜು, ಕ್ರಿಸೆಂಟ್ ಶಾಲೆಯ ಕಾರ್ಯದರ್ಶಿ ಇಸ್ಮಾಯಿಲ್ ಅಹಮದ್ ಷರೀಫ್, ಮುಖ್ಯ ಶಿಕ್ಷಕರಾದ ಜಿ. ಕಲೀಂ ಉನ್ನಿಸಾ, ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಪೋಷಕರು ಹಾಗೂ ಮಕ್ಕಳು ಇದ್ದರು.