ಬಾಗಲಕೋಟೆಯ ಬಣ್ಣದೋಕುಳಿಗೆ ವೈಭವದ ತೆರೆ

KannadaprabhaNewsNetwork |  
Published : Mar 08, 2026, 02:45 AM IST
7ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಶಿವರಾತ್ರಿ ಅಮಾವಾಸ್ಯೆ ಮರುದಿನದಿಂದ ಆರಂಭವಾಗಿದ್ದ ಬಾಗಲಕೋಟೆ ಐತಿಹಾಸಿಕ ಹೋಳಿ ಸಂಭ್ರಮಕ್ಕೆ ತೆರೆಬಿದ್ದಿದ್ದು, ಮೂರು ದಿನಗಳ ಕಾಲ ಅತ್ಯಂತ ವೈಭದಿಂದ ನಡೆದ ಬಣ್ಣದೋಕುಳಿಯಲ್ಲಿ ಯಾವುದೇ ಅಹಿತಕರ ಘಟನೆ ಅವಕಾಶ ನೀಡದೇ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಸಾಮರಸ್ಯದಿಂದ ಓಕೋಳಿಯಲ್ಲಿ ಜನ ಮಿಂದೆದ್ದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿವರಾತ್ರಿ ಅಮವಾಸೆ ಮರುದಿನದಿಂದ ಆರಂಭವಾಗಿದ್ದ ಬಾಗಲಕೋಟೆ ಐತಿಹಾಸಿಕ ಹೋಳಿ ಸಂಭ್ರಮಕ್ಕೆ ತೆರೆಬಿದ್ದಿದ್ದು, ಮೂರು ದಿನಗಳ ಕಾಲ ಅತ್ಯಂತ ವೈಭದಿಂದ ನಡೆದ ಬಣ್ಣದೋಕುಳಿಯಲ್ಲಿ ಯಾವುದೇ ಅಹಿತಕರ ಘಟನೆ ಅವಕಾಶ ನೀಡದೇ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಸಾಮರಸ್ಯದಿಂದ ಓಕೋಳಿಯಲ್ಲಿ ಜನ ಮಿಂದೆದ್ದರು.

ಕೊನೆಯ ಎರಡು ದಿನ ನಿರೀಕ್ಷೆಗೂ ಮೀರಿ ಜನರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದು ಬಾಗಲಕೋಟೆ ಹೋಳಿ ಮುಂದಿನ ಪೀಳಿಗೆಗೂ ಈ ಐತಿಹಾಸಿಕ ಹಬ್ಬ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿತ್ತು. 15 ದಿನಗಳ ಕಾಲ ಲಯ, ರಾಗಬದ್ಧವಾಗಿ ಹಲಗೆ ಸದ್ದು, ಮೂರು ದಿನಗಳ ಕಾಲ ಹಗಲಿನಲ್ಲಿ ಕಣ್ಣಾಯಿಸಿದರೆ ಕಡೆಗೆಲ್ಲ ರಂಗುರಂಗಿನ ಬಣ್ಣದೋಕುಳಿ, ರಾತ್ರಿ ಸೋಗಿನ ಬಂಡಿಗಳ ಮೆರಗು ಹೋಳಿ ಹಬ್ಬಕ್ಕೆ ವಿಶೇಷ ಕಳೆ ತಂದವು.

ಹೋಳಿ ಹಬ್ಬವನ್ನು ಸಾಂಸ್ಕೃತಿಕವಾಗಿ ಜೀವಂತವಾಗಿರಿಸಲು ಬಾಗಲಕೋಟೆ ಹೋಳಿ ಆಚರಣೆ ಸಮಿತಿ, ನಮ್ಮೂರು ಹಬ್ಬ ತಂಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ರೇನ್ ಡ್ಯಾನ್ಸ್ ಆಧುನಿಕ ಸ್ಪರ್ಶ ನೀಡಿ ಯುವ ಸಮೂಹ ಹಿಡಿದುಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ. ಕಾಮದಹನ ಬಳಿಕ ಅದ್ಧೂರಿಯಾಗಿ ಚಾಲನೆ ದೊರೆತಿದ್ದು, ಬಣ್ಣದೋಕುಳಿಗೆ ನಗರದ ಪ್ರತಿ ಮನೆ ಮನೆ, ರಸ್ತೆ ಇಕ್ಕೆಲ ಮತ್ತು ಗಲ್ಲಿಗಲ್ಲಿಗಳಲ್ಲಿ ಬಣ್ಣದ ರಂಗು ಕಾಣಿಸಿಕೊಂಡಿತ್ತು.

ನಸುಕಿನ ಜಾವ ಹಲಿಗೆ ನಾದ, ಶಹನಾಯಿ ಸ್ವರದೊಂದಿಗೆ ಆರಂಭಗೊಳ್ಳುತ್ತಿದ್ದ ಬಣ್ಣದೋಕುಳಿ ಮಧ್ಯಾಹ್ನದ ವೇಳೆಗೆ ರಂಗು ಪಡೆಯುತ್ತಿತ್ತು. ಯುವಕ-ಯುವತಿಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರೆಲ್ಲರೂ ಕೂಡಿಕೊಂಡು ರಂಗಿನ ಲೋಕದಲ್ಲಿ ಮಿಂದೆದ್ದರು. ಈ ಬಾರಿ ದಿನ ಜರುಗಿದ ಬಣ್ಣದಾಟದಲ್ಲಿ ಜನರು ಬಂಡಿ-ಟ್ರ್ಯಾಕ್ಟರ್‌ ನಲ್ಲಿ ನಿಂತು ತಮ್ಮ ಎದುರಾಳಿಗಳನ್ನು ಬಣ್ಣದ ನೀರಿನ ಮಜ್ಜನದಲ್ಲಿ ಮುಳುಗಿಸಿದ್ದರು. ಬಗೆ ಬಗೆಯ ಬಣ್ಣ ಹಚ್ಚುವುದರ ಜೊತೆಗೆ ಆಕರ್ಷಕ ರೀತಿಯಲ್ಲಿ ಹಲಿಗೆ ಬಾರಿಸಿದ್ದು ರಂಜಿಸಿತು. ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.

ಮಕ್ಕಳು ಕೈಯಲ್ಲಿ ಪಿಚಕಾರಿಗಳನ್ನು ಹಿಡಿದು ಸಿಕ್ಕ ಸಿಕ್ಕವರೆಲ್ಲರಿಗೂ ಶೂಟ್ ಮಾಡುತ್ತಿದ್ದರು. ದೊಡ್ಡವರು, ಬಣ್ಣದ ಲೋಕದಿಂದ ದೂರ ಉಳಿದ ಮನೆಯಲ್ಲಿ ಸೇರಿದ್ದ ಸ್ನೇಹಿತರನ್ನು ಹೊರಗಡೆ ಎಳೆದುತಂದು, ಕೈಯಲ್ಲಿ ಬಣ್ಣ, ನೀರು ಕಲಿಸಿ, ಶೈನಿಂಗ್ ಬರುವಂತೆ ವಿಧ ವಿಧದ ಬಣ್ಣ ಹಚ್ಚುತ್ತಿದ್ದರು. ಯುವಕರು ಅಣುಕು ಶವಯಾತ್ರೆ ನಡೆಸಿ ರಂಜಿಸಿದರು. ಮಹಿಳೆಯರು ಮತ್ತು ಯುವತಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕೋಟೆನಗರಿಯ ಬೀದಿ ಬೀದಿಯಲ್ಲಿ ಎಲ್ಲಿ ನೋಡಿದರೂ ಅಲ್ಲಿ ಬ್ಯಾರಲ್‌ಗಳಲ್ಲಿ ಬಣ್ಣದ ನೀರು ತುಂಬಿಕೊಂಡು ರಸ್ತೆ ಮೇಲೆ ಹಾಯ್ದು ಹೋಗುತ್ತಿದ್ದ ಬೈಕ್ ಸವಾರರು ಮತ್ತು ಜನರ ಮೇಲೆ ಮುಖಗಳಿಗೆ ರಪ್ಪೆಂದು ನೀರು ಹೊಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬಣ್ಣ ಹಚ್ಚಬೇಡಿ ಎಂದು ಅಂಗಲಾಚಿದರೂ ಬಿಡದೇ ಬಣ್ಣದ ನೀರಿನ ಮಜ್ಜನ ಮಾಡಿಸಿ ಸಂಭ್ರಮಿಸುತ್ತಿದ್ದರು. ಪ್ರತಿನಿತ್ಯ ನಗರದ ಎಲ್ಲಾ ಬೀದಿ ಬೀದಿಗಳಲ್ಲಿ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಯುವಕರಂತೂ ಅಘೋಷಿತ ಬಂದ್ ಆಗಿದ್ದರಿಂದ ರಾಜಾರೋಷವಾಗಿ ಬೈಕ್ ಮೇಲೆ ಜಾಲಿ ರೈಡ್ ಮಾಡಿದರು. ಶಿಳ್ಳೆ, ಕೇಕೆ, ಜೈಕಾರಗಳು ಮುಗಿಲು ಮುಟ್ಟಿದವು. ಹೋಳಿ ಹಬ್ಬಗಳಲ್ಲಿ ಕಾಣ ಸಿಗುವ ಹಾರಾಡಿ ಅಳುವುದು, ತಮ್ಮ ಎದುರಿಗೆ ಬಂದವರ ಮೇಲೆ ಬಣ್ಣದ ನೀರು ಎರಚುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ಸರ್ಕಾರಿ ನೌಕರರು, ಮಾಧ್ಯಮ ಮಿತ್ರರು ಸೇರಿದಂತೆ ಜಾತಿ, ಮತ, ಪಂಥ ಬೇಧಭಾವ ಮರೆತು ಹೋಳಿ ಆಡಿದರು. ದೇಶದಲ್ಲಿಯೇ ಗಮನ ಸೆಳೆದಿರುವ ಕೋಟೆ ನಗರಿಯ ಬಣ್ಣದೋಕುಳಿ ಬಿಗಿ ಪೊಲೀಸ್‌ ಭದ್ರತೆ ನಡುವೆ ಸಂಭ್ರಮದಿಂದ ತೆರೆ ಬಿದ್ದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈಕ್‌ಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಸಂಚಾರ: ಪ್ರಕರಣ ದಾಖಲು
ಸಾಲದ ಹೊರೆ ಹೆಚ್ಚಿಸಿ, ಕರಾವಳಿ ಕಡೆಗಣಿಸಿದ ಬಜೆಟ್: ಕಾಮತ್‌