ಅಸ್ನೋಟಿಯಲ್ಲಿ ಅದ್ಧೂರಿಯ ಗುರುವಂದನಾ ಕಾರ್ಯಕ್ರಮ

KannadaprabhaNewsNetwork |  
Published : May 22, 2026, 02:45 AM IST
ಗುರುವಂದನೆ | Kannada Prabha

ಸಾರಾಂಶ

ಶಿವಾಜಿ ವಿದ್ಯಾ ಮಂದಿರ ಅಸ್ನೋಟಿ-ಕಾರವಾರದ 1991ರ ಎಸ್ಎಸ್ಎಲ್‌ಸಿ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ದಿಲೀಪ್ ಸಾಳುಂಕೆ ಸಾರಥ್ಯದಲ್ಲಿ ಶಾಲಾ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು.

ಕನ್ನಡಪ್ರಭ ವಾರ್ತೆ ಕಾರವಾರ

ಶಿವಾಜಿ ವಿದ್ಯಾ ಮಂದಿರ ಅಸ್ನೋಟಿ-ಕಾರವಾರದ 1991ರ ಎಸ್ಎಸ್ಎಲ್‌ಸಿ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ದಿಲೀಪ್ ಸಾಳುಂಕೆ ಸಾರಥ್ಯದಲ್ಲಿ ಶಾಲಾ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳಾಗಿದ್ದ ನಿವೃತ್ತ ಗೆಜೆಟೆಡ್ ಅಧಿಕಾರಿ ಕೃಷ್ಣಾನಂದ ಸಾಳುಂಕೆ, ನಮ್ಮ ಊರು ನಮ್ಮ ಹೆಮ್ಮೆ, ಇಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ವಿಶಿಷ್ಠವಾದ ವೇದಿಕೆ ಕಲ್ಪಿಸಿ ನಮ್ಮನ್ನು ಆಹ್ವಾನಿಸಿ ಗೌರವ ನೀಡಿದ್ದು ಖುಷಿ ನೀಡಿದೆ ಎಂದರು.

ಶಾಲೆಯ ಪ್ರಥಮ ತಂಡದ ವಿದ್ಯಾರ್ಥಿ, ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷ ನಾಗೇಶ ಸಾಳುಂಕೆ, ಶಿವಾಜಿ ವಿದ್ಯಾ ಮಂದಿರಕ್ಕೆ ತನ್ನದೇಯಾದ ಇತಿಹಾಸವಿದೆ. ಅದು ಹೀಗೆಯೇ ಮುಂದುವರಿಯಲಿ. ಪ್ರಸಕ್ತ ವರ್ಷ ಶಾಲೆಯ ಮೆಟ್ರಿಕ್ ಫಲಿತಾಂಶ ಶೇಕಡಾ ನೂರು ದಾಖಲಿಸಿದೆ. ಇದು ನಿರಂತರವಾಗಿರಲಿ ಹಾಗೂ ವಿದ್ಯಾರ್ಥಿಗಳು ಓದುವ ದಿಶೆಯಲ್ಲಿ ಮನವನ್ನು ನಿಗ್ರಹಿಸಿಕೊಳ್ಳಬೇಕು, ಏಕಾಗ್ರತೆ ಇರುವ ಮನಸ್ಸು ಸಾಧನೆಯ ಮೆಟ್ಟಿಲನ್ನು ಬೇಗ ಮುಟ್ಟುತ್ತದೆ ಮತ್ತು ಸತತ ಅಧ್ಯಯನವು ಅವಕಾಶ ಕಲ್ಪಿಸಿದರೆ, ಪರಿಶ್ರಮ ಪ್ರತಿಫಲ ಒದಗಿಸುತ್ತದೆ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿ, ನಿವೃತ್ತ ಯೋಧ ಶಾಂತರಾಮ ಸಾಳುಂಕೆ, ಶಾಲೆಯ ನಿವೃತ್ತ ನೌಕರ ಶಶಿಕಾಂತ ಸಾಳುಂಕೆ ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ನ್ಯಾಯವಾದಿ ಸಂಜಯ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಗಿರೀಶ್ ದೇಸಾಯಿ ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಸುಮನ್ ನಾಯ್ಕ ಹಾಗೂ ಪ್ರಸ್ತುತ ಮುಖ್ಯ ಗುರು ಡಾ. ಗಣೇಶ ಬಿಷ್ಟಣ್ಣನವರ, ನಿವೃತ್ತ ಶಾಲಾ ಸಿಬ್ಬಂದಿ ಶಶಿಕಾಂತ ಸಾಳುಂಕೆ, ಜೊತೆಗೆ ಶಾಲೆಯ ಪ್ರಥಮ ಹಳೆಯ ವಿದ್ಯಾರ್ಥಿಗಳಾದ ಪ್ರೇಮಾನಂದ ಸಾಳುಂಕೆ, ಮೋಹನ ಸಾಳುಂಕೆ, ಕೃಷ್ಣಾನಂದ ಸಾಳುಂಕೆ ಹಾಗೂ ನಾಗೇಶ ಸಾಳುಂಕೆಯರಿಗೆ ಮತ್ತು 1974ರಲ್ಲಿ ಶಾಲೆಯಿಂದ ರಾಜ್ಯ ಮಟ್ಟಕ್ಕೆ ಸಾಗಿದ್ದ ಕಬಡ್ಡಿ ಆಟಗಾರರನ್ನು ಮತ್ತು ಪ್ರಸಕ್ತ ವರ್ಷ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಪ್ರಥಮ ಬಂದ ಅಶ್ವಿತಾ ದೇಸಾಯಿಯವರನ್ನು 1991ರ ಮೆಟ್ರಿಕ್ ತಂಡ ಗೌರವಿಸಿತು.

ಕಾರ್ಯಕ್ರಮದ ರೂವಾರಿ ದಿಲೀಪ್ ಸಾಳುಂಕೆ ಪ್ರಾಸ್ತಾವಿಕ ನುಡಿಯಾಡಿದರು. ಮಾಯಾ ಎಸ್. ಸಾಳುಂಕೆ ಪ್ರಾರ್ಥಿಸಿದರು. ಗುರುನಾಥ ಆರ್. ನಾಯ್ಕ ವಂದಿಸಿದರು. 1991ರ ಹಳೆಯ ವಿದ್ಯಾರ್ಥಿಗಳೆಲ್ಲರೂ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತದನಂತರ ನಾಟಕವನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮಾವು, ಹಲಸು ಮೇಳ
ಉದ್ಯೋಗ ಆಧರಿತ ಶಿಕ್ಷಣ ಕಾರ್ಯಾಗಾರ