ಕನ್ನಡಪ್ರಭ ವಾರ್ತೆ ಆಲಮಟ್ಟಿ
ಗೆದ್ದ ಟಗರುಗಳಿಗೆ ಭರ್ಜರಿ ಬಹುಮಾನ:
ಟಗರು ಕಾಳಗದಲ್ಲಿ ಮುದ್ದೇಬಿಹಾಳ ತಾಲೂಕಿನ ಕೇಸಾಪುರದ ಗಿಡ್ಡ ಹೆಸರಿನ ಟಗರು ಪ್ರಥಮ ಸ್ಥಾನ ಪಡೆಯಿತು. ಅದರ ಮಾಲೀಕ ಪ್ರವೀಣ ಪ್ರಥಮ ಬಹುಮಾನ ರಾಯಲ್ ಎನ್ಫೀಲ್ಡ್ ಬೈಕ್ ತಮ್ಮದಾಗಿಸಿಕೊಂಡರು. ಬಾಗಲಕೋಟೆ ಬಳಿಯ ಗದ್ದನಕೇರಿಯ ಕಿರಣ ಗರುಡ ಟಗರು ದ್ವಿತೀಯ ಸ್ಥಾನ ಪಡೆದಿದ್ದು, ₹1.30 ಲಕ್ಷ ಮೌಲ್ಯದ ಹೊಂಡಾ ಬೈಕ್, ಮುದ್ದೇಬಿಹಾಳ ತಾಲೂಕಿನ ಕಿಲ್ಲಾರಹಟ್ಟಿಯ ಅಮರಪ್ಪ ಮದರಿ ಎರಡು ಟಗರು ತೃತೀಯ ಸ್ಥಾನ ಹಾಗೂ ಚತುರ್ಥ ಸ್ಥಾನ ಪಡೆದಿದ್ದು, ತೃತೀಯ ಬಹುಮಾನ ₹1 ಲಕ್ಷ ಮೌಲ್ಯದ ಬೈಕ್ ಹಾಗೂ ಚತುರ್ಥ ಬಹುಮಾನ ₹ 10 ಸಾವಿರ ಪಡೆದವು.ಇನ್ನುಳಿದಂತೆ 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲಿನ ವಿಭಾಗದ ಟಗರಿನ ಕಾಳಗ ಪ್ರತ್ಯೇಕವಾಗಿ ನಡೆದಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಮೊದಲ ಬಹುಮಾನ ₹ 3 ಲಕ್ಷ ಬುಲೆಟ್ ಹಾಗೂ ದ್ವಿತೀಯ ₹ 1.5 ಲಕ್ಷ ಬೈಕ್ ಪಡೆದವು. ಇನ್ನು ಬಹುಮಾನದ ಪ್ರಾಯೋಜಕತ್ವ ನೀಡಿದ ಸುರಪುರದ ಬಬ್ಲುಗೌಡ ನಾಯಕರನ್ನು ಬೇನಾಳ ಗ್ರಾಮಸ್ಥರು ₹ 60 ಸಾವಿರ ಮೌಲ್ಯದ ಹಸುವನ್ನ ನೀಡಿ ಗೌರವಿಸಿದರು.
ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ಅಂತಾರಾಜ್ಯ ಟಗರು ಕಾಳಗ ಹಮ್ಮಿಕೊಂಡಿದ್ದು, ಈ ಟಗರು ಕಾಳಗ ನೋಡುಗರ ಮೈ ನವಿರೇಳುವಂತೆ ಮಾಡುತ್ತಿದೆ.