ಗಣೇಶ್ ತಮ್ಮಡಿಹಳ್ಳಿ
ಕನ್ನಡ ವಿಭಾಗದಲ್ಲಿ ಅಭಿಷೇಕ್ 10 ಚಿನ್ನದ ಪದಕಗಳನ್ನು ಪಡೆದು ದಿನವಿಡೀ ಕೂಲಿ ಮಾಡಿ ಮಗನನ್ನು ಓದಿಸಿದ ತಂದೆಯ ಕನಸನ್ನು ಈ ‘ಬಂಗಾರದ ಮಗ’ ನನಸು ಮಾಡಿದ್ದಾರೆ. ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಅಭಿಷೇಕ್ ಅವರ ಈ ಸಾಧನೆ ಸಾಬೀತುಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಹಿರೇಕಾನವಂಗಲ ಗ್ರಾಮ ಬಡ ಕೂಲಿಕಾರ್ಮಿಕ ಎಚ್.ಎಂ.ಮಂಜುನಾಥ ಅವರ ಪುತ್ರ ಎಚ್.ಎಂ.ಅಭಿಷೇಕ್ ತನ್ನ ಸಾಧನೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.ಕುವೆಂಪು ವಿವಿಯಲ್ಲಿ ಬುಧವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಬಂಗಾರದ ಪದಕ ನೀಡಿ ಪುರಸ್ಕರಿಸಿದರು. ಕೂಲಿಗಾರನ ಮಗ ಅಭಿಷೇಕ್ ಘಟಿಕೋತ್ಸವದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
ಅಪ್ಪನ ಕಷ್ಟವನ್ನು ಮರೆಸಿದ ಮಗನ ಸಾಧನೆ:
‘ನನಗೆ ಯಾವುದೇ ಆಸ್ತಿ ಇಲ್ಲ ಸರ್. ನನ್ನ ಮಕ್ಕಳನ್ನೇ ಆಸ್ತಿ ಎಂದುಕೊಂಡು ಬೆಳೆಸಿದ್ದೇನೆ. ನಾನು ಬೇರೆಯವರ ಜಮೀನಿನಲ್ಲಿ ದುಡಿಯುವುದನ್ನು ಕಂಡು ನನ್ನ ಮಗ ಇಷ್ಟೆಲ್ಲ ಸಾಧನೆ ಮಾಡಿದ್ದಾನೆ. ನನಗೆ ಒಬ್ಬ ಮಗ, ಒಬ್ಬ ಮಗಳು. ಮಗಳು ನರ್ಸ್ ಕೆಲಸ ಮಾಡುತ್ತಿದ್ದಾಳೆ. ಈಗ ಮಗ ವಿಶ್ವವಿದ್ಯಾಲಯಕ್ಕೆ ಫಸ್ಟ್ ಬಂದಿದ್ದಾನೆ. 10 ಬಂಗಾರದ ಪದಕ ಪಡೆದಿದ್ದಾನೆ. ಇದಕ್ಕಿಂತ ಇನ್ನೇನು ಬೇಕು. ಮಗನ ಸಾಧನೆ ಮುಂದೆ ನನ್ನ ಕಷ್ಟ ಏನೂ ದೊಡ್ಡದಲ್ಲ’ ಎಂದು ಅಭಿಷೇಕ್ ತಂದೆ ಮಂಜಪ್ಪ ಮಗನ ಸಾಧನೆ ಕೊಂಡಾಡಿದರು.
ಸಾಧನೆಯ ಮೂಲಕ ಪೋಷಕರ ಋಣ ತೀರಿಸುತ್ತೇನೆ
ಚಿನ್ನದ ಪದಕವನ್ನು ನಿರೀಕ್ಷೆ ಮಾಡಿರಲಿಲ್ಲ. ಚಿಕ್ಕಂದಿನಿಂದಲೂ ಪರಿಸರ ಬಗ್ಗೆ ಹೆಚ್ಚು ಆಸಕ್ತಿ ಇದ್ದುದ್ದರಿಂದ ಪರಿಸರ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡೆ. ಕಷ್ಟಪಟ್ಟು ಓದುವ ಬದಲು ಇಷ್ಟ ಪಟ್ಟು ಓದಿದ್ದೇನೆ. ನನ್ನ ಈ ಸಾಧನೆ ಹಿಂದೆ ಪ್ರಾಧ್ಯಾಪಕರ ಸಹಕಾರ ಹೆಚ್ಚಿದೆ. ಏಳು ಚಿನ್ನದ ಪದಕ ಬಂದಿರೋದು ಖುಷಿ ಹೆಚ್ಚಿಸಿದೆ.
ನನ್ನ ತಂದೆ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್, ತಾಯಿ ಶಿಕ್ಷಕಿ. ಬಾಲ್ಯದಿಂದಲೇ ನನಗೆ ಉತ್ತಮ ಶಿಕ್ಷಣವನ್ನು ಕೊಡಿಸಿದ್ದಾರೆ. ಪಿಜಿಯಲ್ಲಿ ಜೈವಿಕ ತಂತ್ರಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ನಾನೆಂದು ಚಿನ್ನದ ಪದಕವನ್ನು ಗುರಿಯಾಗಿಟ್ಟುಕೊಂಡು ಓದಿದವಳಲ್ಲ. ಓದುವುದನ್ನೇ ಶ್ರದ್ದೆಯಿಂದ ಓದಿದೆ. ನನಗೆ 6 ಚಿನ್ನದ ಪದಕ ಲಭಿಸಿರುವುದು ಖುಷಿ ಹೆಚ್ಚಿಸಿದೆ. ಸದ್ಯ ನಾನು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇದರಲ್ಲೇ ಮುಂದುವರಿಯುವ ಇಚ್ಛೆ ಇದೆ.
ಉತ್ತಮ ಅಂಕ ಪಡೆದು ಒಳ್ಳೆಯ ಹುದ್ದೆ ಗಿಟ್ಟಿಕೊಳ್ಳಬೇಕು ಎಂಬ ಆಸೆ ಇತ್ತು. ಆರಂಭದಿಂದಲೇ ನಿರಂತರವಾಗಿ ಓದಿಕೊಳ್ಳುತ್ತಿದ್ದೆ. 5 ಚಿನ್ನದ ಪದಕ ಬಂದಿರುವುದು ಖುಷಿ ತಂದಿದೆ. ನನ್ನ ಈ ಸಾಧನೆಗೆ ಉಪನ್ಯಾಸಕರ ಕೊಡುಗೆಯು ತುಂಬಾ ಇದೆ. ತಂದೆ ಸ್ಟೀಲ್ ಅಂಗಡಿ ಇಟ್ಟುಕೊಂಡಿದ್ದಾರೆ. ತಾಯಿ ಗೃಹಿಣಿ. ಸದ್ಯ ಖಾಸಗಿ ಕಂಪನಿಯಲ್ಲಿ ಎಚ್ಆರ್ ಆಗಿ ಕೆಲಸ ಮಾಡುತ್ತಿದ್ದೇನೆ.
ಸಹನಾ ಗಣೇಶ್ ಶೇಟ್ 5 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ.