ರಾಜೀನಾಮೆ ನೀಡದಂತೆ ರಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿಮಾನಿಯಿಂದ ಪತ್ರ

KannadaprabhaNewsNetwork |  
Published : Sep 30, 2024, 01:26 AM ISTUpdated : Sep 30, 2024, 12:37 PM IST
29ಕೆಎಂಎನ್ ಡಿ21 | Kannada Prabha

ಸಾರಾಂಶ

ಡಿ.ದೇವರಾಜು ಅರಸು ನಂತರ ಅತಿ ಹೆಚ್ಚು ಸರ್ಕಾರಿ ಯೋಜನೆ ಬಡ ಜನರಿಗೆ ನೀಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ಬಡವರು, ದೀನ‌ ದಲಿತರ ಪರ ಕೆಲಸ ಮಾಡುತ್ತೀದ್ದೀರಿ. ಮೈಸೂರು ಮೂಡಾ ಹಗರಣದ ವಿಚಾರದಲ್ಲಿ ನೀವು ರಾಜೀನಾಮೇ ನೀಡಬಾರದು. ನಿಮ್ಮೋಂದಿಗೆ ನಾವಿದ್ದೇವೆ.

  ಮಂಡ್ಯ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಅಭಿಯಾನಿಯೊಬ್ಬರು ರಕ್ತದಲ್ಲಿ ಸಿದ್ದರಾಮಯ್ಯ ಅವರಿಗೆ ರಕ್ತ ಪತ್ರ‌ ಬರೆದಿದ್ದಾರೆ.

ತಾಲೂಕಿನ ಮೊತ್ತಹಳ್ಳಿ ಗ್ರಾಮದ ಸಚಿನ್ ರಕ್ತದಲ್ಲಿ ಪತ್ರ ಬರೆದಿರುವ ಅಭಿಮಾನಿ. ಸಿಎಂ ಸಿದ್ದರಾಮಯ್ಯ ಅವರ ಹುಚ್ಚು ಅಭಿಮಾನಿಯಾಗಿರುವ ಸಚಿನ್ ಕೈನಿಂದ ರಕ್ತ ತೆಗೆದು ನಂತರ ರಕ್ತದಲ್ಲಿ ಪತ್ರ ಬರೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಡಿ.ದೇವರಾಜು ಅರಸು ನಂತರ ಅತಿ ಹೆಚ್ಚು ಸರ್ಕಾರಿ ಯೋಜನೆ ಬಡ ಜನರಿಗೆ ನೀಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ಬಡವರು, ದೀನ‌ ದಲಿತರ ಪರ ಕೆಲಸ ಮಾಡುತ್ತೀದ್ದೀರಿ. ಮೈಸೂರು ಮೂಡಾ ಹಗರಣದ ವಿಚಾರದಲ್ಲಿ ನೀವು ರಾಜೀನಾಮೇ ನೀಡಬಾರದು. ನಿಮ್ಮೋಂದಿಗೆ ನಾವಿದ್ದೇವೆ. ರಾಜ್ಯ ಬಡ ಜನರಿದ್ದಾರೆ ಎಂದು ಅಪ್ಪಟ ಅಭಿಮಾನಿಯಾದ ಸಚಿನ್ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 124.06 ಅಡಿ

ಒಳ ಹರಿವು – 4,400 ಕ್ಯುಸೆಕ್

ಹೊರ ಹರಿವು – 4,105 ಕ್ಯುಸೆಕ್

ನೀರಿನ ಸಂಗ್ರಹ – 48.419 ಟಿಎಂಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!