ಯಲಬುರ್ಗಾ: ದುರಾಸೆ ತುಂಬಿದ ಬದುಕು ಒಳ್ಳೆಯದಲ್ಲ.ಮನುಜ ಸ್ವಾರ್ಥಕ್ಕೆ ಸಿಲುಕಿ ನಿಜ ಜೀವನ ಮರೆತಿದ್ದಾನೆ ಎಂದು ಕುಷ್ಟಗಿಯ ನಿಡಶೇಸಿ ಹಿರೇಮಠದ ಅಭಿನವ ಶ್ರೀ ಕರಿಬಸವ ಸ್ವಾಮೀಜಿ ಹೇಳಿದರು.
ಪ್ರತಿಯೊಬ್ಬ ಮನುಷ್ಯನು ಅಧ್ಯಾತ್ಮದ ಕಡೆಗೆ ಗಮನ ಹರಿಸಿದಾಗ ಮನಸ್ಸು ನೆಮದಿಯಾಗಿರುತ್ತದೆ. ಅಹಂಕಾರ ದೂರವಾಗುತ್ತದೆ. ಮಾನವ ಹಣ ಗಳಿಸಿದರೆ ಸಾಧಕನಾಗುವುದಿಲ್ಲ, ಗುಣದಿಂದ ಸಾಧಕನಾಗುತ್ತಾನೆ. ಜೀವನದಲ್ಲಿ ದಾನ ಧರ್ಮ ಮಾಡುವ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದರು.
ಯುವ ಜನಾಂಗ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಾನವ ಜನ್ಮ ಶ್ರೇಷ್ಠವಾದದ್ದು, ಭಗವಂತ ನೀಡಿದ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಭಕ್ತಿ ಮತ್ತು ಸೇವೆಗೆ ಗೆದಗೇರಿ ಹೆಸರಾಗಿದ್ದು, ಗ್ರಾಮದ ರಥೋತ್ಸವ ನೋಡಿದರೆ ಕೊಪ್ಪಳದ ಗವಿಸಿದ್ಧೇಶ್ವರನ ರಥ ನೋಡಿದ ಹಾಗೇ ಕಾಣುತ್ತದೆ. ಗ್ರಾಮದಲ್ಲಿ ಯುವಕರು ವ್ಯಸನಮುಕ್ತ ಬದುಕು ಕಟ್ಟಿಕೊಳ್ಳಬೇಕು ಎಂದರು.ಆಹಾರ ಇಲಾಖೆ ನಿರೀಕ್ಷಕ ಮಲ್ಲಿಕಾರ್ಜುನ ಶಾಸ್ತ್ರೀಮಠ, ಸಚಿನ್ ಗೋಣಿ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ ಕೊಪ್ಪದ, ಸುಭಾಷ ರಾಜೂರ, ಶಿವಯ್ಯ ಹಿರೇಮಠ, ಮಹಾಂತೇಶ ದೇಸಾಯಿ, ಹನುಮಂತರಾವ್ ಸಾಳುಂಕೆ, ಶರಣಪ್ಪ ಹಿರೇಮನಿ, ಪತ್ರಕರ್ತ ದೇವರಾಜ ದೊಡ್ಡಮನಿ, ವೀರಯ್ಯ ಹಿರೇಮಠ, ರುದ್ರಪ್ಪ ಕೊಪ್ಪದ, ಶಿವಕುಮಾರ ಮರಿಗೌಡರ, ರವಿ ದೊಡ್ಡಮನಿ ಮತ್ತಿತರರಿದ್ದರು.