ಪರಂಪರಾಗತ ಮೌಲ್ಯಗಳಿಗೆ ಒತ್ತು ನೀಡಿದ ಮಾದರಿ ದೇವಳ : ಭಟ್ಟಾರಕ ಸ್ವಾಮೀಜಿ

KannadaprabhaNewsNetwork |  
Published : Mar 04, 2025, 12:34 AM IST
32 | Kannada Prabha

ಸಾರಾಂಶ

ಸೋಮವಾರ ಪುತ್ತಿಗೆಯ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಶ್ರೀ ಜೈನಮಠ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶೈವ, ವೈಷ್ಣವ, ದ್ರಾವಿಡ ಹೀಗೆ ಹಲವು ಸಂಸ್ಕೃತಿಗಳಿಗೆ ಆಶ್ರಯವಿತ್ತ ಚೌಟ ಅರಸರ ಮನೆತನನಕ್ಕೆ ಸೇರಿದ ಪುತ್ತಿಗೆಯ ಸೋಮನಾಥನ ಸಾನಿಧ್ಯ ಅದ್ಭುತವಾಗಿ ಪುನಃನಿರ್ಮಾಣವಾಗಿದೆ. ಮೂಡುಬಿದಿರೆ ಜೈನ ಕಾಶಿಯಾದರೆ ಪುತ್ತಿಗೆ ದಕ್ಷಿಣಕನ್ನಡ ಜಿಲ್ಲೆಗೆ ಕಾಶಿಯಾಗಿ ಅರಳಿದೆ ಎಂದು ಶ್ರೀ ಜೈನಮಠ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.

ಸೋಮವಾರ ಪುತ್ತಿಗೆಯ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಶೀ ವಿಶ್ವನಾಥನ ಕ್ಷೇತ್ರದಿಂದ ತಂದಿದ್ದ ಪ್ರಸಾದವನ್ನು ಕುಲದೀಪ್ ಚೌಟರಿಗೆ ನೀಡಿ ಗೌರವಿಸಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಆಧ್ಯಾತ್ಮ ಆಸ್ತಿಕತೆಯನ್ನು ಬೆಳೆಸಿದರೆ ಆಧುನಿಕ ಶಿಕ್ಷಣದಲ್ಲಿ ನಾಸ್ತಿಕತೆಗೆ ಅವಕಾಶವಿದೆ ಎಂದರು.ಇತಿಹಾಸ ತಜ್ಞ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.

ಪುತ್ತಿಗೆ ಹಾಗೂ ಆಸುಪಾಸಿನ ಗ್ರಾಮಸ್ಥರ ಶ್ರಮದಾನ ಮೂರು ಕೋಟಿ ರು.ಗೂ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗಿದೆ ಎಂದು ಸುದರ್ಶನ ಎಂ. ಶ್ಲಾಘಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಡಿ.ಸುರೇಂದ್ರ ಕುಮಾರ್, ಚೌಟರ ಅರಮನೆ ವೀರೇಂದ್ರ ಎಂ. ಚಾವಡಿ ಮನೆ ಜಗನ್ನಾಥ ಶೆಟ್ಟಿ, ನಿಡೋಡಿ ಶ್ರೀ ಜಗನ್ನಾಥ ಡಿ. ಶೆಟ್ಟಿ, ಹಡಿಂಜೆಗುತ್ತು ಅಮರನಾಥ ಡಿ. ಶೆಟ್ಟಿ, ಜಗದೀಶ ಅಧಿಕಾರಿ, ಸುದರ್ಶನ ಎಂ, ವೈಭವ್ ಜಯರಾಮ ಹೆಗ್ಡೆ, ಕೊಡ್ಕಡ್ಕ ಶ್ರೀ ಸುದರ್ಶನ್ ಎಂ., ಮೂಡುಬಿದಿರೆ, ಎಂ. ಬಾಹುಬಲಿ ಪ್ರಸಾದ್, ವಜ್ರನಾಭ ಶೆಟ್ಟಿ, ಅರ್ಕುಳಬೀಡು, ರಾಮಮೂರ್ತಿ ಉಡುಪ , ಕುಂಗೂರು, ತಹಸೀಲ್ದಾರ್ ಪ್ರದೀಪ್ ಕುರ್ಡೇಕ‌ರ್ ಅತಿಥಿಗಳಾಗಿದ್ದರು.

ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು.

ಉಪನ್ಯಾಸಕಿ ಡಾ. ಸುಧಾರಾಣಿ ನಿರೂಪಿಸಿದರು.

ಬಳಿಕ ಭರತನಾಟ್ಯ, ನಾಟ್ಯ ವೈಭವ, ಗೀತಾ ಸಾಹಿತ್ಯ ಸಂಭ್ರಮ, ಸಂಗೀತ ಲಹರಿ, ಸಾಂಸ್ಕೃತಿಕ ಕಲಾಪಗಳು ಜರಗಿದವು. ದಿನಪೂರ್ತಿ ಭಜನಾ ಕಾರ್ಯಕ್ರಮಗಳು ಜರಗಿದವು.

ಅಮ್ಮನವರ ಆಲಯ ಪ್ರತಿಷ್ಠೆ:

ಸೋಮವಾರ ಪೂರ್ವಾಹ್ನ ವೈದಿಕ ಕಾರ್ಯಕ್ರಮದ ಅಂಗವಾಗಿ ದಿವಾಗಂಟೆ 7.49ರ ಮೀನ ಲಗ್ನ ಸುಮುಹೂರ್ತದಲ್ಲಿ ನೂತನ ದೇವಾಲಯದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರಿಗೆ ಹೊಸದಾಗಿ ಪ್ರತ್ಯೇಕ ಗುಡಿಯ ಶಿಖರ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ,ಮಹಾಗಣಪತಿ ಪ್ರತಿಷ್ಠೆ ಅಷ್ಟಬಂಧ ಲೇಪನ, ನಿದ್ರಾಕುಂಭಾಭಿಷೇಕ, ದೈವಗಳ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಕಲಶಾಭಿಷೇಕ, ಐಕ್ಯಮತ್ಯಭಾಗ್ಯಸೂಕ್ತ ಹೋಮ, ಪ್ರಾಯಶ್ಚಿತ್ತ ಹೋಮಗಳು ಜರಗಿದವು. ಸಂಜೆ ದಿಶಾಹೋಮಗಳು, ಬಲಿಶಿಲಾಪ್ರತಿಷ್ಠೆಗಳು, ಮಹಾಬಲಿಪೀಠ ಪ್ರತಿಷ್ಠೆ, ಕ್ಷೇತ್ರಪಾಲ ಪ್ರತಿಷ್ಠೆ, ದೈವಗಳಿಗೆ ಕಲಶಾಭಿಷೇಕ, ಪರ್ವಸೇವೆ ನಡೆಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌