ಶಿವಾನಂದ ಮಲ್ಲನಗೌಡರ
ಬ್ರಿಟೀಷರ ಗುಂಡಿಗೆ ಎದೆಯೊಡ್ಡಿದ್ದ ದೇಶಭಕ್ತ ಮೈಲಾರ ಮಹದೇವ ಜನಿಸಿದ ಮೋಟೆಬೆನ್ನೂರಿನಿಂದಲೇ ಈಗ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆಯೊಂದು ಮೊಳಗಿದ್ದು, ಸ್ವಾತಂತ್ರ್ಯ ಸೇನಾನಿಗಳ ನಾಡಿನಲ್ಲಿ ಪಾಕಿಸ್ತಾನಿ ಅಭಿಮಾನಿಯ ಘೋಷಣೆ ಬ್ಯಾಡಗಿ ಸೇರಿದಂತೆ ಹಾವೇರಿ ಜಿಲ್ಲೆಗೆ ಕಳಂಕ ತಂದಿದೆ.
ಹೌದು! ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಹೇಳಿಕೆ ನೀಡಿದ ಆರೋಪದ ಮೇಲೆ ಇದೀಗ ಬಂಧನವಾಗಿರುವ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿ ಮಹ್ಮದ್ಶಫಿ ನಾಶಿಪುಡಿ ಮೋಟೆಬೆನ್ನೂರಿನಲ್ಲಿ ಕೋಲ್ಡ್ ಸ್ಟೋರೇಜ್, ಮೆಣಸಿನಕಾಯಿ ಕ್ವಾಲಿಟಿ ಖಾರದಪುಡಿ ಮಿಷನ್ ಸೇರಿದಂತೆ ಇತರ ತನ್ನ ಎಲ್ಲ ವ್ಯವಹಾರಗಳನ್ನು ಮೋಟೆಬೆನ್ನೂರಿಂದಲೇ ಮಾಡುತ್ತಿದ್ದು ಮೇಲಿನ ಮಾತುಗಳಿಗೆ ಪುಷ್ಟಿ ನೀಡುವಂತಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಪ್ಪುಚುಕ್ಕೆ:
ಕ್ರಿಮಿನಲ್ ಹಿನ್ನೆಲೆ:
ಆರೋಪಿ ಸೈಯದ್ ನಾಶಿಪುಡಿ ಇಡೀ ಕುಟುಂಬವೇ ಕಳೆದ ಐದಾರು ದಶಕದಿಂದ ಮೆಣಸಿನಕಾಯಿ ವ್ಯಾಪಾರದಲ್ಲಿ ತೊಡಗಿದೆ. ಅದಾಗ್ಯೂ ಚಿಕ್ಕ ವಯಸ್ಸಿನಿಂದಲೇ ಮೆಣಸಿನಕಾಯಿ ವ್ಯವಹಾರ ಮಾಡುತ್ತಿದ್ದ ನಾಶಿಪುಡಿ, ನೂರಾರು ಕೋಟಿ ಮೆಣಸಿನಕಾಯಿ ವ್ಯವಹಾರ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಾಶಿಪುಡಿ ಆರೋಪವನ್ನು ತಳ್ಳಿಹಾಕಿದ್ದರು. ಆಣೆಯನ್ನೂ ಮಾಡಿದ್ದರು. ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಹಾಕಿಲ್ಲ. ವಿಧಾನಸೌಧದಲ್ಲಿ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ. ಈ ಕುರಿತು ಯಾವುದೇ ತನಿಖೆಗೂ ನಾನು ಸಿದ್ಧ ಎಂದು ತಿಳಿಸಿದ್ದರು. ಬಳಿಕ ಧ್ವನಿ ಪರೀಕ್ಷೆಗಾಗಿ ಬ್ಯಾಡಗಿಯಿಂದ ನಾಶಿಪುಡಿಯನ್ನು ವಿಧಾನಸೌಧ ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದರು. ಈಗ ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಾಕಿರುವುದು ದೃಢಪಟ್ಟಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.
ಇತ್ತ ನಾಶಿಪುಡಿ ಬಂಧನವಾಗುತ್ತಿದ್ದಂತೆ ಪಟ್ಟಣದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಾರಣವಿಷ್ಟೇ ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆ ಪ್ರಮುಖ ವ್ಯಾಪಾರಿಯಾಗಿದ್ದ ಮಹ್ಮದ್ ಶಫಿ ಯಾವ ಉದ್ದೇಶದಿಂದ ಹೀಗೆ ಹೇಳಿದ ಎಂಬ ಪ್ರಶ್ನೆಗಳನ್ನು ಅವರವರೇ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇನ್ನೂ ಕೆಲ ವರ್ತಕರು ಮಾರುಕಟ್ಟೆಯಲ್ಲಿ ಈತನ ಜೊತೆಗೆ ವಹಿವಾಟು ಮಾಡುವುದು ಹೇಗೆ ಎಂಬ ಚರ್ಚೆಗಳಲ್ಲಿ ತೊಡಗಿದ್ದಾರೆ.
ಮನೆಯಿಂದ ಹೊರಬಾರದ ಸದಸ್ಯರು:
ಮೌನಕ್ಕೆ ಜಾರಿದ ಅಂಜುಮನ್:
ಇತ್ತೀಚೆಗೆ ನಡೆದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಬಂದಿದ್ದ 11 ಜನ ಸದಸ್ಯರಲ್ಲಿ ಮಹ್ಮದ್ ಶಫಿ ಒಬ್ಬನಾಗಿದ್ದ. ಆದರೆ ನಾಶಿಪುಡಿ ಬಂಧನದಿಂದ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಮೌನಕ್ಕೆ ಜಾರಿದ್ದು, ಅವರ ಮುಂದಿನ ನಡೆಯನ್ನು ಕಾದು ನೋಡಬೇಕಾಗಿದೆ.