ತಿಂಗಳ ಉಪವಾಸದಿಂದ ವ್ಯಕ್ತಿ ಸಹನಾಮಯಿ

KannadaprabhaNewsNetwork |  
Published : Apr 01, 2025, 12:47 AM IST
ಆಸಾರ ಶರೀಫ ಮಸೀದಿಯಲ್ಲಿ ಮುಸ್ಲಿಂ ಬಾಂಧವರ ಪ್ರಾರ್ಥನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಉಪವಾಸದ ಒಂದು ತಿಂಗಳಲ್ಲಿ ವ್ಯಕ್ತಿ ಶಿಸ್ತು, ಸಂಯಮ, ಒಳಿತುಗಳನ್ನು ರೂಢಿಸಿಕೊಂಡು ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಡುತ್ತಾನೆ. ಹಸಿವು ದಾಹವನ್ನು ಸಹಿಸುವ ಸಹನಾಮಯಿಯಾಗುತ್ತಾನೆ ಎಂದು ಮೌಲಾನಾ ಸೈಯ್ಯದ ಪೈಸಲ್ ಸಕಾಫ ಸಾದಾತ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಉಪವಾಸದ ಒಂದು ತಿಂಗಳಲ್ಲಿ ವ್ಯಕ್ತಿ ಶಿಸ್ತು, ಸಂಯಮ, ಒಳಿತುಗಳನ್ನು ರೂಢಿಸಿಕೊಂಡು ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಡುತ್ತಾನೆ. ಹಸಿವು ದಾಹವನ್ನು ಸಹಿಸುವ ಸಹನಾಮಯಿಯಾಗುತ್ತಾನೆ ಎಂದು ಮೌಲಾನಾ ಸೈಯ್ಯದ ಪೈಸಲ್ ಸಕಾಫ ಸಾದಾತ ಹೇಳಿದರು.ನಗರದ ಆಸಾರ ಶರೀಫ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಮಾತನಾಡಿದ ಅವರು, ಕೆಡುಕಗಳಿಂದ ದೂರವಿದ್ದು ಕೆಡಕು ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡುತ್ತಾರೆ. ಇಸ್ಲಾಮಿನ ಮಾನವೀಯ ಮೌಲ್ಯಗಳು ವಿಶ್ವಕ್ಕೆಲ್ಲ ಆದರ್ಶವಾಗಿದೆ. ಇಸ್ಲಾಮ ಅರಿಯದವನು ಹಾಗೂ ಸಮಾಜ ಘಾತುಕ ಕಾರ್ಯಗಳಲ್ಲಿ ತೊಡಗಿದರೆ ಅವನು ಇಸ್ಲಾಮಿಯನು ಅಲ್ಲ, ಮಾನವನೂ ಅಲ್ಲ. ಒಂದು ತಿಂಗಳು ಉಪವಾಸ ಮಾಡಿದ ನಂತರ ಇಡೀ ವರ್ಷದ ಉದ್ದಕ್ಕೂ ಮಾನವೀಯ ಮೌಲ್ಯ ಕಾಪಾಡಬೇಕು. ಈದ್ ಅಂದರೆ ಸಂತೋಷವು ಹೌದು, ಜವಾಬ್ದಾರಿಯು ಹೌದು ಎಂದು ಹೇಳಿದರು.

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಆಜಾದ ಪಟೇಲ, ಮುಖಂಡರಾದ ಜಾವೀದ ಕಿಲ್ಲೆದಾರ, ಜಮೀರ ಬಾಗಲಕೋಟ, ಅನೀಷ ಬಂತೋಜಿ, ಮೌಲಾನಾ ಖಾದಿಂ, ಮುಕ್ತಾರ ದಖನಿ, ಸೈಯ್ಯದ ಮುಸ್ತಪಾ ಖಾದರಿ, ಸೈಯ್ಯದ ಶಹಾ ಆಲೇರ ಸಕಾಫ ಸಾದಾತ, ಷೈಯ್ಯದ ಪೆಸಲ್ ಸಕಾಫ ಸಾದಾತ, ಸೈಯ್ಯದ ಅತಿಕುರ್ರ ರಹಮಾನ ಸಕಾಫ ಸಾದಾತ, ಸೈಯ್ಯದ ವಾದಿದ ಸಕಾಫ ಸಾದಾತ, ಸೈಯ್ಯದ ಮುರ್ತುಜಾ ಖಾದ್ರಿ ಸಕಾಫ ಸಾದಾತ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್