ಕಲಾದಗಿ:ಶಿವಾಜಿ ಮಹಾರಾಜರ ಜಂತ್ಯೋತ್ಸವ ಹಾಗು ಶ್ರೀರಾಮ ನವಮಿಯ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆ ಸಂಭ್ರಮೊಲ್ಲಾಸಗಳಿಂದ ನಡೆಯಿತು.
ಮೆರವಣಿಗೆಯಲ್ಲಿದ್ದ ಆಳೆತ್ತರ ಶಿವಾಜಿ ಮಹರಾಜರ ಮೂರ್ತಿ ಹಾಗೂ ಶ್ರೀರಾಮದೇವರ ಮೂರ್ತಿಯನ್ನು ಅಲಂಕರಿಸಿದ್ದ ವಾಹನ ಮನೆಯಮುಂದೆ ಬರುತ್ತಿದ್ದಂತೆ ಶಿವಾಜಿ ಮಹರಾಜರ ಮೂರ್ತಿ ಹಾಗು ಶ್ರೀರಾಮದೇವರಿಗೆ ಪುಷ್ಪಾರ್ಚನೆ ಮಾಡುತ್ತಿದ್ದ ಮನೆ ಮನೆಯವರು ಅದರೊಂದಿಗೆ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿ ಮೆರೆದರು.ಮೆರವಣಿಗೆ ಯುದ್ದಕ್ಕೂ ಅಲ್ಲಲ್ಲಿ ನಿಂತಿದ್ದ ರಾಷ್ಟ್ರಪುರುಷರ ವೇಷಧಾರಿ ಮಕ್ಕಳು ಗಮನಸೆಳೆದರು.
ಮಾರ್ಗದುದ್ದಕ್ಕೂ ಸಿಡಿಯುತ್ತಿದ್ದ ಪಟಾಕಿಗಳು,ಯುವಪಡೆಯಿಂದ ಕೇಳಿಬರುತ್ತಿದ್ದ ದೇಶಭಕ್ತಿಯನ್ನು ತೋರುವ ಘೋಷಣೆಗಳು,ಹಾಡುಗಳು ಇಡೀ ಶೋಭಾಯಾತ್ರೆಗೆ ತನ್ನದೇ ಆದ ಜೋಶ್ ತಂದಿದ್ದವು.ಗ್ರಾಮವನ್ನೊಳಗೊಂಡಂತೆ ಆಸುಪಾಸಿನ ಊರುಗಳಿಂದ ಆಗಮಿಸಿದ್ದ ಯುವಪಡೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಗ್ರಾಮದ ಪಾಂಡುರಂಗ ಗುಡಿಯಿಂದ ಹೊರಟ ಶೋಭಾಯಾತ್ರೆ ಹೆಣ್ಣುಮಕ್ಕಳ ಶಾಲೆ,ಗಡ್ಡಿ ಓಣಿ,ಹೊಸೂರ ಕ್ರಾಸ್,ಕೊಬ್ರೀ ಕ್ರಾಸ್,ಪಂಚಾಯತ್,ದೊಡ್ಡ ಮಸೀದಿ,ಬಸವೇಶ್ವರ ವೃತ್ತದ ಮೂಲಕ ಸಾಗಿ ಬಸ್ಸ್ನಿಲ್ದಾಣದ ಆವರಣದಲ್ಲಿ ಸಮಾಪನಗೊಂಡಿತು.