ಅಡುಗೆ ಮನೆಗೆ ನುಗ್ಗಿದ ಕಾಳಿಂಗ ಸರ್ಪ

KannadaprabhaNewsNetwork |  
Published : May 25, 2024, 12:47 AM IST
ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪದ ಡಿ.ಮಂಜುನಾಥ ಗೌಡ ಎಂಬವರ ಮನೆಯ  ಅಡಿಗೆ ಮನೆಗೆ ನುಗ್ಗಿದ 12 ಅಡಿ ಉದ್ದದ ಕಾಳಿಂಗ ಹಾವು | Kannada Prabha

ಸಾರಾಂಶ

ನರಸಿಂಹರಾಜಪುರ: ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಸಂಜೆ 6.30ರ ಸಮಯದಲ್ಲಿ 12ಅಡಿ ಉದ್ದದ ಕಾಳಿಂಗ ಸರ್ಪ ಡಿ. ಮಂಜುನಾಥ ಗೌಡ ಎಂಬುವರ ಮನೆಯ ಅಡುಗೆ ಮನೆಗೆ ನುಗ್ಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು.

ನರಸಿಂಹರಾಜಪುರ: ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಸಂಜೆ 6.30ರ ಸಮಯದಲ್ಲಿ 12ಅಡಿ ಉದ್ದದ ಕಾಳಿಂಗ ಸರ್ಪ ಡಿ. ಮಂಜುನಾಥ ಗೌಡ ಎಂಬುವರ ಮನೆಯ ಅಡುಗೆ ಮನೆಗೆ ನುಗ್ಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು. ಮಂಜುನಾಥ ಗೌಡ ಅವರು ಸಂಜೆ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಹರಡಲು ಹಿಂಬದಿಯ ಬಾಗಿಲು ತೆಗೆಯುತ್ತಿದ್ದಂತೆ ದಿಢೀರನೇ ಮನೆ ಒಳಗೇ ನುಗ್ಗಿದ ಕಾಳಿಂಗ ಸರ್ಪ ಅಡುಗೆ ಮನೆಗೆ ಹೋಗಿ ಮಲಗಿದೆ. ಗಾಬರಿಯಾದ ಮನೆಯವರು ತಕ್ಷಣ ಕುದುರೆ ಗುಂಡಿಯ ಉರಗ ತಜ್ಞ ಪಿ.ಜಿ.ಹರೀಂದ್ರ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರುಗ ತಜ್ಞ ಪಿ.ಜಿ.ಹರೀಂದ್ರ ಕಾಳಿಂಗ ಸರ್ಪಕ್ಕೆ ಪೆಟ್ಟಾಗದಂತೆ ಹಿಡಿದು ಅರಣ್ಯ ಇಲಾಖೆ ಸಲಹೆಯಂತೆ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ