ಅಕ್ಕ ಸಮ್ಮೇಳನದಲ್ಲಿ ಕನ್ನಡದ ಸಾಧಕರ ಹೆಸರಲ್ಲಿ ವೇದಿಕೆ

KannadaprabhaNewsNetwork |  
Published : Sep 04, 2026, 02:00 AM IST
ಅಕ್ಕ ಸಮ್ಮೇಳನ | Kannada Prabha

ಸಾರಾಂಶ

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಮೇರು ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಸಮ್ಮೇಳನದ ಪ್ರಮುಖ ಸಭಾಂಗಣಗಳಿಗೆ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಫಿಲಿಡೆಲ್ಫಿಯಾ

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಮೇರು ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಸಮ್ಮೇಳನದ ಪ್ರಮುಖ ಸಭಾಂಗಣಗಳಿಗೆ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ. ಮುಖ್ಯ ಸಾಂಸ್ಕೃತಿಕ ಸಭಾಂಗಣಕ್ಕೆ ‘ಡಾ. ಪುನೀತ್ ರಾಜ್‌ಕುಮಾರ್ ವೇದಿಕೆ’ ಎಂದು ಹೆಸರಿಡಲಾಗಿದ್ದರೆ, ಉಳಿದಂತೆ ‘ಎಸ್. ಜಾನಕಿ ವೇದಿಕೆ’, ‘ಸಾಲುಮರದ ತಿಮ್ಮಕ್ಕ ವೇದಿಕೆ’ ಹಾಗೂ ಕಿರುಚಲನಚಿತ್ರೋತ್ಸವ ಸಭಾಂಗಣಕ್ಕೆ ‘ಶಂಕರ್‌ನಾಗ್ ವೇದಿಕೆ’ ಎಂದು ನಾಮಕರಣ ಮಾಡಲಾಗಿದೆ.ಯುವಜನತೆ ಮತ್ತು ವೃತ್ತಿಪರರಿಗೆ ಆದ್ಯತೆ

ವಿದೇಶಗಳಲ್ಲಿ ಬೆಳೆಯುತ್ತಿರುವ ಎರಡನೇ ತಲೆಮಾರಿನ ಯುವ ಕನ್ನಡಿಗರನ್ನು ಕನ್ನಡ ಸಂಸ್ಕೃತಿ ಮತ್ತು ವೃತ್ತಿಪರ ಜಗತ್ತಿಗೆ ಬೆಸೆಯಲು ಈ ಬಾರಿಯ ಸಮ್ಮೇಳನದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರ ಕಂಡುಕೊಳ್ಳಲು ಯುವ ತಂತ್ರಜ್ಞರಿಗಾಗಿ ಹ್ಯಾಕ್4ಗುಡ್ ಹ್ಯಾಕಥಾನ್ ಸ್ಪರ್ಧೆ, ಉನ್ನತ ಶಿಕ್ಷಣ, ಕಾರ್ಪೊರೇಟ್ ಉದ್ಯೋಗಾವಕಾಶಗಳು ಹಾಗೂ ವೃತ್ತಿಜೀವನದ ಮಾರ್ಗದರ್ಶನಕ್ಕಾಗಿ ಅಕ್ಕ ಕೆರಿಯರ್ ಕನೆಕ್ಟ್ ಆಯೋಜಿಸಲಾಗಿದೆ. ವಾಣಿಜ್ಯ ಹೂಡಿಕೆ ಸಮಾಲೋಚನೆ

ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯನ್ನು ವೃದ್ಧಿಸುವ ಉದ್ದೇಶದಿಂದ ಬಿಸಿನೆಸ್ ಫೋರಂ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ, ವೈದ್ಯಕೀಯ ಮತ್ತು ದಂತವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ ವೈದ್ಯರಿಗಾಗಿ ಮೆಡಿಕಲ್ ಮತ್ತು ಡೆಂಟಲ್ ಸಿಎಂಇ ಸಮಾವೇಶಗಳನ್ನು ಆಯೋಜಿಸಲಾಗಿದೆ.ಸಾಂಸ್ಕೃತಿಕ ವೈಭವ

ಗಾಯನ ಪ್ರತಿಭೆಗಳಿಗಾಗಿ ಅಕ್ಕ ಐಡಲ್ 2026 ಸ್ಪರ್ಧೆ ಹಾಗೂ 20ಕ್ಕೂ ಹೆಚ್ಚು ಆಯ್ದ ಕಿರುಚಿತ್ರಗಳ ಪ್ರದರ್ಶನ ಒಳಗೊಂಡ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ನಡೆಯಲಿದೆ. ಇದರೊಂದಿಗೆ ಮಹಿಳಾ ಸಬಲೀಕರಣ ಗೋಷ್ಠಿಗಳು ಮತ್ತು ಯುವಜನರ ಸಂವಾದಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೂಟೌಟ್‌: ಘಟನಾ ಸ್ಥಳಕ್ಕೆ ಸಿಐಡಿ ಎಸ್‌ಪಿ
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ