ಹಿರಿಯೂರು ಮುಖ್ಯ ರಸ್ತೆಯಲ್ಲಿ ನೆಲೆ ನಿಂತ ಕೃಷ್ಣ । ತಾಲೂಕು, ಪುರಸಭೆ ಆಡಳಿತದ ಮೇಲೆ ಅನುಮಾನಕನ್ನಡಪ್ರಭ ವಾರ್ತೆ ಹೊಸದುರ್ಗ
ಯಾರು ಪ್ರತಿಷ್ಠಾಪನೆ ಮಾಡಿದರು ಎಂಬುದಕ್ಕೆ ಪೊಲೀಸರ ಬಳಿಯಾಗಲೀ, ಸ್ಥಳೀಯ ಆಡಳಿತದಲ್ಲಾಗಲಿ ಯಾವುದೇ ಕುರುಹುಗಳಿಲ್ಲ. ಹೊಸದುರ್ಗದಲ್ಲಿ ಯಾರು ಎಲ್ಲಿ ಬೇಕಾದರೂ ಸಮುದಾಯದ ಮಹನೀಯರ ಪ್ರತಿಮೆಗಳನ್ನು ರಾತ್ರೋ ರಾತ್ರಿ ಪ್ರತಿಷ್ಠಾಪಿಸಬಹುದು. ಇಂತಹ ಸನ್ನಿವೇಶಕ್ಕೆ ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ಅವಕಾಶ ಕೊಟ್ಟಿತಾ ಎಂಬ ಅನುಮಾನಗಳು ಮೂಡಿವೆ.
ಹೊಸದುರ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಪುರಸಭೆ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಮೀಸಲಿಟ್ಟಿತ್ತು. ಇದೇ ಪ್ರದೇಶದಲ್ಲಿನ ಹಿರಿಯೂರು ಮುಖ್ಯ ರಸ್ತೆಯ ಭಾಗದಲ್ಲಿ ರಾತ್ರೋ ರಾತ್ರಿ ಶ್ರೀ ಕೃಷ್ಣನ ಪ್ರತಿಮೆ ಸ್ಥಾಪಿಸಲಾಗಿದೆ.ಜಾಗದ ಬಗ್ಗೆಯೂ ಸ್ಪಷ್ಪತೆ ಇಲ್ಲ: ಶ್ರೀ ಕೃಷ್ಣಾ ಪ್ರತಿಮೆ ಸ್ಥಾಪನೆಗೆ ಸರ್ಕಾರ ಹಾಗೂ ಪುರಸಭೆಯಿಂದ ಅನುಮತಿ ಪಡೆಯಲಾಗಿದೆಯಾ ಎನ್ನುವುದಕ್ಕೆ ಯಾವುದೇ ಅಧಿಕಾರಿಗಳ ಬಳಿ ಉತ್ತರವಿಲ್ಲ. ಅಲ್ಲದೆ ಜಾಗ ಯಾರಿಗೆ ಸೇರಿದ್ದೂ ಎನ್ನುವುದು ಅಧಿಕಾರಿಗಳಿಗೆ ಗೊತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿಯವರು ಸರ್ವೆ ನಂಬರನಲ್ಲಿದೆ. ಆದರೆ ಪುರಸಭೆ ದಾಖಲೆಯಲ್ಲಿಲ್ಲ ಎಂದು ಹೇಳುತ್ತಿದ್ದು, ತಹಸೀಲ್ದಾರ್ ಅವರು ಶ್ರೀಕೃಷ್ಣಾ ಪ್ರತಿಮೆ ಸ್ಥಾಪಿಸಿದ ಸ್ಥಳ ಅದು ಕೆರೆ ಅಂಗಳವಾಗಿದ್ದು, ಈ ಕುರಿತು ದಾಖಲೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಚಿತ್ರದುರ್ಗದಲ್ಲಿಯೂ ಇವೆ ಉದ್ಭವ ಮೂರ್ತಿಗಳು:
ಇದಲ್ಲದೆ ಚಿತ್ರದುರ್ಗದಿಂದ ಹೊಳಲ್ಕೆರೆಗೆ ತೆರಳುವ ಮಾರ್ಗದಲ್ಲಿ ಮಂಗಳೂರು-ಸೊಲ್ಲಾಪುರ ಹೆದ್ದಾರಿ ಕೂಡುವ ಮಾರ್ಗದಲ್ಲಿ ತ್ರಿಕೋನಾಕಾರದ ಭೂಮಿ ಖಾಲಿ ಉಳಿದಿತ್ತು. ಆರು ತಿಂಗಳ ಹಿಂದೆ ರಾತ್ರೋ ರಾತ್ರಿ ಇಲ್ಲಿ ಶ್ರೀಕೃಷ್ಣನ ಪ್ರತಿಮೆ ನಿಲ್ಲಿಸಲಾಗಿದೆ. ಯಾರ ಅನುಮತಿಯನ್ನು ಪಡೆಯಲಾಗಿಲ್ಲ. 4 ದಿನದ ಹಿಂದೆ ನಡೆದ ಶ್ರೀೃಷ್ಣ ಜಯಂತಿಯನ್ನುಇದೇ ವೃತ್ತದಲ್ಲಿ ಆಚರಿಸಲಾಗಿತ್ತು. ಹೆಚ್ಚು ಕಡಿಮೆ ಇದು ಅಧೀಕೃತವಾದಂತಾಗಿದೆ.