ಅಗಲಿದ ವೀರ ಯೋಧನಿಗೆ ಸ್ನೇಹಿತ ಬಳಗದಿಂದ ಪುತ್ಥಳಿ ನಿರ್ಮಾಣ

KannadaprabhaNewsNetwork |  
Published : Nov 09, 2025, 02:00 AM IST
8ಕೆಎಂಎನ್ ಡಿ20 | Kannada Prabha

ಸಾರಾಂಶ

ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮರಣ ಹೊಂದಿದ್ದ ಕಿಕ್ಕೇರಿ ಪಟ್ಟಣದ ಯೋಧ ಜನಾರ್ಧನಗೌಡರ ಶಾಶ್ವತ ನೆನಪಿನಲ್ಲಿರುವಂತೆ ಮಾಡಲು ಸ್ನೇಹಿತ ಬಳಗದ ಕಿಕ್ಕೇರಮ್ಮ ಷಟಲ್‌ ಕಾಕ್‌ ಕ್ಲಬ್, ಗ್ರಾಮಸ್ಥರ ಸಹಕಾರದಲ್ಲಿ ಯೋಧನ ಪುತ್ಥಳಿ ಅನಾವರಣಗೊಳಿಸಲು ಭರದ ಸಿದ್ಧತೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮರಣ ಹೊಂದಿದ್ದ ಪಟ್ಟಣದ ಯೋಧ ಜನಾರ್ಧನಗೌಡರ ಶಾಶ್ವತ ನೆನಪಿನಲ್ಲಿರುವಂತೆ ಮಾಡಲು ಸ್ನೇಹಿತ ಬಳಗದ ಕಿಕ್ಕೇರಮ್ಮ ಷಟಲ್‌ ಕಾಕ್‌ ಕ್ಲಬ್, ಗ್ರಾಮಸ್ಥರ ಸಹಕಾರದಲ್ಲಿ ಯೋಧನ ಪುತ್ಥಳಿ ಅನಾವರಣಗೊಳಿಸಲು ಭರದ ಸಿದ್ಧತೆ ನಡೆಯುತ್ತಿದೆ.

ಜಾನು ಎಂದು ಚಿರಪರಿಚಿತರಾಗಿದ್ದ ಜನಾರ್ಧನಗೌಡರ ಪುತ್ಥಳಿಯನ್ನು ಭಾನುವಾರ ಬೆಳಗ್ಗೆ 9ಕ್ಕೆ ಅರಳಿಕಟ್ಟೆ ವೃತ್ತದ ಬಳಿಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಗ್ರಂಥಾಲಯದ ಬಳಿ ಅನಾವರಣಗೊಳ್ಳಲಿದೆ.

ರೈತ ಕುಟುಂಬದ ಭಾರತಿ- ಪ್ರಕಾಶ್‌ ಅವರ ಪುತ್ರರಾದ ಯೋಧ ಜನಾರ್ಧನಗೌಡ 2023ರ ಜೂನ್ ನಲ್ಲಿ ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ಮೃತರಾದರು. 2014ರಿಂದಲೂ ಸೇವೆ ಸಲ್ಲಿಸಿದ್ದರು. ರಜೆ ವೇಳೆ ಗ್ರಾಮಕ್ಕೆ ಬರುವಾಗ ಸ್ನೇಹಿತರೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ವಾಲಿಬಾಲ್, ಷಟಲ್‌ ಕಾಕ್ ಪರಿಕರಗಳನ್ನು ತರುತ್ತಿದ್ದರು. ಸ್ನೇಹಿತರೊಂದಿಗೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದರು.

ಯೋಧರ ಮಕ್ಕಳಿಗೆ ಉದ್ಯೋಗ ಶಿಕ್ಷಣದಲ್ಲಿ ವಿಫುಲ ಅವಕಾಶ ಇರುವುದನ್ನು ಪರಿಚಯ ಮಾಡಿಕೊಡುತ್ತಿದ್ದರು. ಬಾಕ್ಸಿಂಗ್ ಪಟುವಾಗಿ ಅಂತಾ ರಾಜ್ಯ ಬಾಕ್ಸಿಂಗ್‌ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿ 2ನೇ ಸ್ಥಾನ ಪಡೆದಿದ್ದರು. ಎನ್‌ಸಿಸಿಯಲ್ಲಿ ವಿಶೇಷ ಹೆಸರು ಗಳಿಸಿದ್ದರು.

ಜಾನು ಸ್ನೇಹಿತ ಬಳಗ ಯಾವುದೇ ಅನುದಾನ ಬಯಸದೆ ಪುತ್ಥಳಿ ನಿರ್ಮಾಣ ಮಾಡಿಸಿದೆ. ನ.9ರ ಸರಳ ಕಾರ್ಯಕ್ರಮಕ್ಕೆ ಶಾಮಿಯಾನ, ಧ್ವನಿವರ್ಧಕ, ಪುಷ್ಪಗಳಿಂದ ಅಲಂಕಾರ ನಡೆಯುತ್ತಿದೆ. ಕ್ಲಬ್ ಸದಸ್ಯರು, ಗಾರೆ ಕೆಲಸದವರೊಂದಿಗೆ ಸೇರಿಕೊಂಡು ಜಲ್ಲಿತಟ್ಟಿ ಸಮತಟ್ಟು, ಗಾರೆ ಹಾಕುವ ಕೆಲಸ, ಕಸ ಕುಡಿಸುವ ಕೆಲಸ ಮಾಡಿ ಇಡೀ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ.

ಕ್ಲಬ್‌ ಅಧ್ಯಕ್ಷ ದಿನೇಶ್‌ಬಾಬು, ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಕುಮಾರಸ್ವಾಮಿ, ಕೆ.ಪಿ.ಮಧುಕರ್, ಮಂಜುನಾಥ್, ಎಲ್.ಎಸ್.ಧರ್ಮಪ್ಪ, ಹೈಕೋರ್ಟ್ ಅಪರ ಸರ್ಕಾರಿ ವಕೀಲ ಕೆ.ಪಿ.ಯೋಗಣ್ಣ, ಯೋಧನ ತಂದೆ ಪ್ರಕಾಶ್, ಸಹೋದರ ಕೆ.ಪಿ.ಮಹೇಂದ್ರ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ