ನಿರಂತರ ಮಳೆಗೆ ಗಡಿಗೇಶ್ವರ ಶಾಲೆ ಮೇಲೆ ಉರುಳಿದ ಮರ

KannadaprabhaNewsNetwork |  
Published : Jul 22, 2024, 01:26 AM IST
ನರಸಿಂಹರಾಜಪುರ ತಾಲೂಕಿನ ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆಯ ಅಡಿಗೆ ಮನೆಯ ಕೊಠಡಿಯ ಮೇಲೆ ಮರ ಉರುಳಿ ಬಿದ್ದಿದೆ | Kannada Prabha

ಸಾರಾಂಶ

ನರಸಿಂಹರಾಜಪುರ: ಶನಿವಾರ ಕಡಿಮೆಯಾಗಿದ್ದ ಮಳೆ ಮತ್ತೆ ಪ್ರಾರಂಭವಾಗಿದ್ದು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಟ್ಟು ಬಿಡದೆ ಸುರಿದಿದೆ.

ನರಸಿಂಹರಾಜಪುರ: ಶನಿವಾರ ಕಡಿಮೆಯಾಗಿದ್ದ ಮಳೆ ಮತ್ತೆ ಪ್ರಾರಂಭವಾಗಿದ್ದು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಟ್ಟು ಬಿಡದೆ ಸುರಿದಿದೆ.

ಮಳೆ ಜೊತೆಗೆ ಗಾಳಿಯೂ ಸೇರಿಕೊಂಡಿದ್ದು ಅಲ್ಲಲ್ಲಿ ವಿದ್ಯುತ್‌ ಕಂಬದ ಮೇಲೆ ಮರಗಳು ಉರುಳಿ ಬೀಳುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ಶುರುವಾಗಿದೆ. ಬಿಎಸ್ಎನ್ಎಲ್‌ ನೆಟ್ ವರ್ಕ್‌ ನಿಂತು ಹೋಗಿದೆ. ಅಡಕೆ ತೋಟದಲ್ಲಿ ಅಡಕೆ ಮರಗಳು ಸಾಲುಗಟ್ಟಿ ಬೀಳುತ್ತಿದೆ.

ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಅಡಕೆ ಮನೆ ಕೊಠಡಿ ಮೇಲೆ ಮರ ಉರುಳಿ ಬಿದ್ದು ಕಟ್ಟಡ ಹಾಳಾಗಿದೆ, ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಸುತ್ತ ಕಾಡು ಮರಗಳಿದ್ದು ಯಾವುದೇ ಕ್ಷಣವಾದರೂ ಕಟ್ಟಡದ ಮೇಲೆ ಬೀಳುವ ಅಪಾಯವಿದ್ದು ಮರವನ್ನು ತೆಗೆಸಬೇಕು ಎಂದು ಶಿಕ್ಷಣ ಇಲಾಖೆಯಿಂದ ಅರಣ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ.

ಶೀಗುವಾನಿಯ ಸಮೀಪದ ಜುಮ್ಮನಕೊಡಿಗೆಯ ಗಿರೀಶ್‌ ಎಂಬುವರ ಮನೆ ಮೇಲೆ ಮರ ಉರುಳಿ ಬಿದ್ದಿದೆ. ಅದೇ ಗ್ರಾಮದ ಚಂದ್ರಪ್ಪ ಎಂಬುವರ ಶೌಚಾಲಯ ಮೇಲೆ ಮರ ಉರುಳಿ ಹಾನಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!