ಶಶಿಕಾಂತ ಮೆಂಡೆಗಾರ
ಶಾಲಾ ಆವರಣದಲ್ಲೇ ಶಿಥಿಲಗೊಂಡ ನೀರಿನ ಟ್ಯಾಂಕ್ ಇರುವ ಕಾರಣ ಟ್ಯಾಂಕ್ ಯಾವಾಗ ಕುಸಿದು ಮೈಮೇಲೆ ಬೀಳುತ್ತದೆಯೋ ಎಂಬ ಜೀವ ಭಯದಲ್ಲೇ ಮಕ್ಕಳು ನಿತ್ಯ ಜೀವ ಆಟ-ಪಾಠ ಮಾಡುವಂತಾಗಿದೆ.
ಹೌದು, ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಹೊಸೂರು 3ನೇ ವಾರ್ಡ್ ನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 30 ವರ್ಷಗಳ ಹಳೇಯದಾದ ನೀರು ಸರಬರಾಜು ಓವರ್ ಹೆಡ್ ಟ್ಯಾಂಕ್ ಇದೆ. ಈ ಟ್ಯಾಂಕ್ ಶಿಥಿಲಗೊಂಡು ವರ್ಷಗಳೇ ಗತಿಸಿದೆ. ಈಗಲೂ, ಆಗಲೂ ಕುಸಿಯುವ ಹಂತದಲ್ಲಿ ಇದೆ. ಸಪೋರ್ಟ್ಗೆಂದು ಟ್ಯಾಂಕ್ನ ತಳಭಾಗದಲ್ಲಿ ಹಾಕಿರುವ ಕಾಲಂ ಗಳೆಲ್ಲವೂ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಬಿರುಕುಬಿಟ್ಟು ಇನ್ನೇನು ಬೀಳುವ ಹಂತಕ್ಕೆ ಬಂದಿವೆ. ಅಲ್ಲದೇ ಈ ನೀರಿನ ಟಾಕಿಯ ಮೇಲೆ ಹತ್ತುವ ಮೆಟ್ಟಿಲುಗಳಂತೂ ಕಳಚಿ ಬಿದ್ದು ಅದೆಷ್ಟೋ ತಿಂಗಳುಗಳೆ ಕಳೆದಿವೆ. ಈಗ ಉಳಿದಿರುವ ಈ ಟ್ಯಾಂಕ್ ಯಾವಾಗ ಕುಸಿದು ಮಕ್ಕಳ ಮೇಲೆ ಬೀಳುತ್ತದೋ ಎಂಬಂತಾಗಿದೆ.ಮನವಿ ಮಾಡಿದರೂ ಪ್ರಯೋಜನವಿಲ್ಲ:
ಆತಂಕದಲ್ಲಿ 150 ಮಕ್ಕಳ ಭವಿಷ್ಯ:
ಅಪಾಯ ಕಟ್ಟಿಟ್ಟ ಬುತ್ತಿ:
---
ಅನಾಹುತ ಸಂಭವಿಸಿದರೇ
ಶಾಲಾ ಆವರಣದಲ್ಲಿರುವ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿರುವ ಕುರಿತು ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಪಂಚಾಯತಿ ಸಿಇಒವರೆಗೆ ಮನವಿ ಮಾಡಲಾಗಿದೆ. ಏನಾದರೂ ಹೆಚ್ಚುಕಡಿಮೆ ಆದರೆ ಈ ಭಾಗದ ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಕೋಟ್:
ಶಾಲಾ ಆವರಣದಲ್ಲಿರುವ ಈ ನೀರಿನ ಟ್ಯಾಂಕ್ನಿಂದ ಮಕ್ಕಳು, ಶಿಕ್ಷಕರು, ಪಾಲಕರು ಭಯದಲ್ಲಿದ್ದಾರೆ. ಎಸ್ಡಿಎಂಸಿ ವತಿಯಿಂದ ಮನವಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ತಕ್ಷಣವೇ ಈ ಟ್ಯಾಂಕ್ ಅನ್ನು ನೆಲಸಮಗೊಳಿಸಿ ಎಲ್ಲರಲ್ಲಿರುವ ಭಯ, ಆತಂಕವನ್ನು ಹೋಗಲಾಡಿಸಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಕ್ಕಳ ಜೀವ ರಕ್ಷಣೆಗೆ ಮುಂದಾಗದಿದ್ದರೆ, ಪ್ರತಿಭಟನೆ ಮಾಡಬೇಕಾಗುತ್ತದೆ.-ಜಗದೀಶ ಪಾಟೀಲ್, ಗ್ರಾಮಸ್ಥ.
--ಶಾಲಾ ಆವರಣದಲ್ಲಿ ಶಿಥಿಲಗೊಂಡ ಟ್ಯಾಂಕ್ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕದಲ್ಲಿದ್ದಾರೆ. ಜೆಜೆಎಂ ಯೋಜನೆಯಲ್ಲಿ ಹೊಸ ಟ್ಯಾಂಕ್ ನಿರ್ಮಾಣವಾಗಿದ್ದು, ಅದಕ್ಕೆ ನೀರು ಸರಬರಾಜು ಮಾಡಲು ಪೈಪ್ಲೈನ್ ಸಂಪರ್ಕ ಸಿಕ್ಕ ಕೂಡಲೇ ಈ ಟ್ಯಾಂಕ್ ನೆಲಸಮಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
-ದಾವಲಬೀ ಹುಸೇನಸಾಬ ಸೋಲಾಪುರ, ಗ್ರಾಪಂ ಅಧ್ಯಕ್ಷೆ, ಕೊಂಡಗೂಳಿ.--
ನನ್ನ ಗಮನಕ್ಕೆ ಬಂದ ಸಮಸ್ಯೆಗಳಿಗೆ ತಕ್ಷಣವೇ ಅಧಿಕಾರಿಗಳಿಗೆ ಹೇಳಿ ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದೇನೆ. ಈ ಶಿಥಿಲಗೊಂಡ ಟ್ಯಾಂಕ್ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮಾತನಾಡಿ, ಟ್ಯಾಂಕ್ ನೆಲಸಮಗೊಳಿಸಲು ಸೂಚಿಸುತ್ತೇನೆ. ಯಾವುದೇ ಕಾರಣಕ್ಕೂ ಮಕ್ಕಳ ಜೀವಕ್ಕೆ ತೊಂದರೆ ಆಗಲು ಬಿಡುವುದಿಲ್ಲ.-ರಾಜುಗೌಡ ಪಾಟೀಲ್, ದೇವರಹಿಪ್ಪರಗಿ ಶಾಸಕ.