ಕ್ಯಾಸಿನಕೆರೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಮೃತಪಟ್ಟಿಲ್ಲ: ಸ್ಪಷ್ಟನೆ

KannadaprabhaNewsNetwork |  
Published : Aug 31, 2024, 01:32 AM IST

ಸಾರಾಂಶ

ಹೊನ್ನಾಳಿ ತಾಲೂಕು ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುಣಸಘಟ್ಟ ಗ್ರಾಮದಲ್ಲಿ ಕಳೆದ ವಾರ ವಾಂತಿ- ಭೇದಿ ಪ್ರಕರಣ ಕಂಡುಬಂದು, 20 ಜನರು ಚಿಕಿತ್ಸೆ ಪಡೆದಿದ್ದಾರೆ. ಈ ಮಧ್ಯೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ಒಬ್ಬ ಮಹಿಳೆಯು ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿಲ್ಲ. ಬಹು ಅಂ ಗಾಂಗ ವೈಫಲ್ಯದಿಂದ ಮಹಿಳೆ ಮರಣ ಸಂಭವಿಸಿದೆ ಎಂಬುದು ದೃಢಪಟ್ಟಿದೆ.

- ಬಹು ಅಂಗಾಂಗ ವೈಫಲ್ಯದಿಂದ ಮಹಿಳೆ ಸಾವು: ಸರ್ವೇಕ್ಷಣಾಧಿಕಾರಿ ಹೇಳಿಕೆ

- ಮೃತ ಮಹಿಳೆ ಮನೆ, ಸುತ್ತಮುತ್ತಲ ಪೈಪ್, ನಲ್ಲಿ ನೀರಿನ 4 ಮಾದರಿಗಳ ಪರೀಕ್ಷೆ

- ನೀರಿನ ಮಾದರಿಗಳಲ್ಲಿ ಸೂಕ್ಷ್ಮಾಣು ಪತ್ತೆಯಾಗಿಲ್ಲ: ಜಿಲ್ಲಾ ಜನಾರೋಗ್ಯ ಪ್ರಯೋಗ ಶಾಲೆ

- ವಾಂತಿ- ಭೇದಿ ಪ್ರಕರಣ ಕಂಡುಬಂದು 20 ಜನರು ಚಿಕಿತ್ಸೆ ಪಡೆದಿದ್ದರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹೊನ್ನಾಳಿ ತಾಲೂಕು ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುಣಸಘಟ್ಟ ಗ್ರಾಮದಲ್ಲಿ ಕಳೆದ ವಾರ ವಾಂತಿ- ಭೇದಿ ಪ್ರಕರಣ ಕಂಡುಬಂದು, 20 ಜನರು ಚಿಕಿತ್ಸೆ ಪಡೆದಿದ್ದಾರೆ. ಈ ಮಧ್ಯೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ಒಬ್ಬ ಮಹಿಳೆಯು ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿಲ್ಲ. ಬಹು ಅಂ ಗಾಂಗ ವೈಫಲ್ಯದಿಂದ ಮಹಿಳೆ ಮರಣ ಸಂಭವಿಸಿದೆ ಎಂಬುದು ದೃಢಪಟ್ಟಿದೆ.

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದವರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 9 ರೋಗಿಗಳು ಸ್ಥಳೀಯ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 11 ರೋಗಿಗಳು ಶಿವಮೊಗ್ಗದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಗ್ರಾಮದ 59 ವರ್ಷದ ಒಬ್ಬ ಮಹಿಳೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಸ್ಟ್ 24ರಂದು ಮೃತಪಟ್ಟಿದ್ದರು. ಈ ಮರಣ ಪ್ರಕರಣ ತೀವ್ರ ತರಹದ ಸೋಂಕಿನಿಂದ ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.

ಮೃತ ಮಹಿಳೆಯ ಮನೆ ಹಾಗೂ ಸುತ್ತಮುತ್ತಲು ಸರಬರಾಜು ಮಾಡುವ ಪೈಪ್ ಮತ್ತು ನಲ್ಲಿ ನೀರಿನ 4 ಮಾದರಿಗಳನ್ನು ಜಿಲ್ಲಾ ಜನಾರೋಗ್ಯ ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಲಾಯಿತು. ಈ 4 ನೀರಿನ ಮಾದರಿಗಳಲ್ಲಿ ಯಾವುದೇ ಸೂಕ್ಷ್ಮಾಣುಗಳೂ ಕಂಡುಬಂದಿಲ್ಲ. ಮಹಿಳೆಯು ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿಲ್ಲ. ಅವರು ತೀವ್ರ ತರಹದ ಬಹು ಅಂಗಾಂಗ ವೈಫಲ್ಯದಿಂದ ಮರಣ ಸಂಭವಿಸಿದೆ ಎಂಬುದು ದೃಢಪಟ್ಟಿದೆ. ಈ ಗ್ರಾಮದ ಎಲ್ಲ ನೀರಿನ ಮೂಲಗಳನ್ನು ಕ್ಲೋರಿನೇಷನ್ ಮಾಡಲಾಗಿದೆ. ಪರ್ಯಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ