ಕನ್ನಡಪ್ರಭ ವಾರ್ತೆ ಮಾಲೂರು
ಛಾಲೆಂಜ್ ಕ್ಷೇತ್ರವನ್ನು ಆರಿಸಿಕೊಳ್ಳಿ
ಮಹಿಳೆಯರು ಸಾಮಾಜಿಕ, ಅರ್ಥಿಕ, ರಾಜಕೀಯ, ಕ್ರೀಡೆ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಗುರಿಯನ್ನು ಯಶಸ್ಸಿಯಾಗಿ ಸಾಧಿಸಬಹುದು. ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದಿನ ಸಂಪ್ರಾದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಯಾವುದಾದರೂ ಛಾಲೆಂಜ್ ಕ್ಷೇತ್ರವನ್ನು ಆರಿಸಕೊಂಡು ಮುನ್ನುಗ್ಗಿ ಗುರಿ ತಲುಪಬೇಕು ಎಂದರು. ಕರ್ನಾಟಕ ಲೇಖಕಿಯರ ಸಂಘದ ರಾಜ್ಯ ಉಪಾಧ್ಯಕ್ಷೆ ಬಿ.ವಿ.ಮಂಜುಳಾ,ಸಾಹಿತಿ ಹಾಗೂ ಪತ್ರಕರ್ತೆ ಮಂಜುಳಾ ಪಾವಗಡ, ಕಸಬಾ ಹೋಬಳಿ ಕಸಾಪ ಅಧ್ಯಕ್ಷೆ ವನಿತಾ ಅರಳೇರಿ,ಶಿಕ್ಷಣ ಸಂಯೋಜಕಿ ಜಗದಾಂಬ,ಸಾಹಿತಿಗಳಾದ ಬಂಗಾರಪೇಟೆ ರಾಜೇಶ್ವರಿ, ಕೆ.ಜಿ.ಎಫ್.ನ ಸವಿತಾ, ಶ್ರೀನಿವಾಸಪುರ ಮಮತಾರಾಣಿ, ಮುಳಬಾಗಿಲಿನ ರಾಜೇಶ್ವರಿ,ಕೋಲಾರದ ತೇಜೋವತಮ್ಮ,ಸುಮಿತ್ರಮ್ಮ,ಮಾಲತಿ, ಮಂಜುನಾಥ್ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿಭಾಗದ ಮುಖ್ಯಸ್ಥರಾದ ಪ್ರೋ.ಅನಂತರಾಜು,ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್ , ಅನಿಕೇತನ ಸಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ ಇನ್ನಿತರರು ಇದ್ದರು.