ಪುಣ್ಯ ಕಾರ್ಯಕ್ಕೆ ತೆರಳಿದ್ದ ಯುವತಿ, ಮಹಿಳೆ ನೀರು ಪಾಲು

KannadaprabhaNewsNetwork |  
Published : Feb 16, 2025, 01:45 AM IST
ಕೆ ಕೆ ಪಿ ಸುದ್ದಿ 06:ಮಹಿಳೆ ನೀರುಪಾಲು | Kannada Prabha

ಸಾರಾಂಶ

ತಾಲೂಕಿನ ಕಸಬಾ ಹೋಬಳಿಯ ಗಾಣಾಳು ಸಮೀಪದ ಭೋವಿ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಮೇಸ್ತ್ರಿ ಮಾದಯ್ಯನವರ ಪುಣ್ಯಕಾರ್ಯಕ್ಕೆನಾಗಮಿಸಿದ್ದ ಮೃತನ ಮೊಮ್ಮಗಳು ನದಿಯಾ ಮತ್ತು ಸಂಬಂಧಿ ಮಹಿಳೆ ಶೋಭಾ ಹಾಗೂ ಸಂಬಂಧಿಕರು ಮುತ್ತತ್ತಿ ಹೋಗಿ ಪೂಜೆ ಮಾಡಿಸಿಕೊಂಡು, ಕಾವೇರಿ ನದಿಯಲ್ಲಿ ನೀರಿಗಿಳದು ಸ್ನಾನ ಮಾಡುವ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.

ಕನಕಪುರ: ಅಜ್ಜನ ಪುಣ್ಯ ಕಾರ್ಯಕ್ಕೆ ಹೋಗಿದ್ದ ಮೊಮ್ಮಗಳು ಹಾಗೂ ಸಂಬಂಧಿ ಮಹಿಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿದ್ದಾರೆ. ತಾಲೂಕಿನ ಗಾಣಾಳು ಸಮೀಪದ ಭೋವಿ ಕಾಲೋನಿಯ ಶೋಭಾ(೧೯), ನದಿಯಾ(೧೮) ಮೃತಪಟ್ಟವರು. ತಾಲೂಕಿನ ಕಸಬಾ ಹೋಬಳಿಯ ಗಾಣಾಳು ಸಮೀಪದ ಭೋವಿ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಮೇಸ್ತ್ರಿ ಮಾದಯ್ಯನವರ ಪುಣ್ಯಕಾರ್ಯಕ್ಕೆನಾಗಮಿಸಿದ್ದ ಮೃತನ ಮೊಮ್ಮಗಳು ನದಿಯಾ ಮತ್ತು ಸಂಬಂಧಿ ಮಹಿಳೆ ಶೋಭಾ ಹಾಗೂ ಸಂಬಂಧಿಕರು ಮುತ್ತತ್ತಿ ಹೋಗಿ ಪೂಜೆ ಮಾಡಿಸಿಕೊಂಡು, ಕಾವೇರಿ ನದಿಯಲ್ಲಿ ನೀರಿಗಿಳದು ಸ್ನಾನ ಮಾಡುವ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆದ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಶನಿವಾರ ಸಂಜೆ ಭೋವಿ ಕಾಲೋನಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌