ಅಪಘಾತ: ಆಟೋ ಚಾಲಕ ನಾಗೇಶ್ ದುರ್ಮರಣ

KannadaprabhaNewsNetwork |  
Published : Feb 22, 2024, 01:47 AM IST
ಅಪಘಾತದಲ್ಲಿ ಆಟೋ ಚಾಲಕ ನಾಗೇಶ್  ಸಾವು | Kannada Prabha

ಸಾರಾಂಶ

ತರೀಕೆರೆಯಿಂದ ಲಿಂಗದಹಳ್ಳಿ ಕಡೆಗೆ ಬರುತ್ತಿದ್ದ ಆಟೋಗೆ ಕಾಡುಹಂದಿಗಳ ಹಿಂಡು ಗುದ್ದಿದ ಪರಿಣಾಮ ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ತರೀಕೆರೆ: ತರೀಕೆರೆಯಿಂದ ಲಿಂಗದಹಳ್ಳಿ ಕಡೆಗೆ ಬರುತ್ತಿದ್ದ ಆಟೋಗೆ ಕಾಡುಹಂದಿಗಳ ಹಿಂಡು ಗುದ್ದಿದ ಪರಿಣಾಮ ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ನಾಗೇಶ್ (53) ಮೃತ ದುರ್ಧೈವಿ. ಈತ ಬುಧವಾರ ಬೆಳಿಗ್ಗೆ ಗ್ರಾಮಸ್ಥರೊಬ್ಬರ ಮದುವೆಯ ಅಡಿಗೆಗೆ ಬೇಕಾಗಿದ್ದ ತರಕಾರಿ ಮತ್ತಿತರ ವಸ್ತುಗಳನ್ನು ತುಂಬಿಸಿಕೊಂಡು ಆಟೋದಲ್ಲಿ ಬಳ್ಳಾವರ ಗ್ರಾಮಕ್ಕೆ ವಾಪಾಸ್ ಬರುತ್ತಿದ್ದ ಸಮಯದಲ್ಲಿ ಕಾಡುಹಂದಿಗಳ ಹಿಂಡು ಗುದ್ದಿ ಅಪಘಾತವಾಗಿದೆ.ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಆಟೋಕ್ಕೆ ಗುದ್ದಿದ ಕಾಡುಹಂದಿಯೂ ಸಹ ಸ್ಥಳದಲ್ಲೇ ಮೃತಪಟ್ಟಿದೆ, ಈ ಸಂಬಂಧ ಲಿಂಗದಹಳ್ಳಿ ಪೋಲೀಸ್ ಠಾಣೆ ಮತ್ತು ಲಿಂಗದಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ಧಾಖಾಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

19ಕೆಟಿಆರ್.ಕೆ.03ಃ ನಾಗೇಶ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ