ಅಪಘಾತ: ಬೈಕ್‌ ಸವಾರನ ಎಡಗಾಲು ತುಂಡು

KannadaprabhaNewsNetwork |  
Published : Dec 28, 2023, 01:45 AM IST
ಕಾರಟಗಿ ತಾಲೂಕಿನ ಗುಂಡೂರು ಕ್ರಾಸ್‌ ಬಳಿ ರಸ್ತೆ ಅಪಘಾತದಲ್ಲಿ ಕಾರ್‌ ಡಿಕ್ಕಿಗೆ ದ್ವಿಚಕ್ರ ವಾಹನ ಸವಾರನ ಪಾದ ತುಂಡಾಗಿ ಬಿದ್ದಿದೆ. | Kannada Prabha

ಸಾರಾಂಶ

ಡಿಕ್ಕಿ ರಭಸಕ್ಕೆ ಸಿದ್ದಲಿಂಗಪ್ಪನ ಎಡಗಾಲಿನ ಪಾದ ತುಂಡಾಗಿ ಬಿದ್ದಿದ್ದರೆ, ಅವರ ಮಗ ಹರೀಶಗೆ ತೀವ್ರ ಗಾಯಗಳಾಗಿವೆ. ಚಾಲಕನ ನಿರ್ಲಕ್ಷ್ಯತನದಿಂದ ಈ ಅಪಘಾತ ಸಂಭವಿಸಿದೆ

ಕಾರಟಗಿ: ರಸ್ತೆ ಬದಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಸವಾರನ ಎಡಗಾಲು ತುಂಡಾಗಿದ್ದು, ದ್ವಿಚಕ್ರದ ಹಿಂಬದಿಯಲ್ಲಿ ಕುಳಿತ ಸವಾರನ ಮಗನಿಗೆ ತೀವ್ರ ಗಾಯಗಳಾದ ಘಟನೆ ತಾಲೂಕಿನ ಗುಂಡೂರು ಕ್ರಾಸ್ ಬಳಿ ಮಂಗಳವಾರ ನಡೆದಿದೆ.

ತಾಲೂಕಿನ ಬೆನ್ನೂರು ಗ್ರಾಮದ ಸಿದ್ದಲಿಂಗಪ್ಪ (೩೯) ಮತ್ತು ಅವರ ಮಗ ಹರೀಶ್ (೧೩) ಇಬ್ಬರು ಅಪಘಾತದಲ್ಲಿ ಗಾಯಗೊಂಡವರು.

ಬೆನ್ನೂರಿನ ಸಿದ್ದಲಿಂಗಪ್ಪ ಪುತ್ರ ಹರೀಶ ಕನಕಗಿರಿಯ ಶಾಲೆಯೊಂದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕ್ರಿಸ್‌ಮಸ್ ರಜೆ ಮುಗಿದ ಹಿನ್ನೆಲೆಯಲ್ಲಿ ಬೆನ್ನೂರಿನಿಂದ ಕನಕಗಿರಿ ಶಾಲೆಗೆ ಶಾಲೆಗೆ ಬಿಟ್ಟು ಬರಲು ದ್ವಿಚಕ್ರ ಮೂಲಕ ಸಿದ್ದಾಪುರದಿಂದ ಗುಂಡೂರು ರಸ್ತೆ ಮೂಲಕ ಕನಕಗಿರಿಗೆ ಹೋಗುವ ವೇಳೆ ಗುಂಡೂರು ಕ್ರಾಸ್ ಬಳಿ ನಿಂತಿದ್ದರು. ಈ ವೇಳೆ ಗಂಗಾವತಿಯಿಂದ ಸಿಂಧನೂರು ಕಡೆಗೆ ಹೊರಟಿದ್ದ ಕಾರೊಂದು ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸಿದ್ದಲಿಂಗಪ್ಪನ ಎಡಗಾಲಿನ ಪಾದ ತುಂಡಾಗಿ ಬಿದ್ದಿದ್ದರೆ, ಅವರ ಮಗ ಹರೀಶಗೆ ತೀವ್ರ ಗಾಯಗಳಾಗಿವೆ. ಚಾಲಕನ ನಿರ್ಲಕ್ಷ್ಯತನದಿಂದ ಈ ಅಪಘಾತ ಸಂಭವಿಸಿದೆ ಎಂದು ಗಾಯಗೊಂಡ ಬೈಕ್ ಸವಾರನ ಸಹೋದರ ರಮೇಶ ಎಂಬುವವರು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!