ಬಳ್ಳಾರಿ: ತಾಲೂಕಿನ ಪರಮದೇವನಹಳ್ಳಿ ಬಳಿ ಯೋಧರಿಗೆ ಪ್ಯಾರಾಚೂಟ್ ತರಬೇತಿ ವೇಳೆ ಅವಘಡ ಸಂಭವಿಸಿದ್ದು, ಸೇನಾ ಕರ್ನಲ್ ಚಿನ್ನರಾಜ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪರಮದೇವನಹಳ್ಳಿ ಬಳಿ ಅನೇಕ ವರ್ಷಗಳಿಂದ ಸೇನಾ ಸಿಬ್ಬಂದಿಗೆ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿದೆ. ಸುಮಾರು 400ಕ್ಕೂ ಅಧಿಕ ಸೈನಿಕರು ಪ್ಯಾರಾಚೂಟ್ ಧರಿಸಿ ಆಗಸದಿಂದ ಜಿಗಿಯುವ ತರಬೇತಿ ಪಡೆಯುತ್ತಿದ್ದರು. ಇದೇ ವೇಳೆ ಸೇನಾ ಕರ್ನಲ್ ಸಹ ಆಗಸದಿಂದ ಜಿಗಿಯುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಏರ್ಲಿಫ್ಟ್ ಮಾಡಲಾಗಿದೆ. ಮೇಲಿಂದ ಕೆಳಗೆ ಬಿದ್ದಿದ್ದರಿಂದ ಸೇನಾ ಕರ್ನಲ್ ಗೆ ಮೂಳೆ ಮುರಿತವಾಗಿದೆ ಎಂದು ಪೊಲೀಸರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಪ್ಯಾರಾಚೂಟ್ ತರಬೇತಿ ವೇಳೆ ಕೆಳಗೆ ಬಿದ್ದ ಸೇನಾ ಕರ್ನಲ್ ಚಿನ್ನರಾಜ್ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು.