ಕನ್ನಡಪ್ರಭ ವಾರ್ತೆ ಇಳಕಲ್ಲ
ಜ.15ರಂದು ಬೆಳಗ್ಗೆ 11 ಗಂಟೆಗೆ ನಮಾಜ್ ಮಾಡಲು ಹೋದಾಗ ಇಬ್ಬರು ವ್ಯಕ್ತಿಗಳು ಹುಂಡಿ ಹಣವನ್ನು ಗೋಣಿ ಚೀಲದಲ್ಲಿ ತುಂಬುತ್ತಿರುವುದನ್ನು ನೋಡಿದ್ದೇನೆ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರೂ ದೂರು ದಾಖಲಿಸಿಕೊಂಡಿಲ್ಲ ಎಂದು ರಿಯಾಜ್ ಬನ್ನು ಆರೋಪಿಸಿದ್ದಾರೆ.
ಈ ಬಗ್ಗೆ ಮುರ್ತುಜಾ ಖಾದ್ರಿ ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಅವರನ್ನು ಕೇಳಿದರೆ ಸಮಿತಿಗೆ ನಾನೇ ಅಧ್ಯಕ್ಷನಿದ್ದೇನೆ. ಮುಂದಿನ ತಿಂಗಳು ಉರುಸ್ ಇರುವುದರಿಂದ ಹುಂಡಿಯ ಹಣ ತೆಗೆದಿದ್ದೇವೆ. ಈ ವಿಷಯವಾಗಿ ಇಳಕಲ್ಲ ನಗರ ಪೊಲೀಸ್ ಠಾಣೆಗೆ ಮತ್ತು ಹುನಗುಂದ ಡಿವೈಎಸ್ಪಿ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.--------
- ಶಹಜಹಾನ್ ನಾಯಕ ಪಿಎಸ್ಐ ಇಳಕಲ್ಲ ನಗರ ಪೊಲೀಸ್ ಠಾಣೆ
-----2022ರಿಂದ ಮುರ್ತುಜಾ ಖಾದ್ರಿ ದರ್ಗಾಕ್ಕೆ ಯಾವುದೇ ಸಮಿತಿಯೂ ಇಲ್ಲ, ವಕ್ಫ್ ಸಮಿತಿ ವ್ಯಾಪ್ತಿಗೆ ಒಳಪಡುವುದರಿಂದ ಅದರದ ನಿರ್ಧಾರವೇ ಅಂತಿಮ. ದರ್ಗಾ ಹಣ ತೆಗೆದುಕೊಳ್ಳುವ ಅಧಿಕಾರ ಬೇರೆಯವರಿಗೆ ಇಲ್ಲ.
-ರಿಯಾಜ್ ಬನ್ನು ಸಾಮಾಜಿಕ ಹೊರಟಗಾರ.