ಕನ್ನಡಪ್ರಭ ವಾರ್ತೆ ಹಾಸನಈಗಿನ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಆದ್ಯತೆ ನೀಡಿ ಎಂದು ಬೆಂಗಳೂರಿನ ನಾಗಾರ್ಜುನ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಹಾಗೂ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಡಾ.ಎಸ್.ಜಿ. ಗೋಪಾಲಕೃಷ್ಣ ಅವರು ಸಲಹೆ ನೀಡಿದರು.ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ೧೯೮೦ನೇ ಬ್ಯಾಚ್ನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಜಿನಿಯರಿಂಗ್ ಪದವಿ ವೇಳೆ ಓದುವಎಲ್ಲ ವಿಷಯಗಳೂ ಕೆಲಸಕ್ಕೆ ಸೇರಿದ ನಂತರ ಉಪಯೋಗಕ್ಕೆ ಬರಲಿವೆ. ಪದವಿ ಓದಿನ ವೇಳೆ ಕಲಿತ ವಿಷಯಗಳು ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಲು ಬೇಕಾದ ಭದ್ರ ಬುನಾದಿ ಒದಗಿಸುತ್ತವೆ. ಹಾಗಾಗಿ ಕಲಿಕೆಯನ್ನು ನಿರ್ಲಕ್ಷಿಸದಿರಿ ಎಂದು ತಿಳಿ ಹೇಳಿದರು. ಎಂಜಿನಿಯರಿಂಗ್ ಪದವಿ ವೇಳೆ ಓದಿದ ಹೈಡ್ರಾಲಿಕ್ಸ್ ಮತ್ತು ಫ್ಲ್ಯೂಯಿಡ್ ಮೆಷಿನರಿಯಂತಹ ವಿಷಯ ಪದವಿ ನಂತರ ಪೇಪರ್ ಮಿಲ್ನಲ್ಲಿ ಶಿಫ್ಟ್ ಎಂಜಿನಿಯರ್ ಆಗಿ ಕೆಲಸ ಮಾಡಲು ಸಹಕಾರಿಯಾಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮಾರ್ಗದರ್ಶಕರಾಗಿ ಇಂದಿನ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದೇವೆ. ಇದಕ್ಕಾಗಿ ಪ್ರಾಂಶುಪಾಲರಾದ ಡಾ.ಹೆಚ್.ಜೆ.ಅಮರೇಂದ್ರ ಅವರು’ಮಾರ್ಗದರ್ಶಕ’ ಉಪಕ್ರಮ ರೂಪಿಸಿದ್ದಾರೆ ಎಂದು ತಿಳಿಸಿದರು.ಕೈಗಾರಿಕೆ ಮತ್ತು ವಾಣಿಜ್ಯಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಚಂದ್ರಶೇಖರ್ ಅವರು ಮಾತನಾಡಿ, ಉದ್ಯೋಗಿಗಳಾಗಿ ದುಡಿಯುವುದಕ್ಕಿಂತ ನಿಮ್ಮದೇ ಸ್ವಂತ ಕೈಗಾರಿಕೆ ಸ್ಥಾಪಿಸಲು ಮುಂದಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಂತ ಉದ್ಯಮ ಪ್ರಾರಂಭಿಸಿ ಲಕ್ಷಾಂತರ ಜನರಿಗೆ ಕೆಲಸ ನೀಡುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಾಂಶುಪಾಲ ಡಾ.ಎಚ್.ಜೆ.ಅಮರೇಂದ್ರ, ೧೯೮೦ನೇ ಬ್ಯಾಚ್ನ ಹಳೆ ವಿದ್ಯಾರ್ಥಿಗಳಾದ ಎಚ್ ವಿ ರಾಮಕೃಷ್ಣ, ಗೋವಿಂದರಾಜು ಟಿ ವಿ, ಮಹಾವೀರ್ ಚಾಂದ್, ಸುರೇಶ್ ಬಾಬು ಟಿ ಎನ್, ಪ್ರಕಾಶ್ ಕೆ, ಶ್ಯಾಮಸುಂದರ್ ಕೆ, ಶಶಿಕುಮಾರ್ ಎ, ಸುರೇಶ್ರಾಜ್ಜೈನ್, ರಾಮಸ್ವಾಮಿಎಚ್ಜೆ, ಕೇಶವನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.