ಪಾವಗಡದಲ್ಲಿ ಸ್ಮಶಾನ ಜಮೀನು ಮಂಜೂರಿಗೆ ಕ್ರಮ

KannadaprabhaNewsNetwork |  
Published : Jan 31, 2025, 12:45 AM IST
ಫೋಟೋ 30ಪಿವಿಡಿ2 30ಪಿವಿಡಿ3ಪಾವಗಡ,ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್‌ ಅಧ್ಯಕ್ಷತೆಯಲ್ಲಿ ಪಟ್ಟಣಾಭಿವೃದ್ದಿ ಕುರಿತು ಸಭೆ ನಡೆಸಿದ್ದು ಈ ವೇಳೆ ರಾಜ್ಯ 5ನೇ ಹಣಕಾಸು ಯೋಜನೆ ಅಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹಾಗೂ ಇತರೆ ಸದಸ್ಯರ ತಂಡ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಪಾವಗಡದಲ್ಲಿ ಸ್ಮಶಾನದ ಕೊರತೆಯಾಗಿದ್ದು ಗಮನಕ್ಕೆ ಬಂದಿದ್ದು ಈ ಕೂಡಲೇ 10 ಎಕರೆ ಜಮೀನು ಮಂಜೂರಿಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ರಾಜ್ಯ 5ನೇ ಐದನೇ ಹಣಕಾಸು ಅಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪಾವಗಡದಲ್ಲಿ ಸ್ಮಶಾನದ ಕೊರತೆಯಾಗಿದ್ದು ಗಮನಕ್ಕೆ ಬಂದಿದ್ದು ಈ ಕೂಡಲೇ 10 ಎಕರೆ ಜಮೀನು ಮಂಜೂರಿಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ರಾಜ್ಯ 5ನೇ ಐದನೇ ಹಣಕಾಸು ಅಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.

ಪಾವಗಡ ಪುರಸಭೆಯಲ್ಲಿ ನಡೆದ ವಿಶೇಷ ಪ್ರಗತಿ ಪರಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಮಾತನಾಡಿದ 23ನೇ ವಾರ್ಡ್‌ ಸದಸ್ಯ ರಾಮಾಂಜಿನಪ್ಪ ಪಟ್ಟಣದಲ್ಲಿ ಸ್ಮಶಾನದ ಕೊರತೆ ಇದೆ. 100ವರ್ಷದ ಹಿಂದೆ ಕಲ್ಪಿಸಿದ್ದ ಸ್ಮಶಾನವಿದ್ದು ಅಲ್ಲಿ ಬರೀ ಕಲ್ಲು ಬಂಡೆ ಇರುವ ಕಾರಣ, ಒಂದರ ಮೇಲೆ ಒಂದು ಶವ ಹೂಳುವ ಪರಿಸ್ಥಿತಿ ಇದೆ. ಈ ಬಗ್ಗೆ ಪುರಸಭೆಯಿಂದ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಮೇಲಧಿಕಾರಿಗಳು ಸೂಕ್ತ ಕ್ರಮ ಜರಿಗಿಸಿಲ್ಲ. ಸ್ಮಶಾನದ ಜಾಗ ಖರೀದಿಗೆ ಹಣ ಸಹ ಬಿಡುಗಡೆಯಾಗಿಲ್ಲ. ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಜಾಗ ಖರೀದಿಗೆ ಕೋಟ್ಯಂತರ ರು ಹಣ ಬೇಕಾಗುತ್ತದೆ.ಇದು ಮುದಿನ ದಿನದಲ್ಲಿ ಇನ್ನೂ ದುಭಾರಿಯಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಈ ಬಗ್ಗೆ ನಮ್ಮ ಗಮನಕ್ಕೂ ಸಮಸ್ಯೆ ಬಂದಿದ್ದು, ಈ ಕುರಿತು ಹೈಕೋರ್ಟ್‌ ಆದೇಶ ಸಹ ಇದ್ದು, 10 ಎಕರೆ ಜಮೀನಿನ ಅವಶ್ಯಕತೆ ಇದೆ. ಪುರಸಭೆಯಿಂದಲೇ ಜಮೀನು ಖರೀದಿ ಕುರಿತಂತೆ ಶಿಫಾರಸು ಮಾಡಿ ಕಳುಹಿಸಿ ನಾನು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸುವ ಕುರಿತು ಸೂಚಿಸುವೆ ಎಂದರು.

ಪಟ್ಟಣದಲ್ಲಿ 260 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಇದರ ಪರಿಣಾಮ ಕೇವಲ 4ಲಕ್ಷ ಅದಾಯ ಬದಲು ಮಳಿಗೆಗಳ ಮಾಸಿಕ 14ಲಕ್ಷ ಅದಾಯ ಬರುತ್ತಿದೆ. ಈ ಪೈಕಿ ಈ ಹಿಂದೆ ಬಾಡಿಗೆಗೆ ಮಳಿಗೆಗಳಿದ್ದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವ ರೀತಿ ಕ್ರಮವಹಿಸಬೇಕು ಎಂದು ಸಭೆಯ ಗಮನ ಸೆಳೆದಿದ್ದು ಇದಕ್ಕೆ ಕೋರ್ಟ್‌ ಅದೇಶ ಬರುವವರೆಗೂ ಹೆಚ್ಚುವರಿ ಬಾಡಿಗೆ ವಸೂಲಾತಿಗೆ ಅವಕಾಶವಿರುವುದಾಗಿ ಆಯೋಗದ ಅಧ್ಯಕ್ಷರು ಸೂಚಿಸಿದರು.

ಸದಸ್ಯೆ ಗಂಗಮ್ಮ ಮಾತನಾಡಿ ಅದರ್ಶನಗರದಲ್ಲಿ ಎಸ್‌ಸಿ ಎಸ್‌ಟಿ ನಿರುದ್ಯೋಗ ಯುವಕ,ಯುವತಿಯರ ಸಂಖ್ಯೆ ಹೆಚ್ಚಿದೆ. ಪುರಸಭೆಯಿಂದ ಸೂಕ್ತ ತರಬೇತಿ ಕೇಂದ್ರ ತೆರೆದು ಉದ್ಯೋಗ ಸೃಷ್ಟಿಸಿ ವಿದ್ಯಾವಂತರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು. ಬನಶಂಕರಿ ವಾರ್ಡ್‌ ಸದಸ್ಯ ಸುದೇಶ್‌ಕುಮಾರ್‌ ಮಾತನಾಡಿ,ನಗರ ಪರಿಸರದ ನಿರ್ವಹಣೆಗಾಗಿ ಪರಿಸರ ಅಭಿಯಂತರರನ್ನು ನೇಮಕಾತಿಗೆ ಆದ್ಯತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಪುರಸಭೆ ಅಧ್ಯಕ್ಷರಾದ ಪಿ.ಎಚ್‌.ರಾಜೇಶ್‌, ಪುರಸಭೆ ಉಪಾಧ್ಯಕ್ಷೆ ಗೀತಾ ನಿವೃತ್ತ ಐಎಎಸ್ ಅಧಿಕಾರಿ ಮೊಹಮ್ಮದ್ ಸನಾವುಲ್ಲಾ, ಸದಸ್ಯರಾದ ಪಿ.ಬಾಲಸುಬ್ರಮಣ್ಯಂ, ಆರ್.ಎಸ್. ಪೋಂಡೆ, ಎಂ.ಕೆ.ಕೆಂಪೇಗೌಡ, ಸಿ.ಜಿ. ಪ್ರಸನ್ನ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ.ಯೋಗಾನಂದ, ಮುಖ್ಯಾಧಿಕಾರಿ ಜಾಫರ್ ಷರೀಫ್, ಭಾಗ್ಯಮ್ಮ, ಲೆಕ್ಕಾಧಿಕಾರಿ ಹರೀಶ್‌ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ