- ತಹಸೀಲ್ದಾರ್, ಮುಖ್ಯಾಧಿಕಾರಿ, ಪೊಲೀಸರಿಗೆ ಮನವಿ ಸಲ್ಲಿಸಿ ಮುಖಂಡರ ಒತ್ತಾಯ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗಾಯಿತ್ರಿ ಕ್ಯಾಂಟೀನ್ನ ಸುರೇಶ್ ಎಂಬಾತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೋಮವಾರ ತಾಲೂಕು ಶೋಷಿತ ಸಮಾಜಗಳ ಒಕ್ಕೂಟದ ಮುಖಂಡರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.ಶೋಷಿತ ಸಮಾಜಗಳ ಮುಖಂಡ ಹೊದಿಗೆರೆ ರಮೇಶ್ ಈ ಸಂದರ್ಭ ಮಾತನಾಡಿ, ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ರಚಿಸಿ, ದೇಶಕ್ಕೆ ಕೊಡುಗೆ ನೀಡಿದವುರ ಅಂಬೇಡ್ಕರ್. ಅವರು ಮಹಾನ್ ವ್ಯಕ್ತಿಯಾಗಿದ್ದಾರೆ. ಅಂಥವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅಂಬೇಡ್ಕರ್ ಬಗ್ಗೆ ಯಾರೇ ಕೀಳಾಗಿ ಮಾತನಾಡಲಿ, ಸೂಕ್ತ ತನ್ನಿಖೆಯನ್ನು ನಡೆಸಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಈ ಸಂದರ್ಭ ಒಕ್ಕೂಟದ ಪ್ರಮುಖರಾದ ವಿರೇಶ್ ನಾಯ್ಕ್, ಸಿ.ನಾಗರಾಜ್, ನಲ್ಲೂರು ಶೇಖರಪ್ಪ, ರುದ್ರಪ್ಪ ಮಾಸ್ಟರ್, ಕುಬೇಂದ್ರಸ್ವಾಮಿ, ಗೌಸ್ ಪೀರ್, ತನ್ವೀರ್, ಕೋಗಲೂರು ಪ್ರಕಾಶ್, ಮಾಚನಾಯ್ಕನಹಳ್ಳಿ ಮಂಜುನಾಥ್, ಧರಣೇಂದ್ರ, ಮಲ್ಲಾನಾಯ್ಕ್, ಗರಗ ರಾಜಪ್ಪ, ಸದಾನಂದ, ಬಸವಾಪುರ ರಂಗನಾಥ್, ನಾಗೇಂದ್ರಪ್ಪ, ಎ.ಸಿ.ಚಂದ್ರು, ಎಂ.ಕೆ.ನಾಗಪ್ಪ ಮೊದಲಾದವರು ಹಾಜರಿದ್ದರು.
- - -(ಕೋಟ್) ಅಂಬೇಡ್ಕರ್ ಬಗ್ಗೆ ಗೌರವ ಹೊಂದಿರದ ಆರೋಪಿಗೆ ಪುರಸಭೆಯವರು ಕ್ಯಾಟಿಂಗ್ ನಡೆಸಲು ಪರವಾನಗಿ ನೀಡಿದ್ದಾರೆ. ಆದರೆ ಈ ಸೌಲಭ್ಯ ದುರುಪಯೋಗ ಆಗುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಸದರಿ ವ್ಯಕ್ತಿಯ ಪರವಾನಗಿ ರದ್ದುಪಡಿಸಬೇಕು.
- ಹೊದಿಗೆರೆ ರಮೇಶ್, ಮುಖಂಡ- - -
-26ಕೆಸಿಎನ್ಜಿ2.ಜೆಪಿಜಿ:ಚನ್ನಗಿರಿಯಲ್ಲಿ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿ ಸುರೇಶ್ ಎಂಬಾತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಮನವಿ ಶೋಷಿತ ವರ್ಗಗಳ ಮುಖಂಡರು ಮನವಿ ಸಲ್ಲಿಸಿದರು.