ಕನ್ನಡಪ್ರಭ ವಾರ್ತೆ ಗೋಕಾಕ
ಗೋಕಾಕ ಮತಕ್ಷೇತ್ರದ ಕೊಣ್ಣೂರ ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿನಪ್ಪ ಬೋರಗಲ್ಲಿ, ಪರುಶುರಾಮ ರಾಮಗಾನಟ್ಟಿ, ಕುಮಾರ ಬೆಳವಿ, ಜಿನಪ್ಪ ಬೆಡಕಿಹಾಳ ನೇತೃತ್ವದಲ್ಲಿ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಸೇರ್ಪಡೆಯಾದ ಕಾರ್ಯರ್ತರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಆತ್ಮೀಯವಾಗಿ ಸತ್ಕರಿಸಿದರು.
ಈ ಸಂಧರ್ಭದಲ್ಲಿ ಭೀಮನಗೌಡ ಪೊಲೀಸಗೌಡರ, ಮಣಿಕಂಠ ರಾಮಗಾನಟ್ಟಿ, ಜಗದೀಶ ವಣ್ಣೂರ, ಬಸವರಾಜ ಮಾದರ, ಪಾರೀಶ್ ಬಿಲ್ಲನವರ, ಕಲ್ಲಪ್ಪ ವಿಜಯನಗರ, ಭರಮಪ್ಪ ನವನಿ, ರಾಜು ಚೌಗಲಾ, ಬಾಳಪ್ಪ ಚೌಗಲಾ, ಮಲಿಕ್ ಯರಗಟ್ಟಿ, ಕಾರ್ತಿಕ್ ಹರಿಜನ, ಮಹಾನಿಂಗ್ ಮಾದರ, ಮಾರುತಿ ಮಾದರ, ಈಶ್ವರ ರಾಮಗಾನಟ್ಟಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.