ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿ ನಗರದಲ್ಲಿ ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ ಶಿವಶರಣ ಮೇದಾರ ಕೇತೇಶ್ವರ ೮೯೫ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೇದಾರ ಕೇತೇಶ್ವರರು ಬಸವಾದಿ ಪ್ರಮಥರ ಅನುಯಾಯಿ. ಕಾಯಕವೇ ಕೈಲಾಸ ಎಂದು ತಿಳಿದು ಬದುಕಿದವರು. ಅವರ ಆದರ್ಶ ನಮಗೆ ದಾರಿ ದೀಪವಾಗಬೇಕು. ವರ್ಷಕ್ಕೆ ಒಮ್ಮೆ ಕಾರ್ಯಕ್ರಮ ಮಾಡುವುದರ ಬದಲು ಪೂರ್ತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಿ. ಕಾಯಕ ಜಾತಿ ಸೂಚಕವಲ್ಲ ಎಂದು ಅಭಿಪ್ರಾಯಪಟ್ಟರು.
ಶರಣ ಈರಣ್ಣ ಶಿರಹಟ್ಟಿ ಮಾತನಾಡಿ, ವಕೀಲರಾದ ರವಿ ಕಾಮಗೊಂಡ ಮಾತನಾಡಿದರು. ಸಮಾರಂಭದಲ್ಲಿ ಸಂಗನಗೌಡ ಪಾಟೀಲ, ಮಹೇಶ ಬಂಡಿಗಣಿ, ಪ್ರಕಾಶ ಬುರುಡ, ದುಂಡಪ್ಪ ಬುರುಡ, ರಾಜು ಬುರುಡ, ಅನೀಲ ಬುರುಡ, ಮುತ್ತು ಬುರುಡ, ಸಾಗರ ಬುರುಡ, ಬಸವಾರಾಜ ಬೈಯಾರ, ಮಲ್ಲಪ್ಪ ಬುರುಡ, ಶಿವು ಬುರುಡ, ಲಕ್ಷö್ಮಣ ಬುರುಡ, ಕರೆಪ್ಪ ಬುರುಡ, ದಶರಥ ಬುರುಡ, ಪರಸಪ್ಪ ಬುರುಡ, ಶಂಕರ ಬುರುಡ, ಸಾಗರ ಬುರುಡ, ಅವಿನಾಶ ಬುರುಡ, ಹನಮಂತ ಬುರುಡ, ಕಾಡಪ್ಪ ಬುರುಡ, ಮಂಜುನಾಥ ಬುರುಡ, ಗೋಪಾಲ ಬುರುಡ ಸೇರಿದಂತೆ ಅನೇಕರು ಇದ್ದರು.