ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾಲಿಹೌಸ್ನಲ್ಲಿ ಹಲವು ತಳಿಯ ಕರಬೂಜಗಳನ್ನು ಬೆಳೆದಿದ್ದು 70 ದಿನದಲ್ಲೇ ಕಟಾವಿಗೆ ಬರುವುದು ಇವುಗಳ ವಿಶೇಷವಾಗಿದೆ. ಒಂದೂವರೆ ಅಡಿಯ ಅಂತರದಲ್ಲೇ ಸಸಿ ಬೆಳೆಸಬಹುದಾಗಿದ್ದು ಒಂದು ಕರಬೂಜ ಒಂದೂವರೆಯಿಂದ ಎರಡೂವರೆ ಕೆಜಿ ತೂಗಲಿವೆ.
ಬೀಜ ಸರಬರಾಜು ಮಾಡುವ ಕಂಪನಿಯೇ ಕೆಜಿಗೆ 70 ರುಪಾಯಿಯಂತೆ ಖರೀದಿಸಲಿದ್ದು, ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಇದಕ್ಕಿಂತ ಹೆಚ್ಚಿನ ಬೆಲೆ ಪಡೆಯಬಹುದಾಗಿದೆ. ಮಧುಮತಿ, ರಮ್ಯಾ, ಗೋಲ್ಡೀ ಮತ್ತಿತರ ತಳಿಗಳ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿದ್ದು ಬಾಳೆಯ ಮಾದರಿಯಲ್ಲಿ ಒಂದು ಗಿಡಕ್ಕೆ ಒಂದೇ ಕಾಯಿಯನ್ನು ಉಳಿಸಿಕೊಂಡರೆ ಹೆಚ್ಚು ತೂಕ ಬರಲಿದೆ.ರೈತರಿಗೆ ಉತ್ತಮ ಆಯ್ಕೆ
ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನ
ಅನ್ನದಾತರು ದಿನನಿತ್ಯ ಬಳಸುತ್ತಿದ್ದ ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನಕ್ಕೆಂದೇ ಬಿದಿರಿನಲ್ಲಿ ಮನೆಯೊಂದನ್ನು ನಿರ್ಮಿಸಲಾಗಿದೆ. ಸೇರು, ಪಾವು, ಚಟಾಕಿ, ಬೀಸುವ ಕಲ್ಲು, ಒನಕೆ, ಮೊರ, ಮಡಿಕೆ, ಸಡ್ಡೆ, ಗೊಟ್ಟ, ಮಖರಿ, ಕಣಜ, ಬಿಲ್ಲು, ಈಳಿಗೆ ಮಣಿ ಮತ್ತಿತರ 50 ಕ್ಕೂ ಅಧಿಕ ವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಹೂವುಗಳ ಲೋಕದ ಅನಾವರಣಹಲವು ವಿಧದ ಹೂವುಗಳು ನೋಡುಗರ ಮನಸ್ಸನ್ನು ಉಲ್ಲಾಸಗೊಳಿಸಲು ಸಜ್ಜಾಗಿವೆ. ಈ ಬಗ್ಗೆ ಮಾಹಿತಿ ನೀಡಿದ ಸೂರ್ಯಕಾಂತಿ ವಿಭಾಗದ ಮುಖ್ಯಸ್ಥೆ ಟಿ.ಕೆ.ನಾಗರತ್ನಾ, ವಿವಿಧ ಸಮಾರಂಭಗಳಿಗೆಅಲಂಕಾರಿಕ ಸೂರ್ಯಕಾಂತಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿತ್ತನೆಯಾದ 55 ದಿನಕ್ಕೇ ಹೂವುಗಳು ಪ್ರಾರಂಭವಾಗಲಿದ್ದು 90 ದಿನದವರೆಗೂ ಮುಂದುವರೆಯುತ್ತದೆ. ಐದಾರು ಬಣ್ಣಗಳ ಹೂವೂಗಳೂ ಬಿಡುವುದರಿಂದ ರೈತರು ಉತ್ತಮ ಆದಾಯ ಪಡೆಯಬಹುದು’ ಎಂದು ವಿವರಿಸಿದರು.