ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
‘ಸನಾತನ ವಾಣಿ’ ಬಹುಭಾಷಾ ಪ್ರಸಾರ‘ಸನಾತನ ವಾಣಿ’ಯನ್ನು ಎಐ ತಂತ್ರಜ್ಞಾನದ ಮೂಲಕ ಬಹು ಭಾಷೆಗಳಲ್ಲಿ ಪ್ರಸಾರ ಮಾಡಲಿದ್ದೇವೆ. ಈ ಮೂಲಕ ಎಲ್ಲರಿಗೂ ಅಧ್ಯಾತ್ಮಿಕ ಸಂದೇಶಗಳು ತಲುಪಲಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಅಪ್ಲಿಕೇಶನ್ ನನ್ನ ಧ್ವನಿಯನ್ನು ಬಹುಭಾಷೆಗಳಲ್ಲಿ ಬರುವಂತೆ ಮಾಡುತ್ತದೆ. ಸ್ಪೇನ್, ಜರ್ಮನಿ, ಡಚ್, ರಷ್ಯಾ, ಇಟಲಿ ಹೀಗೆ ಹಲವಾರು ಭಾಷೆಗಳಲ್ಲಿ ನನ್ನ ಉಪನ್ಯಾಸಗಳನ್ನು ಆಲಿಸಬಹುದಾಗಿದೆ ಎಂದರು.ನಮ್ಮಲ್ಲಿರುವ ಎಲ್ಲಾ ಪುಸ್ತಕಗಳನ್ನು ರೆಕಾರ್ಡ್ ಮಾಡಿ ಅದನ್ನು ಆಸಕ್ತರು ಅವರಿಗೆ ಬೇಕಿರುವ ಭಾಷೆಗಳಲ್ಲಿ ಆಲಿಸಲು ಸಾಧ್ಯವಾಗುವಂತೆ ಮಾಡಲಾಗುವುದು. ಇದರಿಂದ ಯಾರು ಎಲ್ಲಿಯೇ ಇದ್ದರೂ ತಮ್ಮದೇ ಭಾಷೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಆಲಿಸಬಹುದಾಗಿದೆ. ಇಂದಿನ ಪೀಳಿಗೆಯವರಿಗೆ ಪುಸ್ತಕವನ್ನು ಓದುವಷ್ಟು ತಾಳ್ಮೆಯಿಲ್ಲ. ಹೀಗಾಗಿ ನಾವು ಆಡಿಯೊ ಪುಸ್ತಕಗಳನ್ನು ತರುತ್ತಿದ್ದೇವೆ ಎಂದು ವಿವರಿಸಿದರು. ಫಿಲಿಪ್ಸ್ ಕಂಪನಿಗೆ ಪುರಸ್ಕಾರ
ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ಫಿಲಿಪ್ಸ್ ಇಂಡಿಯಾ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭರತ್ ಆರ್ ಶೇಷ ಪ್ರಶಸ್ತಿ ಸ್ವೀಕರಿಸಿದರು. ನೆದರ್ಲೆಂಡ್ಸ್ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎರಿಕ್ ಲಾರಕ್ಕರ್ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ’ ಪುರಸ್ಕಾರ ನೀಡಿ ಗೌರವಿಸಲಾಯಿತು.