ಅಕ್ಷರ ರಶ್ಮಿ, ಅಕ್ಷರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

KannadaprabhaNewsNetwork |  
Published : Jun 29, 2025, 01:32 AM IST
ಅಕ್ಷರಶ್ರೀ ಪ್ರಶಸ್ತಿ  ಪಡೆದ ಪರ್ತಕರ್ತ ವಿನಾಯ ಶಾಸ್ತಿç  | Kannada Prabha

ಸಾರಾಂಶ

ಸಮಾಜ ನಮಗೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಬೇರೆಲ್ಲ ಋಣಕ್ಕಿಂತ ಸಮಾಜದ ಋಣ ತೀರಿಸುವುದು ಅಸಾಧ್ಯ

ಗೋಕರ್ಣ: ಸಮಾಜ ನಮಗೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಬೇರೆಲ್ಲ ಋಣಕ್ಕಿಂತ ಸಮಾಜದ ಋಣ ತೀರಿಸುವುದು ಅಸಾಧ್ಯ ಎಂದು ಜಿ.ಸಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಆರ್.ಜಿ. ಗುಂದಿ ಹೇಳಿದರು.ಅಕ್ಷರ ಫೌಂಡೇಶನ್ ಬೆಂಗಳೂರು ಅಡಿಗೋಣ ಶಾಖೆ ಆಶ್ರಯದಲ್ಲಿ ನಾಡು ಮಾಸ್ಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಅರ್ಹತೆಗೆ ಅಕ್ಷರ ನಮನ ಪ್ರೇರಣಾ ಉಪನ್ಯಾಸ ಹಾಗೂ ಅಕ್ಷರ ರಶ್ಮಿ ಪ್ರಶಸ್ತಿ ಮತ್ತು ಅಕ್ಷರಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉಪನ್ಯಾಸಕರಾಗಿ ಪ್ರೌಢಶಾಲಾ ಹಂತದಲ್ಲಿ ಪೋಷಕರ ಪ್ರಭಾವಶಾಲಿ ಮಾರ್ಗದರ್ಶನ ವಿಷಯದ ಕುರಿತು ಮಾತನಾಡಿದರು.

ಅಕ್ಷರ ಫೌಂಡೇಶನ್ ಗೌರವಾಧ್ಯಕ್ಷ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಬೀರಣ್ಣ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧಕರನ್ನು ಗುರುತಿಸಿ ಗೌರವಿಸುವ, ನೆರವು ನೀಡುವ, ಪ್ರತಿಯೊಂದು ರಂಗಗಳಿಗೂ ನಮ್ಮ ಕಾರ್ಯಕ್ರಮ ತಲುಪುವಂತೆ ಮಾಡುವ ಉದ್ದೇಶ ಫೌಂಡೇಶನ್‌ನದ್ದು ಎಂದರು.

ಭದ್ರಕಾಳಿ ಸಮೂಹ ಸಂಸ್ಥೆ ಕಾರ್ಯದರ್ಶಿ ಜಿ.ಎನ್. ನಾಯಕ ಮಾತನಾಡಿದರು. ನಾಡು ಮಾಸ್ಕೇರಿ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಪ್ರಿಯಾ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಕ್ಷರ ಫೌಂಡೇಶನ್ ಅಧ್ಯಕ್ಷ ಕೆ.ಎಚ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮಹೇಶ ನಾಯಕ, ನಿವೃತ್ತ ಆರೋಗ್ಯ ಅಧಿಕಾರಿ ಸಿ.ಟಿ. ನಾಯಕ ಇದ್ದರು.

ಇದೇ ವೇಳೆ ಅಕ್ಷರ ಫೌಂಡೇಶನ್ ವತಿಯಿಂದ ಪತ್ರಕರ್ತರಾದ ಸುಭಾಷ ಕಾರೇಬೈಲ್, ಪತ್ರಕರ್ತ ವಿನಾಯಕ ಶಾಸ್ತ್ರಿ ಅವರಿಗೆ ಅಕ್ಷರ ಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರಥ್ವಿ ಸುರೇಶ ಆಗೇರ ಅವರಿಗೆ ಅಕ್ಷರ ರಶ್ಮಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಸವಿನೆನಪಿನಾರ್ಥವಾಗಿ ಡಾ.ಆರ್ ಜಿ ಗುಂದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಡು ಮಾಸ್ಕೇರಿ ಶಾಲಾವತಿಯಿಂದ ಅಕ್ಷರ ಫೌಂಡೇಶನ್ ನ ಟ್ರಸ್ಟಿ ಮಂಜುನಾಥ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಫೌಂಡೇಶನ್ ಸದಸ್ಯೆ ವಿಜಯಲಕ್ಷ್ಮೀ ನಾಯಕ, ವೆಂಟು ಮಾಸ್ಟರ್‌ ಶಿಳ್ಯಾ, ರಮೇಶ ನಾಯಕ, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಜಗದೀಶ್ ನಾಯ್ಕ, ಪ್ರಮುಖರಾದ ರಾಜೇಶ್ ನಾಯಕ, ಶ್ರೀನಿವಾಸ್ ನಾಯಕ, ನಮಿತಾ ನಾಯಕ, ಗಣಪತಿ ನಾಯ್ಕ ಇದ್ದರು.

ಸಹಶಿಕ್ಷಕ ಶ್ರೀಧರ ನಾಯಕ ಸ್ವಾಗತಿಸಿದರು. ಪ್ರೇರಣಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಶ್ಯಾಮಲಾ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು. ನಿವೃತ್ತ ಶಿಕ್ಷಕ ಮಂಜುನಾಥ ಹಿತ್ತಲಮಕ್ಕಿ ವಂದಿಸಿದರು. ಬಿಎಡ್ ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!