ಶಿವಮೊಗ್ಗ: ಕಳೆದು ಹೋಗುತ್ತಿರುವ ಸಂವಿಧಾನದ ಮೌಲ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಾಹಿತಿ ಎಲ್.ಎನ್. ಮುಕುಂದರಾಜ್ ಹೇಳಿದರು.
ಕನ್ನಡ ಸಾಹಿತ್ಯದ ಮೂಲಕ ಕವಿ ಸಮಾಜದಲ್ಲಿನ ಅಂಕುಡೊಂಕುಗಳ ವಿರುದ್ಧವಾಗಿ ಮಾತನಾಡಲು ಹಿಂಜರಿಯುವ ಪರಿಸ್ಥಿತಿ ಇದೆ. ಶರಣರು ಇಂತಹ ಪ್ರಯೋಗಗಳನ್ನು ಮಾಡಿದಾಗ ಬೃಹತ್ ಹತ್ಯಾಕಾಂಡವೇ ನಡೆದುಹೋಗಿದೆ. ಸಾಮಾನ್ಯ ಜನರ ಗೋಳಿನ ವಿರುದ್ಧದ ಉತ್ಪನ್ನಗಳೇ ವಚನ ಸಾಹಿತ್ಯ. 12ನೇ ಶತಮಾನದಲ್ಲಿದ್ದ ತೆರಿಗೆ ಪದ್ಧತಿಯ ಇಕ್ಕಟ್ಟು ಇಂದಿಗೂ ಉಳಿದಿದೆ ಎಂದು ಹೇಳಿದರು.
ಸಂವಿಧಾನ ನಮಗೆ ಯಾವುದೇ ವ್ಯವಸ್ಥೆಗಳನ್ನು ಟೀಕಿಸುವ ವಿಮರ್ಶಿಸುವ ಅವಕಾಶ ಮಾಡಿಕೊಟ್ಟಿದೆ. ಇಂದು ಶಿಕ್ಷಣ ಕಲಿತವರಿಂದಲೇ ಸಂವಿಧಾನದ ವ್ಯವಸ್ಥೆ ಕುತ್ತು ಬಂದಿದೆ. ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ ಎನ್ನುವ ಅಹಂಕಾರ ರಾಜಕಾರಣಿಗಳಲ್ಲಿದೆ. ಸಂವಿಧಾನದ ಐಕ್ಯ ಕೆಲವೇ ವರ್ಷಗಳ ಹತ್ತಿರದಲ್ಲಿದ್ದೇವೆ. ನಾಳೆ ಏನಾಗಲಿದೆ ಎಂದು ಹೇಳುವ ಶಕ್ತಿ ಕನ್ನಡದ ಶರಣರಿಗೆ, ದಾಸರಿಗಿದೆ. ಕನ್ನಡ ಸಾಹಿತ್ಯ ಅಂತಹ ಅದ್ಭುತ ಶಕ್ತಿ ಹೊಂದಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯದಲ್ಲಿ ಜೀವ ವಿರೋಧಿ ನಿಲುವು ಕುರಿತು ಲೇಖಕ ಬಿ.ಚಂದ್ರೇಗೌಡ ಮಾತನಾಡಿ, ಜೀವ ವಿರೋಧಿ ನಿಲುವುಗಳನ್ನು ಕನ್ನಡದಲ್ಲಿ ಮೊದಲು ತೋರಿಸಿಕೊಟ್ಟವರು ಕುವೆಂಪು. ಮೂಲ ರಾಮಾಯಣದ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಾಯಣ ದರ್ಶನಂ ಎಂಬ ಅದ್ಭುತ ಕೃತಿಯನ್ನು ರಚಿಸಿದರು. ಮನುಕುಲದ ನಿಲುವುಗಳನ್ನು ಪ್ರತಿಪಾದಿಸುವಲ್ಲಿ ಕುವೆಂಪು ಬರುವವರೆಗೂ ಕನ್ನಡ ಸಾಹಿತ್ಯ ಕಾಯಬೇಕಾಗಿತ್ತು. ಮಾನವೀಯ ಕಾಳಜಿಯ ಲೇಖಕ ಎಂದಿಗೂ ವರ್ಣಬೇಧ ಪರವಾಗಿ ಇರುವುದಿಲ್ಲ ಎಂದು ಹೇಳಿದರು.
ಜಾನಪದ ಜಾಗತೀಕರಣ ಕುರಿತಾಗಿ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಮಾತನಾಡಿದರು. ಸಾಹಿತಿ ಪ್ರೊ.ಮಾರ್ಷಲ್ ಶರಾಮ್ ಅಧ್ಯಕ್ಷತೆ ವಹಿಸಿದ್ದರು.- - - -1ಎಸ್ಎಂಜಿಕೆಪಿ17:
ಕನ್ನಡ ಸಾಹಿತ್ಯ ಸವಾಲುಗಳು ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಜೀವ ವಿರೋಧಿ ನಿಲುವು ಕುರಿತು ಲೇಖಕ ಬಿ.ಚಂದ್ರೇಗೌಡ ಮಾತನಾಡಿದರು.