ಕಾರವಾರ: ಜಿಲ್ಲೆಯಲ್ಲಿ ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ತಿಳಿಸಿದರು.
ವೆಬ್ಕಾಸ್ಟಿಂಗ್ಗೆ ೧೦೧೫, ಮೈಕ್ರೋ ಆಬ್ಸರ್ವರ್ ೩೦೩, ವಿಡಿಯೋಗ್ರಾಫರ್ ೨೧, ಸೆಕ್ಟರ್ ಆಫೀಸರ್ ೨೦೦ ಜನರು ಮತದಾನದ ದಿನ ಕೆಲಸ ಮಾಡಲಿದ್ದಾರೆ. ೮೫ ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮನೆಯಿಂದ ಮತದಾನಕ್ಕೆ ಆಯೋಗ ಅವಕಾಶ ನೀಡಿತ್ತು. ಜಿಲ್ಲೆಯಲ್ಲಿ ೫೦೨೩ ಜನರಿದ್ದು, ೪೮೧೯ ಜನರು ಮತದಾನ ಮಾಡಿದ್ದಾರೆ. ೬೪ ಜನರು ಮೃತರಾಗಿದ್ದು, ೧೪೦ ಜನರು ವಿವಿಧ ಕಾರಣದಿಂದ ಮತದಾನ ಮಾಡಿಲ್ಲ. ಮೇ ೬ರಂದು ಮತಪೆಟ್ಟಿಗೆಯೊಂದಿಗೆ ಮತಗಟ್ಟೆಗೆ ತೆರಳಲು (ಮಸ್ಟರಿಂಗ್) ಅಧಿಕಾರಿಗಳಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನಲ್ಲಿ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಸಾರ್ವಜನಿಕರು ಹೇಳಿದ್ದು, ಸ್ಥಳೀಯ ತಹಸೀಲ್ದಾರರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿ ಸಂಧಾನ ಮಾಡಿದ್ದಾರೆ. ಟೊಂಕಾ ಕಾಸರಗೋಡಿನಲ್ಲೂ ಸಿಇಒ ಈಶ್ವರಕುಮಾರ ಕಾಂದೂ ಮಾತುಕತೆ ಮಾಡಿದ್ದಾರೆ ಎಂದು ತಿಳಿಸಿದರು.ಕಣದಲ್ಲಿರುವ ಅಭ್ಯರ್ಥಿಗಳು: ಕಾಂಗ್ರೆಸ್ನಿಂದ ಡಾ. ಅಂಜಲಿ ನಿಂಬಾಳಕರ, ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಗಣಪತಿ ಹೆಗಡೆ, ಕರ್ನಾಟಕ ರಾಷ್ಟ ಸಮಿತಿಯ ವಿನಾಯಕ ಮಂಗೇಶ ನಾಯ್ಕ, ಉತ್ತಮ ಪ್ರಜಾಕೀಯ ಪಕ್ಷದಿಂದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ