ಕೆಪಿಎಸ್ ಶಾಲೆ ವಿರುದ್ಧ ಕೆಲವರಿಂದ ವ್ಯವಸ್ಥಿತ ಷಡ್ಯಂತ್ರ: ಆರೋಪ

KannadaprabhaNewsNetwork |  
Published : Nov 05, 2025, 01:45 AM IST
4ಕೆಎಂಎನ್ ಡಿ16,17  | Kannada Prabha

ಸಾರಾಂಶ

ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಇದನ್ನು ಮನಗಂಡು ಪೋಷಕರಾದ ನಾವುಗಳೇ ಒಂದಷ್ಟು ಹಣವನ್ನು ನಿಗಧಿ ಪಡಿಸಿ ಶಾಲೆ ಅಭಿವೃದ್ಧಿಗೆ ನೀಡುತ್ತಿದ್ದೇವೆ. ಪೋಷಕರ ಸಭೆಯಲ್ಲಿ ನಿರ್ಧರಿಸಲಾದ ಮೊತ್ತವನ್ನು ಮಾತ್ರ ಪಡೆದು ರಸೀದಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಕೆಪಿಎಸ್ ಶಾಲೆ ವಿರುದ್ಧ ಕೆಲವರು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲೆಯ ಮಕ್ಕಳ ಪೋಷಕರು ಶಾಸಕರನ್ನು ಆಗ್ರಹಿಸಿದರು.

ಶಾಲಾ ಆವರಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲಾ ಮಕ್ಕಳ ಪೋಷಕರು ಸರ್ಕಾರಿ ಕೆಪಿಎಸ್ ಶಾಲೆ ವಿರುದ್ಧ ಅಪಪ್ರಚಾರ ಮತ್ತು ಆರ್.ಟಿ.ಐ ಕಾರ್ಯಕರ್ತರ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ಖಂಡಿಸಿದರು.

ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಇದನ್ನು ಮನಗಂಡು ಪೋಷಕರಾದ ನಾವುಗಳೇ ಒಂದಷ್ಟು ಹಣವನ್ನು ನಿಗಧಿ ಪಡಿಸಿ ಶಾಲೆ ಅಭಿವೃದ್ಧಿಗೆ ನೀಡುತ್ತಿದ್ದೇವೆ. ಪೋಷಕರ ಸಭೆಯಲ್ಲಿ ನಿರ್ಧರಿಸಲಾದ ಮೊತ್ತವನ್ನು ಮಾತ್ರ ಪಡೆದು ರಸೀದಿ ನೀಡಿದ್ದಾರೆ ಎಂದರು.

ಶಾಲೆ ಅಭಿವೃದ್ಧಿಗೆ ಧನ ಸಹಾಯವನ್ನು ಸ್ವಯಂ ನಿರ್ಧಾರದ ಮೇರೆಗೆ ನೀಡುತ್ತಿದ್ದೇವೆ. ಶಾಲೆ ಅಭಿವೃದ್ಧಿಗೆ ಸಹಾಯ ಮಾಡಲು ಇಚ್ಚೆಯಿಲ್ಲದವರು ದಯಮಾಡಿ ಸುಮ್ಮನಿರಿ. ಆದರೆ, ಕೆಲವು ಪಿತೂರಿದಾರರ ಜೊತೆ ಶಾಮೀಲಾಗಿ ಸಲ್ಲದ ದೂರು ಬರೆದು ಶಿಕ್ಷಣ ಸಂಸ್ಥೆ ಹೆಸರಿಗೆ ಕಳಂಕ ತರಬೇಡಿ ಎಂದು ಆಗ್ರಹಿಸಿದರು.

ಎಸ್.ಡಿ.ಎಂ.ಸಿ ಪರ ಮಾತನಾಡಿದ ಸಿ.ಬಿ.ಚೇತನಕುಮಾರ್, ಕೆಪಿಎಸ್ ಶಾಲೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪಟ್ಟಣದ ಖಾಸಗಿ ಶಾಲೆಗಳಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡುತ್ತಿದೆ. ಖಾಸಗಿ ಶಾಲೆಗಳಲ್ಲಿನ ಮಿತಿಮೀರಿದ ಡೋನೇಷನ್ ಹಣ ಕಟ್ಟಲಾರದ ಸಾಕಷ್ಟು ಮಕ್ಕಳು ಈ ಶಾಲೆಗೆ ಬಂದು ಸೇರಿದ್ದಾರೆ ಎಂದರು.

1 ರಿಂದ 5ನೇ ತರಗತಿಯವರೆಗೆ 316 ಮಕ್ಕಳು ದಾಖಲಾಗಿದ್ದು, 191 ಪೋಷಕರು ಮಾತ್ರ ಹಣ ನೀಡಿದ್ದಾರೆ. ಮಕ್ಕಳ ಮನೆಯಿಂದ ಪಿಯುಸಿ ವರೆಗೆ 2400 ವಿದ್ಯಾರ್ಥಿಗಳಿದ್ದಾರೆ. ಆದರೆ, ಶಾಲೆ ಶೌಚಾಲಯ ಶುದ್ಧಿ ಮಾಡಲು ಅಗತ್ಯ ಡಿ.ಗ್ರೋಪ್ ಸಿಬ್ಬಂದಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 8 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಅಗತ್ಯ ಗೌರವಧನ ನೀಡಲಾಗುತ್ತಿದೆ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಶಾಲೆ ವಿರುದ್ಧದ ಆರೋಪಗಳನ್ನು ಪೋಷಕರು ಗಂಭೀರವಾಗಿ ಪರಿಗಣಿಸಬೇಕು. ನಾನು ಶಾಸಕನಾಗುವ ಮುನ್ನವೇ ಇಲ್ಲಿ ತಹಸೀಲ್ದಾರ್ ಆಗಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸದರಿ ಅಭಿವೃದ್ಧಿಗೆ ಕಾರಣಕರ್ತರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ಥಳೀಯರು ಧನ ಸಹಾಯ ಮಾಡಿ ಶಾಲೆ ಉಳಿಸಲು ಶ್ರಮಿಸಿದ್ದಾರೆ ಎಂದರು.

ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸೇರಿದಂತೆ ಎಲ್ಲವನ್ನೂ ನೀಡುತ್ತಿದೆ. ಕೆಲವರು ತಮಗೆ ಬೇಕಾದ ವ್ಯಕ್ತಿಗಳನ್ನು ಶಾಲಾಭಿವೃದ್ಧಿ ಸಮಿತಿಗೆ ಸೇರಿಸಲು ಪ್ರಯತ್ನಿಸಿ ವಿಫಲರಾದರು. ಹೀಗಾಗಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಬಿ.ಚೇತನಕುಮಾರ್, ಸದಸ್ಯರಾದ ಕೆ.ಆರ್.ಪುಟ್ಟಸ್ವಾಮಿ, ಲೋಕೇಶ್, ಲಕ್ಷ್ಮೀಪ್ರಸನ್ನ, ಜಗದೀಶ್, ಮಂಜು, ಮಮತ, ಕಾವ್ಯ, ಸುಕನ್ಯಾ, ಪ್ರಾಂಶುಪಾಲ ಪುಲಿಗೆರಯ್ಯ, ಉಪ ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಕಿ ನಾಗರತ್ನ, ಪೋಷಕರಾದ ಮಹದೇವ, ನಗ್ಮಾಭಾನು, ಮಹಮದ್ ಸಾದಿಕ್, ಪ್ರಭಾಕರ್, ಸುಕನ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’