ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಹಾಸನ- ಮೈಸೂರು ರಸ್ತೆಯ ಅಂಬೇಡ್ಕರ್ ಪುತ್ಥಳಿಯ ಮುಂದೆ ಚಂದಗಾಲು ಗ್ರಾಮದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ ಮತ್ತು ಮಹದೇವನಾಯಕನ ಸಾವಿನ ಘಟನೆಯನ್ನು ಖಂಡಿಸಿ ತಾಲೂಕು ನಾಯಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮಹದೇವನಾಯಕನ ಕುಟುಂಬದವರು ಜೂ. 1 ರಂದು ಠಾಣೆಗೆ ದೂರು ನೀಡಲು ಬಂದಾಗ ಪೊಲೀಸರು ಸ್ಪಂದಿಸಿ ಕ್ರಮ ಕೈಗೊಂಡಿದ್ದರೆ ಆತ್ಮಹತ್ಯೆಯ ಯತ್ನ ನಡೆಯುತ್ತಿರಲಿಲ್ಲ ಮತ್ತು ಅಮಾಯಕನ ಜೀವ ಬಲಿಯಾಗುತ್ತಿರಲಿಲ್ಲ ಇಂತಹಾ ಕೃತ್ಯಕ್ಕೆ ಕಾರಣರಾಗಿರುವ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.ಮಹದೇವನಾಯಕನ ಶವವನ್ನು ಕೆ.ಆರ್. ನಗರ ಪಟ್ಟಣದ ಮೂಲಕ ಚಂದಗಾಲು ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಅವಕಾಶ ನೀಡದ ಪೊಲೀಸರು ಅಧಿಕಾರ ಬಳಸಿಕೊಂಡು ದಬ್ಬಾಳಿಕೆ ಮಾಡಿದ್ದು ಇದನ್ನು ನಾಯಕ ಸಮಾಜ ಖಂಡಿಸುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಘಟನೆ ನಡೆದ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರಿಂದ ಆತನನ್ನು ಈಗಾಗಲೇ ಬಂಧಿಸಲಾಗಿದೆ. ಜತೆಗೆ ದೂರು ಪಡೆಯದೆ ನಿರ್ಲಕ್ಷ್ಯ ವಹಿಸಿದ್ದ ಪೊಲೀಸರನ್ನು ಅಮಾನತ್ತು ಮಾಡಿದ್ದು ಇದರೊಂದಿಗೆ ನೊಂದ ಕುಟುಂಬಕ್ಕೆ ನಾನು ವೈಯುಕ್ತಿಕವಾಗಿ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದು ಚಿಕಿತ್ಸೆಗೂ ಸಹಾಯ ಮಾಡಿದ್ದೇನೆ ಎಂದರು.
ತಾಲೂಕು ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ಸಾಲಿಗ್ರಾಮ ತಾಲೂಕು ಘಟಕದ ಅಧ್ಯಕ್ಷ ಮಾದನಾಯಕ, ಗೌರವಾಧ್ಯಕ್ಷ ಎ.ಟಿ. ಶಿವಣ್ಣ, ನಾಯಕ ಸಮಾಜದ ಮುಖಂಡರಾದ ನಾಗರಾಜನಾಯಕ, ಸುಬ್ಬುಕೃಷ್ಣ, ಕೃಷ್ಣನಾಯಕ, ದೇವರಾಜು, ಲೋಹಿತ್, ಬೋರನಾಯಕ, ಬಸವರಾಜು, ಸಿ.ಆರ್. ಮಂಜುನಾಥ್, ರಾಜನಾಯಕ, ಈರಣ್ಣ ನಾಯಕ, ಚಂದಗಾಲು ರಾಜನಾಯಕ, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೆಬ್ಬಾಳು ಪರಶುರಾಮು, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ ಮೊದಲಾದವರು ಇದ್ದರು.