ಕನ್ನಡಪ್ರಭ ವಾರ್ತೆ ಕನಕಪುರ
ಕಾಂಗ್ರೆಸ್ನವರು ಗಿಫ್ಟ್ , ಆಮಿಷಗಳನ್ನು ಒಡ್ಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಇತ್ತೀಚಿಗೆ ಗಿಫ್ಟ್ ಹಂಚುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಸಂವಿಧಾನ ನಮಗೆ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಲು ಮತದಾನದ ವಿಶೇಷ ಅಧಿಕಾರ ಕೊಟ್ಟಿದೆ, ಅದನ್ನು ಗಿಫ್ಟ್ ಕೊಟ್ಟು ಖರೀದಿಸಿ ಈ ಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿದ್ದಾರೆ.ಅದರ ಬದಲಾವಣೆಗಾಗಿ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ಆದ್ದರಿಂದ ನಿಮ್ಮ ಅಮೂಲ್ಯ ಮತವನ್ನು ನನಗೆ ಕೊಟ್ಟು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದರು.
ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಶಿವಣ್ಣ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ರಾವ್ ಅವರು ಒಂದು ಮತಕ್ಕೆ 5೦೦೦ ಕೊಟ್ಟು ಗೆಲ್ಲುತ್ತೇನೆ ಎಂದುಕೊಂಡಿದ್ದಾರೆ. ಅವರು ಯಾವ ರೀತಿ ಹಣ ಮಾಡಿದ್ದಾರೋ ತಿಳಿದಿಲ್ಲ, ಅವರು ಭ್ರಷ್ಟಾಚಾರ ಮಾಡಿ ತಂದ ಹಣವನ್ನು ಪದವೀಧರರಿಗೆ ಹಂಚಿ ಕ್ಷೇತ್ರಕ್ಕೆ ಕಳಂಕ ತರಲು ಹೊರಟಿದ್ದಾರೆ. ರಾಜ್ಯ ಸರ್ಕಾರ ಇವರ ಬೆನ್ನಿಗೆ ನಿಂತಿರುವುದು ದುರಂತ. ರಾಮೋಜಿ ಗೌಡ ಅವರನ್ನು ಚುನಾವಣಾ ಆಯೋಗ ಕಣದಿಂದ ನಿವೃತ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ದೇವೇಗೌಡ ಪದವೀಧರ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಕೇಳುವ ನೈತಿಕತೆಯಿಲ್ಲ. ನಿಮ್ಮ ಹಣ, ನಿಮ್ಮ ಅಧಿಕಾರದ ಬಲವನ್ನು ಪದವೀಧರರು ಪರಿಗಣಿಸುವುದಿಲ್ಲ ಎಂಬ ಸಂದೇಶವನ್ನು ಮತದಾರರು ಕೊಡಬೇಕು. ಉದಯ ಸಿಂಗ್ ಅವರು ವಕೀಲರಾಗಿ ಬಡವರ ಪರ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ. ಉದಯ ಸಿಂಗ್ ರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಪದವೀಧರ ಕ್ಷೇತ್ರದ ಗೌರವ, ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು.
ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಭೀಮಲೇಶ್ ಕುಮಾರ್, ರಂಗ ನಿರ್ದೇಶಕ ನಾಗರಾಜು, ಮುಖಂಡ ಗೋಪಿ, ನವೀನ್, ಚಲವಾದಿ ನವೀನ್, ಸೇರಿ ಹಲವರು ಉಪಸ್ಥಿತರಿದ್ದರು.