ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆ

KannadaprabhaNewsNetwork |  
Published : Jan 02, 2026, 03:30 AM IST
1ಎಚ್‌ಕೆಆರ್2 | Kannada Prabha

ಸಾರಾಂಶ

ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.

ಹಿರೇಕೆರೂರು: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.ಈ ವೇಳೆ ಮಾತನಾಡಿದ ವಿಶ್ವಕರ್ಮ ಸಮಾಜದ ಮುಖಂಡ ನಿಂಗಾಚಾರಿ ಮಾಯಾಚಾರ, ಅಮರಶಿಲ್ಪಿ ಜಕಣಾಚಾರಿ ಅವರು ಈ ನಾಡಿಗೆ ನೀಡಿದಂತ ಅನೇಕ ಶಿಲ್ಪ ಪ್ರಕಾರಗಳ ಬಗ್ಗೆ ಹಾಗೂ ಸಂಸ್ಕೃತಿಗಳನ್ನು ಬೆಳೆಸುವಂತಹ ಕೆಲಸವನ್ನು ಹಾಗೂ ದೈವಿಕವಾಗಿ ಈ ಲೋಕಕ್ಕೆ ನೀಡಿದಂತ ಕೊಡುಗೆಗಳು ಅಪಾರವಾಗಿವೆ ಎಂದರು. ಪಟ್ಟಣದ ಯಾವುದಾರೂ ಒಂದು ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರ್ಯ ಹೆಸರನ್ನು ನಾಮಕರಣವನ್ನು ಮಾಡುವುದರ ಮೂಲಕ ಅವರ ಹೆಸರನ್ನು ಸ್ಮರಿಸುವಂತ ಕಾರ್ಯ ಎಲ್ಲ ನಾಗರಿಕರು ಮಾಡಬೇಕು ಎಂದು ಮನವಿ ಮಾಡಿದರು.ವಿಶ್ವಕರ್ಮ ಸಮಾಜದ ಮುಖಂಡರಾದ ಪ್ರಕಾಶ ನಿಟ್ಟೂರ, ಅಶೋಕ ಬಡಿಗೇರ, ರಾಜಶೇಖರ ಬಡಿಗೇರ, ವಿಜಯಕುಮಾರ ಮಾಯಾಚಾರಿ, ನಾಗಲಿಂಗ ಮಾಯಾಚಾರ, ನಾಗರಾಜ ಆರ್ಕಾಚಾರಿ, ಮೌನೇಶ ಆರ್ಕಾಚಾರಿ, ರಾಜಶೇಖರ ಮಾಯಾಚಾರ, ಉದಯಕುಮಾರ ಆರ್ಕಾಚಾರಿ, ರಾಮಲಿಂಗ ಬಡಿಗೇರ್, ಕಾಳಿಂಗಾಚಾರ ಮಾಯಚಾರ, ಮನು ಮಾಯಾಚಾರ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು