ಅಭಿಮಾನಿಗಳ ಹೃದಯದಲ್ಲಿ ಅಂಬರೀಶ್ ಅಜರಾಮರ: ಧರ್ಮ

KannadaprabhaNewsNetwork |  
Published : May 30, 2026, 01:30 AM IST
29ಕೆಎಂಎನ್ ಡಿ23 | Kannada Prabha

ಸಾರಾಂಶ

ಅಂಬರೀಶ್ ನಮ್ಮ ಜೀವಕ್ಕೆ ಜೀವವಾಗಿದ್ದು, ಅಭಿಮಾನಿಗಳ ಹೃದಯದಲ್ಲಿ ಅಮರರಾಗಿರುವ ಅಂಬರೀಶ್ ಅವರು ನಮ್ಮನ್ನು ಅಗಲಿದ್ದಾರೆ ಎಂಬುದು ನಂಬಲು ಸಾಧ್ಯವಿಲ್ಲ, ಅಂಬರೀಶ್ ಅವರನ್ನು ಗ್ರಾಮದ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಮಂಡ್ಯ: ಅಭಿಮಾನಿಗಳ ಹೃದಯದಲ್ಲಿ ನಟ ಡಾ.ಅಂಬರೀಶ್ ಅವರು ಅಜರಾಮರರಾಗಿದ್ದಾರೆ ಎಂದು ಡಾ.ಅಂಬರೀಶ್ ಸಂಬಂಧಿ, ಚಿತ್ರನಟ ಧರ್ಮ ಹೇಳಿದರು.

ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ವೃತ್ತದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಡಾ.ಅಂಬರೀಶ್ ಹುಟ್ಟುಹಬ್ಬ ಪ್ರಯುಕ್ತ ಕಟೌಟ್‌ಗೆ ಕ್ಷೀರಾಭಿಷೇಕ, ಪೌಷ್ಟಿಕಾಹಾರ ವಿತರಿಸಿ ಮಾತನಾಡಿದರು.

ಅಂಬರೀಶ್ ನಮ್ಮ ಜೀವಕ್ಕೆ ಜೀವವಾಗಿದ್ದು, ಅಭಿಮಾನಿಗಳ ಹೃದಯದಲ್ಲಿ ಅಮರರಾಗಿರುವ ಅಂಬರೀಶ್ ಅವರು ನಮ್ಮನ್ನು ಅಗಲಿದ್ದಾರೆ ಎಂಬುದು ನಂಬಲು ಸಾಧ್ಯವಿಲ್ಲ, ಅಂಬರೀಶ್ ಅವರನ್ನು ಗ್ರಾಮದ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಅಂಬಿ ಅಭಿಮಾನಿಯಾಗಿರುವ ವಿನಯ್ ಅವರು ಮುಂದಿನ ದಿನಗಳಲ್ಲಿ ಬಹು ಎತ್ತರಕ್ಕೆ ಬೆಳೆಯಲಿ. ಜನತೆಯ ಆಶೀರ್ವಾದ ಲಭಿಸಲಿ. ನಾವು ಅವರ ಬೆಂಬಲಕ್ಕೆ ಇರುತ್ತೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್, ಡಾ.ಅಂಬರೀಶ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ನಾವು. ಧರ್ಮ ಅವರು ಥೇಟ್ ಅಂಬರೀಶ್ ಅವರನ್ನೇ ಹೋಲುತ್ತಾರೆ. ಅಂಬರೀಶ್ ಅವರು ಬಂದಂತೆ ಆಗಿದೆ. ಅಣಬರೀಶ್ ಅವರು ಅಭಿಮಾನಿಗಳ ಆರಾಧ್ಯ ದೈವ, ಅಭಿಮಾನಿಗಳ ಅಭಿಮಾನಿಯಾಗಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿಮಾನಿ ಪ್ರತಾಪ್ ಚಿಕ್ಕಮಂಡ್ಯ, ಗೀತಾ, ಪ್ರೊ.ರಾಜೇಂದ್ರ ಬಾಬು, ಬಿಳಗೂಲಿ ಜಗದೀಶ್ ಸೇರಿ ಅಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗಳ ವಿಲೀನ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮನೆಗೆ ಸುಹಾಸ್ ಭೇಟಿ