ಯಲ್ಲಾಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತ್ಯತೀತ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅವರ ಮಾನವೀಯ ಕಳಕಳಿ ಅನುಕರಣೀಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಎಂ.ಎಲ್.ಸಿ. ಶಾಂತಾರಾಮ ಸಿದ್ದಿ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಭಗವದ್ಗೀತೆ ಎಷ್ಟು ಪ್ರಾಮುಖ್ಯತೆ ಪಡೆದಿದೆಯೋ ಸಂವಿಧಾನವೂ ಭೌತಿಕವಾಗಿ ಅಷ್ಟೇ ಮುಖ್ಯವಾಗಿದೆ. ಸಂವಿಧಾನ ಭೌತಿಕ ಜೀವನದ ಭಗವದ್ಗೀತೆಯಾಗಿದೆ. ಕೇವಲ ಸೌಲಭ್ಯ ಪಡೆಯುವುದಕ್ಕಾಗಿ ಜಾತಿ ಬಳಸಿಕೊಳ್ಳುವವರು, ತಮ್ಮ ಜಾತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಪಡಬಾರದು ಎಂದರು.
ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ಸಮಾನ ಹಕ್ಕು, ಶಕ್ತಿಯನ್ನು ಎಲ್ಲರೂ ಹೊಂದಲು ಡಾ. ಅಂಬೇಡ್ಕರ್ ಕಾರಣ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಸಂವಿಧಾನದ ಆಶಯಗಳನ್ನು ಗೌರವಿಸಬೇಕು ಎಂದರು.ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ, ವಿವಿಧ ಸಂಘಟನೆಗಳ ಪ್ರಮುಖರಾದ ಎಸ್ ಫಕೀರಪ್ಪ, ಚಿದಾನಂದ ಹರಿಜನ, ಭೀಮಶಿ ವಾಲ್ಮೀಕಿ, ಮಾರುತಿ ಬೋವಿವಡ್ಡರ್, ನಾಗೇಶ ಬೋವಿವಡ್ಡರ್, ದ್ಯಾಮಣ್ಣ ಬೋವಿವಡ್ಡರ್, ಅರ್ಜುನ ಬೆಂಗೇರಿ, ಗಿರೀಶ ಎಸ್.ಎಸ್., ಸುಮನ್ ಜಿ. ಹರಿಜನ, ಹನುಮಂತಪ್ಪ, ಎಂ.ಡಿ. ಮುಲ್ಲಾ, ರಾಮು ನಾಯ್ಕ, ಗಣೇಶ ಹೆಗಡೆ ಪಣತಗೇರಿ, ವಿ.ಎಸ್. ಭಟ್ಟ ಉಪಳೇಶ್ವರ, ವಿಲ್ಸನ್ ಫರ್ನಾಂಡೀಸ್, ಎ.ಎ. ಶೇಖ್, ನರಸಿಂಹ ನಾಯ್ಕ, ಎಲಿಶಾ ಎಲಕಪಾಟಿ, ಯಲ್ಲಪ್ಪ ಹೊಸ್ಮನಿ, ಜಗನ್ನಾಥ ರೇವಣಕರ, ಸಂತೋಷ ಪಾಟಣಕರ್, ಅಶೋಕ ಕೊರವರ ಉಪಸ್ಥಿತರಿದ್ದರು.