ತಳವರ್ಗಗಳ ಗಟ್ಟಿ ಧ್ವನಿ ಅಂಬಿಗರ ಚೌಡಯ್ಯ: ಬಾರಿಕರ ಮಂಜುನಾಥ

KannadaprabhaNewsNetwork |  
Published : Jan 22, 2026, 03:00 AM IST
ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವ ನಿಮಿತ್ತ ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮದಲ್ಲಿ ಮಂಗಳವಾರ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಅಂಬಿಗರ ಚೌಡಯ್ಯ ಅವರು ತಳ ವರ್ಗಗಳ, ಶೋಷಣೆಯ ಗಟ್ಟಿಧ್ವನಿಯಾಗಿದ್ದಾರೆ ಎಂದು ಗಜಾಪುರ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜಯಮ್ಮನವರ ಬಾರಿಕರ ಮಂಜುನಾಥ ತಿಳಿಸಿದರು.

ಕೂಡ್ಲಿಗಿ: ತಳಮಟ್ಟದಿಂದ ಬಂದ ಶರಣರ ಜೀವನ ಮೌಲ್ಯಗಳ ಬಗ್ಗೆ ಇಂದು ಬೆಳಕು ಚೆಲ್ಲಬೇಕಾಗಿದೆ, ಅಂಬಿಗರ ಚೌಡಯ್ಯ ಅವರು ತಳ ವರ್ಗಗಳ, ಶೋಷಣೆಯ ಗಟ್ಟಿಧ್ವನಿಯಾಗಿದ್ದಾರೆ ಎಂದು ಗಜಾಪುರ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜಯಮ್ಮನವರ ಬಾರಿಕರ ಮಂಜುನಾಥ ತಿಳಿಸಿದರು.

ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮದಲ್ಲಿ ಬುಧವಾರ ಸ್ಥಳೀಯ ಗಂಗಾಮತಸ್ಥರ ಸಂಘ ಆಯೋಜಿಸಿದ್ದ ಶ್ರೀ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವದಲ್ಲಿ ಅಂಬಿಗರ ಚೌಡಯ್ಯ ಅವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಅಂಬಿಗರ ಚೌಡಯ್ಯ ಮಡಿವಂತಿಕೆ ಸಮಾಜದ ವಿರುದ್ಧ ಗಟ್ಟಿ ಧ್ವನಿ ಎತ್ತುವ ಮೂಲಕ ಜನತೆಯನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿರು. ಜೀವನವೆಂಬ ಸಾಗರದಲ್ಲಿ ಅಂಬಿಗರ ಚೌಡಯ್ಯ ಬದುಕಿನ ಭವದ ಕಡಲನ್ನು ದಾಟಿಸುವ ಕೆಲಸ ಮಾಡಿದ್ದಾರೆ. ಇಂತಹ ನಿಜಶರಣನ ಜಯಂತಿ ಆಚರಣೆಗೆ ಸಮಾಜ ಬಾಂಧವರು ಉತ್ಸಾಹದಿಂದ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.

ಅಂಬಿಗರ ಚೌಡಯ್ಯನ ವಚನಗಳಲ್ಲಿ ಶೋಷಿತರ ಬಗ್ಗೆ ಅವರಿಗಿರುವ ಕಳಕಳಿ ಸಮಾಜದಲ್ಲಿಯ ಮೌಢ್ಯಗಳನ್ನು ಕಿತ್ತೊಗೆದು ವೈಚಾರಿಕತೆ ಬಿತ್ತುವಲ್ಲಿ ಮಹತ್ವದ ಪಾತ್ರ ವಹಿಸಿದ ಅಂಬಿಗರ ಚೌಡಯ್ಯ ಅಂಬಿಗರಿಗೆ ಮಾತ್ರವಲ್ಲದೇ ಇಂದಿನ ಸಮಾಜಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಾರಿಕರ ಗಂಗಪ್ಪ, ಬಾರಿಕರ ಕೊಟ್ರೇಶ್, ಗಾಳೆಪ್ಪನವರ ಭೀಮಪ್ಪ, ಬಾರಿಕರ ಮಂಜುನಾಥ, ಬಿ. ಶಿವರಾಜ, ನಿಡುಗುರ್ತಿ ಬಿ. ರಾಜ, ಸಿದ್ದಾಪುರ ಮಂಜು, ಬಿ. ಪಾಂಡುರಂಗ, ಬಾರಿಕರ ಬಸವರಾಜ, ಕೆ. ಮಂಜುನಾಥ, ಬಾರಿಕರ ಮಾರುತಿ, ಬಿ. ನಂದೀಶ, ಬಾರಿಕರ ಗುಂಡಪ್ಪ, ಬಾರಿಕರ ಭರಮಪ್ಪ, ಬಾರಿಕರ ಸುಬ್ರಹ್ಮಣ್ಯ, ನೀರಗಂಟಿ ಪವನ್, ಶ್ಯಾಮನೂರು ಸುರೇಶ್, ಮೋಹನ್, ಕುಪ್ಪಿನಕೆರೆ ವಿಷ್ಣು, ಬಾರಿಕರ ಗಂಗಾಧರ, ಬಾರಿಕರ ಸಿದ್ದಾರ್ಥ, ಕೊಟ್ರೇಶ್, ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ