ಬಿಂದುಮಾಧವ ಮಣ್ಣೂರ
ತಾಲೂಕಿನಲ್ಲಿ ಮುಂಗಾರು ಪೂರ್ವ ಸುರಿದ ಮಳೆಯಿಂದ ಪುಳಕಿತರಾಗಿದ್ದ ರೈತರು ಹೆಸರು ಹತ್ತಿ, ತೊಗರಿ ಶೇಂಗಾ, ಸೂರ್ಯಕಾಂತಿ ಬಿತ್ತನೆ ಮಾಡಿ ಸಂತಸಗೊಂಡಿದ್ದರು.ಆದರೆ ಕಳೆದ ಒಂದುವರೆ ತಿಂಗಳಿಂದ ಮಳೆ ಮಾಯವಾದ ಪರಿಣಾಮ,ಬೆಳವಣಿಗೆಯ ಹಂತದಲ್ಲಿಯೇ ಪೈರುಗಳು ಬಾಡುತ್ತಿದ್ದು,ರೈತರ ನಿದ್ದೆಗೆಡಿಸಿವೆ. ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಮಳೆಯಾಶ್ರಿತ ಭೂಮಿ ಹೊಂದಿರುವ ರೈತರು ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಮಳೆಯ ಕೊರತೆಯಿಂದಾಗಿ ತಾಲೂಕಿನಲ್ಲಿ ಬಿತ್ತಿದ ವಿವಿಧ ಬೆಳೆಗಳು ಬಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದು, ಹೇಗಾದರೂ ಮಾಡಿ ಬೆಳೆ ಉಳಿಸಿಕೊಂಡ್ರೆ ಒಪ್ಪೊತ್ತಿನ ಗಂಜಿಯಾದ್ರು ಸಿಗುತ್ತೆ ಅನ್ನೋ ಕನಸು ಕಂಡಿರೋ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆಬೆಳಗ್ಗೆಯಿಂದ ಸಂಜೆಯವರೆಗೆ ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿದ್ದರೂ, ಬೀಸುವ ಗಾಳಿಗೆ ಕರಗಿ ಮುಂದೆ ಸಾಗುತ್ತಿರುವುದು ರೈತರಲ್ಲಿ ತೀವ್ರ ನಿರಾಸೆ ಮೂಡಿಸುತ್ತಿದೆ.ಮೆಣಸಿನಕಾಯಿ ಈರುಳ್ಳಿ, ಹತ್ತಿ ಮತ್ತು ಮೆಕ್ಕೆಜೋಳ ಶೇಂಗಾ ಬೆಳೆಯುವ ನೀರಾವರಿ ಜಮೀನಿನ ರೈತರಲ್ಲೂ ಆತಂಕ ಹಾಗೂ ದುಗುಡ ಮನೆಮಾಡಿದೆ. ಮುಂದೇನು ಮಾಡುವುದು?’ ಎನ್ನುವ ಚಿಂತೆಯಲ್ಲಿ ರೈತರು ದಿನ ದೂಡುವಂತಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಮಣ್ಣೂರ ಶೇಷಗಿರಿ ಹೊಸೂರ ಶಿವಬಾಳನಗರ ಉಪ್ಪಾರವಾಡಿ ದೇವಪ್ಪ ನಗರ ರಾಮನಗರ ದಯಾನಂದನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ಉಡಚಣ ಹಿರಿಯಾಳ ಭೋಸಗಾ ದುದ್ದಣಗಿ ಮಂಗಳೂರ ಅಳ್ಳಗಿ ಗೌರ ((ಸಿ)ಶಿರವಾಳ ಮಾತೋಳಿ ಮಲ್ಲಾಬಾದ ಚಿಂಚೋಳಿ ಬಡದಾಳ ರೇವೂರ ಕೋಗನೂರ ಆನೂರ ಬಿಲ್ವಾಡ ತೆಲ್ಲೂರ ಕೆರಕನಹಳ್ಳಿ ಬಂದರವಾಡ ಹಸರಗುಂಡಗಿ ಚಿಣಮಗೇರಾ ದೇವಲ ಗಾಣಗಾಪುರ ಸ್ಟೇಷನ್ ಗಾಣಗಾಪುರ ಗುಡೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮುಂಗಾರು ಮಳೆಯ ಆರಂಭದ ಭರವಸೆ ಮೇರೆಗೆ ಬಹುತೇಕ ರೈತರು ತೊಗರಿ, ಹತ್ತಿ ಶೇಂಗಾ,ಸೂರ್ಯಕಾಂತಿ ಬಿತ್ತನೆ ಮಾಡಿದ್ದರು ಆದರೆ ಈಗ ಮಳೆ ಅಭಾವ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.ಜೋರು ಮಳೆ ಇಲ್ಲ: ಮುಂಗಾರು ಹಂಗಾಮಿನ ಬಿತ್ತನೆ ಸಂದರ್ಭದಲ್ಲಿ ಸುರಿದ ಮಳೆಯಿಂದಾಗಿ ಭೂಮಿ ಹದವಾಗಿದ್ದರಿಂದ ರೈತರು ಖುಷಿಯಿಂದ ತೊಗರಿ, ಹತ್ತಿ ಸೇರಿದಂತೆ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆಗೈದು ಎರಡು ತಿಂಗಳು ಕಳೆದರೂ ಮಳೆ ಬಾರದ್ದರಿಂದ ಬೆಳೆದು ನಿಂತ ಬೆಳೆಗಳು ಮಳೆ ಇಲ್ಲದೇ ಬಾಡಿ ಹೋಗುತ್ತಿವೆ. ಆಗಾಗ ಜಿಟಿ ಜಿಟಿ ಮಳೆ ಬಂದರೂ ಅದು ಬೆಳೆಗಳಿಗೆ ತೇವಾಂಶ ತರುವಷ್ಟು ಸುರಿಯುತ್ತಿಲ್ಲ. ಬಿತ್ತ್ತನೆಗಾಗಿ ಸಾವಿರಾರು ರೂಪಾಯಿ ಖರ್ಚು
ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ.ಸರಕಾರ ರೈತರಿಗೆ ಪರಿಹಾರ ಒದಗಿಸಿ ರೈತರ ಹಿತ ಕಾಪಾಡಬೇಕಾಗಿದೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಕಲ್ಲಪ್ಪ ಅಲ್ಲಾಪೂರ ಕಾಶಿನಾಥ ಜೇವೂರ ಲಗಶೆಪ್ಪ ಭಾಸಗಿ ವೇಣುಮಾಧವ ಅವಧಾನಿ ಸಂಜೀವ ನನ್ನಾಜಿ ಶಿವಪುತ್ರ ನಿವರಗಿ ಸೋಮಯ್ಯ ಸಾಲೂಟಗಿ ಸಂತೋಷ ಅಲ್ಲಾಪೂರ ಭೀಮಾಶಂಕರ ಪೂಜಾರಿ ಮಹಮದ್ ಕರೀಮ ಮಂಗಲಗಿರಿ ಮಲಕಪ್ಪ ಕರಜಗಿ ಆಗ್ರಹಿಸಿದ್ದಾರೆ