ನಿತ್ಯ ಬದುಕಲ್ಲಿ ಹಾಸುಹೊಕ್ಕಾದ ಗಣಿತ ಕಲಿಕೆ ಕಷ್ಟವಲ್ಲ: ಪ್ರೊ.ಗಂಗಾಧರ್

KannadaprabhaNewsNetwork |  
Published : Sep 19, 2026, 01:30 AM IST
18ಸಿಎಚ್‌ಎನ್52ಚಾಮರಾಕನಗರದಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿಕಾಲೇಜಿನಗಣಿತ ಶಾಸ್ತç ವಿಭಾಗದಿಂದಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಮ್ಯಾಥ್ಸ್ ಸ್ಪಾರ್ಕ್’ ಗಣಿತ ಮಾದರಿಗಳ ವಸ್ತುಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾದರಿಗಳನ್ನು ಗಣ್ಯರು ವೀಕ್ಷಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. | Kannada Prabha

ಸಾರಾಂಶ

ಜೀವನದ ಪ್ರತಿಯೊಂದು ವಿಷಯದಲ್ಲೂ ಹಾಸುಹೊಕ್ಕಾಗಿರುವ ಗಣಿತವನ್ನು ಕಲಿಯುವುದು ಕಷ್ಟವಲ್ಲ, ಗಣಿತವೆಂದರೆ ಕೇವಲ ಸಂಖ್ಯೆ, ಸೂತ್ರ, ಸಮೀಕರಣ ಅಥವಾ ಪರೀಕ್ಷೆಯಲ್ಲ, ಗಣಿತವು ಪ್ರಕೃತಿಯ ಭಾಷೆ, ವಿಜ್ಞಾನದ ಭಾಷೆ ಹಾಗೂ ತಂತ್ರಜ್ಞಾನದ ಭಾಷೆಇದನ್ನು ಶ್ರದ್ದೆ, ಶಿಸ್ತು ಹಾಗೂ ಪ್ರಾಯೋಗಿಕವಾಗಿಕಲಿತಾಗಜೀವನದಲ್ಲಿಯಶಸ್ಸು ಸಾಧಿಸಬಹುದು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜೀವನದ ಪ್ರತಿಯೊಂದು ವಿಷಯದಲ್ಲೂ ಹಾಸುಹೊಕ್ಕಾಗಿರುವ ಗಣಿತವನ್ನು ಕಲಿಯುವುದು ಕಷ್ಟವಲ್ಲ, ಗಣಿತವೆಂದರೆ ಕೇವಲ ಸಂಖ್ಯೆ, ಸೂತ್ರ, ಸಮೀಕರಣ ಅಥವಾ ಪರೀಕ್ಷೆಯಲ್ಲ, ಗಣಿತವು ಪ್ರಕೃತಿಯ ಭಾಷೆ, ವಿಜ್ಞಾನದ ಭಾಷೆ ಹಾಗೂ ತಂತ್ರಜ್ಞಾನದ ಭಾಷೆಇದನ್ನು ಶ್ರದ್ದೆ, ಶಿಸ್ತು ಹಾಗೂ ಪ್ರಾಯೋಗಿಕವಾಗಿಕಲಿತಾಗಜೀವನದಲ್ಲಿಯಶಸ್ಸು ಸಾಧಿಸಬಹುದು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಕಾಲೇಜಿನ ಗಣಿತ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಮ್ಯಾಥ್ಸ್ ಸ್ಪಾರ್ಕ್’ ಗಣಿತ ಮಾದರಿಗಳ ವಸ್ತುಪ್ರದರ್ಶನ ಹಾಗೂ ಸ್ಪರ್ಧೆ, ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗಣಿತವನ್ನು ಕೇವಲ ಪರೀಕ್ಷೆ, ಅಂಕ, ಸೂತ್ರ ಹಾಗೂ ಸಮೀಕರಣಗಳಿಗೆ ಸೀಮಿತಗೊಳಿಸದೆ, ಜೀವನ ಮತ್ತು ವಿಜ್ಞಾನದೊಂದಿಗೆ ಬೆಸೆದು ನೋಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕುತೂಹಲ ಹಾಗೂ ಸಂಶೋಧನಾ ಮನೋಭಾವ ಬೆಳೆಸಬೇಕು, ಗಣಿತಕಲಿಯಲು ಮೂಡುವಜ್ಞಾನದಕಿಡಿ ಮುಂದೆ ವಿಸ್ತಾರವಾಗುತ್ತದೆ ಎಂದರು.

ತಾರ್ಕಿಕ ಚಿಂತನೆ ಗಣಿತದ ಪ್ರಮುಖ ಅಂಶವಾಗಿದ್ದು, ಕಟ್ಟಡಗಳ ವಿನ್ಯಾಸದಲ್ಲಿ,ಕಂಪ್ಯೂಟರ್ ವಿಜ್ಞಾನದಲ್ಲಿ ಅಲ್ಗಾರಿದಂ ಮತ್ತು ಲಾಜಿಕ್, ಎಂಜಿನಿಯರಿಂಗ್‌ನಲ್ಲಿಗಣಿತ ಮಾದರಿಗಳು, ಅರ್ಥಶಾಸ್ತ್ರ ಹಾಗೂ ಸಮಾಜ ವಿಜ್ಞಾನದಲ್ಲಿ ಸಂಖ್ಯಾಶಾಸ್ತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಗಣಿತದ ಬಳಕೆಯಿದೆ ಎಂದರು.

ಇಂದಿನ ಕೃತಕ ಬುದ್ಧಿಮತ್ತೆ, ಬಿಗ್‌ಡೇಟಾ, ಡೇಟಾ ಸೈನ್ಸ್, ಸೈಬರ್ ಸುರಕ್ಷತೆ ಹಾಗೂ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಗಳಲ್ಲೂ ಗಣಿತದ ಪಾತ್ರಅತ್ಯಂತ ಪ್ರಮುಖವಾಗಿದೆ.ದೈನಂದಿನ ಜೀವನದಲ್ಲಿಯೂ ಸಮಯ, ದೂರ, ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಗಣಿತವನ್ನು ಬಳಸುತ್ತೇವೆ,. ಹೀಗಾಗಿ ಗಣಿತವುತರಗತಿಗೆ ಸೀಮಿತವಾದ ವಿಷಯವಲ್ಲ, ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಒಂದು ವಿಧಾನವಾಗಿದೆಎಂದು ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಮಹದೇವಸಾಮಿ ಮಾತನಾಡಿ, ಗಣಿತ ಎಂದರೆ ಕಷ್ಟ ಎನ್ನುವ ಮನೋಭಾವ ಹಾಗೂ ಅವ್ಯಕ್ತ ಭಯ ಇರಬಾರದು. ಗಣಿತ ಎಲ್ಲಾ ವಿಷಯಗಳ ಅಡಿಪಾಯ ಇದ್ದ ಹಾಗೆ. ಗಣಿತದಲ್ಲಿ ಪ್ರಭುತ್ವಗಳಿಸಿದರೆ ಎಲ್ಲಾ ವಿಷಯಗಳ ಕಲಿಕೆ ಸರಳವಾಗುತ್ತದೆ ಗಣಿತಜೀವನದ ಕಲೆಯನ್ನು ಕಲಿಸುತ್ತದೆ ಎಂದರು.

ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಎಲ್ಲಾ ವಿಷಯಗಳಿಗೂ ಅಡಿಪಾಯವಾಗಿರುವಗಣಿತ ಬಗೆಗಿನ, ಈ ಕಾರ್ಯಕ್ರಮ ಮಹತ್ವ ಪೂರ್ವಕಾರ್ಯಕ್ರಮ ಇದನ್ನುಆಯೋಜಿಸಿರುವ ಗಣಿತ ವಿಭಾಗಕ್ಕೆಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 54 ಗಣಿತ ಮಾದರಿಗಳನ್ನು ಪ್ರದರ್ಶನಕ್ಕೆಇಡಲಾಗಿದೆ. ಜೆಎಸ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ 27 ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಂದ 19 ಮಾದರಿಗಳು ಸೇರಿದಂತೆ ವಿವಿಧ ಮಾದರಿಗಳು ಪ್ರದರ್ಶನಗೊಂಡವು.ರಾಕೆಟ್‌ ಉಡಾವಣೆಯಲ್ಲಿ ಗಣಿತದ ಅನ್ವಯ, ಆಟದ ಮೂಲಕ ಗಣಿತ ಕಲಿಕೆ ಸೇರಿ ಹಲವು ವಿಷಯಗಳನ್ನು ಮಾದರಿಗಳ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಅರುಣಶ್ರೀ ಕೆ.ಎಸ್., ಐಕ್ಯೂಎಸಿ ಸಂಯೋಜಕಡಾ. ಎ.ಎಸ್.ಬಿ.ಕೆ. ಕೆಂಡಗಣ್ಣಸ್ವಾಮಿ, ಪಿಯು ಮಹಿಳಾ ಕಾಲೇಜಿನ ಪ್ರಾಂಶುಪಾಲ ದೇವರಾಜಮೂರ್ತಿ ಬಸವಣ್ಣ ಇದ್ದರು.

ಕೆಜಿಎಫ್‌ ರಾಬರ್ಟ್ಸನ್‌ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎಸ್. ಗುರುಪ್ರಸಾದ್, ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ದರ್ಶನ್‌ ತೀರ್ಪುಗಾರರಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುನಿದ ವರುಣ: ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು
ಕ್ರಷರ್‌ ಮಾಲೀಕರ ಪ್ರತಿಭಟನಗೆ ರೈತಸಂಘ ವಿರೋಧ