ಕನ್ನಡಪ್ರಭ ವಾರ್ತೆ ಹುಕ್ಕೇರಿ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸುರಿಯುತ್ತಿರುವ ರಭಸದ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಹಿರಣ್ಯಕೇಶಿ ನದಿಗೆ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ ದಂಪತಿ ಅವರು ಧಾರ್ಮಿಕ ವಿಧಿ-ವಿಧಾನದೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನಿರ್ದೇಶಕರಾದ ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಬಾಬಾಸಾಹೇಬ ಅರಬೋಳೆ ಇತರರು ಇದ್ದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸುರಿಯುತ್ತಿರುವ ರಭಸದ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಹಿರಣ್ಯಕೇಶಿ ನದಿಗೆ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಶುಕ್ರವಾರ ಬಾಗಿನ ಅರ್ಪಿಸಲಾಯಿತು.ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ ದಂಪತಿ ಅವರು ಧಾರ್ಮಿಕ ವಿಧಿ-ವಿಧಾನದೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನಿರ್ದೇಶಕರಾದ ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಬಾಬಾಸಾಹೇಬ ಅರಬೋಳೆ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ, ಮ್ಯಾನೇಜರ ಎ.ಆರ್.ಚಾಟೆ, ಚೀಫ್ ಇಂಜಿನಿಯರ ಎಸ್.ಸಿ.ನಾಗನ್ನವರ, ಕಚೇರಿ ಅಧೀಕ್ಷಕ ಸುಭಾಸ ನಾಶಿಪುಡಿ, ಲೇಖಾಧಿಕಾರಿ ಕೆ.ಆರ್.ಬೆಟಗೇರಿ, ಕೋ-ಜನ್ ಚೀಫ್ ಇಂಜಿನಿಯರ ವಿರೇಂದ್ರ ಕತ್ತಿ, ಇನ್ಚಾರ್ಜ ಚೀಫ್ ಕೆಮಿಸ್ಟ ವಿ.ವಿ.ಪಾಟೀಲ, ವಿ.ಎಂ.ಬೆಲ್ಲದ, ಡಿ.ಎನ್.ಚೌಗಲಾ, ಎಸ್.ಪೂಜಾರ, ಎಂ.ವೈ.ಪಾಟೀಲ, ಮಹಾಂತೇಶ ಉತ್ತೂರ, ಜೆ.ಪಿ.ಏಣಗಿಮಠ, ಪಿ.ಬಿ.ಮುಗಳಿ, ಬಿ.ವಿ.ಅರಳಿಮಟ್ಟಿ, ನಾಗೇಶ ಖೋತ, ಜಿ.ಐ.ಬೊಮ್ಮನ್ನವರ, ಬಾಬಾಸಾಹೇಬ ನಾಗನೂರೆ ಮತ್ತಿತರರು ಉಪಸ್ಠಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.