ಮರ್ತ್ಯ ಲೋಕದಲ್ಲಿ ಭಕ್ತಿಯ ಮನೆ ಕಟ್ಟಿದ್ದ ಪುರಾತನರು

KannadaprabhaNewsNetwork |  
Published : Aug 21, 2025, 02:00 AM IST
ಕಾರ್ಯಕ್ರಮದಲ್ಲಿ ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿಯವರು ಮಾತನಾಡಿದರು. | Kannada Prabha

ಸಾರಾಂಶ

ಭಕ್ತಿಯ ವ್ಯವಹಾರ ಮಾಡಿದರು. ಸಾಮಿಪ್ಯ, ಸಾರುಪ್ಯ, ಸಾಲುಕ್ಯ, ಸಾಯುಜ್ಯ ಎಂಬ ನಾಲ್ಕು ವಿಧ ಪದವಿಗೊಳಗಾದರು. ಈ ಪದವಿಗಳಿಂದಾಚೆ ನಿಜದ ನಿಲುವುಳ್ಳ ನಿಜ ಭಕ್ತಿಯ ನಿಲುವು ಗುರುತಿಸಲಿಲ್ಲ

ಗದಗ: ಪುರಾತನರು ಮರ್ತ್ಯ ಲೋಕದಲ್ಲಿ ಭಕ್ತಿಯ ಮನೆ ಕಟ್ಟಿಕೊಂಡಿದ್ದರು, ಅವರು ಭಕ್ತಿ ಮಾಡಿ ಸ್ವರ್ಗಕ್ಕೆ ಹೋದರು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿ ಹೇಳಿದರು.

ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶರಣ ಚರಿತಾಮ್ರತ ಪ್ರವಚನದಲ್ಲಿ ಮಾತನಾಡಿದರು.

ಭಕ್ತಿಯ ವ್ಯವಹಾರ ಮಾಡಿದರು. ಸಾಮಿಪ್ಯ, ಸಾರುಪ್ಯ, ಸಾಲುಕ್ಯ, ಸಾಯುಜ್ಯ ಎಂಬ ನಾಲ್ಕು ವಿಧ ಪದವಿಗೊಳಗಾದರು. ಈ ಪದವಿಗಳಿಂದಾಚೆ ನಿಜದ ನಿಲುವುಳ್ಳ ನಿಜ ಭಕ್ತಿಯ ನಿಲುವು ಗುರುತಿಸಲಿಲ್ಲ. ನಿಜ ಭಕ್ತಿಯ ಮಹಾಮನೆ ಕಟ್ಟಲಿಲ್ಲ. ಪದವಿಗಳು ಸ್ಥಿರವಲ್ಲ ಗಮನಾಗಮಕ್ಕೆ ಕರೆದುಕೊಂಡು ಹೋಗುವಂತವು.

12ನೇ ಶತಮಾನದ ಬಸವಾದಿ ಶಿವಶರಣರು ಮರ್ತ್ಯದಲ್ಲಿ ಬಂದು ಕಲ್ಯಾಣದಲ್ಲಿ ಭಕ್ತಿಯ ಮಹಾಮನೆ ಕಟ್ಟಿದರೆ, ಮರ್ತ್ಯ ಲೋಕವೆಲ್ಲವೂ ಭಕ್ತಿಯ ಸಾಮ್ರಾಜ್ಯವಾಗಿತ್ತು. ಆ ಮನೆಗೆ ತೆಲೆಬಾಗಿ, ಕೈಮುಗಿದು ಹೋದವರೆಲ್ಲರೂ ನಿಜಲಿಂಗ ಪದವಿ ಪಡೆದರು. ಗಮನಾಗಮದ ರಹಿತ ನಿಜದ ನಿಲುವಿನಲ್ಲಿ ನಿಜಮುಕ್ತಿಂ ಪಡೆದವರು ಶಿವಶರಣರು ಎಂದು ತಿಳಿಸಿದರು.

11ನೇ ಶತಮಾನದ ಪುರಾತನರ ಭಕ್ತಿಗೂ 12ನೇ ಶತಮಾನದ ಶರಣರ ಭಕ್ತಿಗೂ ಅನ್ಯ ಭಕ್ತಿ, ಅನನ್ಯ ಭಕ್ತಿಯ ದೃಷ್ಠಾಂತ ಕೊಟ್ಟು ವಿವರಿಸಿದರು.

ಈಶ್ವರಿ ವಿಶ್ವವಿದ್ಯಾಲಯದ ಸಹೋದರಿ ಬಿ.ಕೆ. ಸುಮಿತ್ರಕ್ಕ ಮಾತನಾಡಿ, ರಕ್ಷಾಬಂಧನ ನೂರಾರು ವರ್ಷಗಳಿಂದ ಆಚರಿಸುತ್ತಾ ಬಂದಿದ್ದು, ಪ್ರತಿಯೊಬ್ಬ ಸಹೋದರಿಗೆ ಸಹೋದರನ ಬೆಂಬಲ, ರಕ್ಷಣೆ ಬೇಕೇ ಬೇಕು. ಹಿಂದೆ ಮಹಾಭಾರತದಲ್ಲಿ ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಶ್ರೀಕೃಷ್ಣನ ಬೆರಳಿಗೆ ಕಟ್ಟಿದ್ದಳು. ಮುಂದೊಂದು ದಿನ ದ್ರೌಪತಿಗೆ ಸಂಕಷ್ಟ ಬಂದಾಗ ಶ್ರೀಕೃಷ್ಣನನ್ನು ನೆನೆದಾಗ ಕೃಷ್ಣನ ಆಶೀರ್ವಾದದಿಂದ ಯಾವುದೇ ತೊಂದರೆ ದ್ರೌಪತಿಗೆ ಆಗಿಲ್ಲ ಎಂದರು.

ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿದರು. ತಬಲಾ ವಾದಕ ಹೇಮೇಂದ್ರಕುಮಾರ ಹಿರೇಮಠ ನಡೆಸಿದರು. ಪ್ರಸಾದ ಸೇವೆ ಪ್ರಭುಗೌಡ ಕುಬೇರ ಗೌಡ ಚಿನ್ನಪ್ಪಗೌಡರು ಹಾಗೂ ಕುಟುಂಬದವರು ಸೇವೆ ವಹಿಸಿದ್ದರು.

ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಸದಸ್ಯ ಕೊಟ್ರಪ್ಪ ಕಮತರ, ಎಂ.ಎಂ. ಹಿರೇಮಠ, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರುಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ್‌, ಸುಭಾಸ ಹವಳೆ, ವಿರುಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಸುರೇಶ ನಿಲುಗಲ್ಲ, ಅಶೋಕ ತಮೃಳ್ಳಿ, ಬಸವರಾಜ ಮೊರಬದ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಶೈಲಾ ಮಾನ್ವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ