ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ:
ಅಧ್ಯಕ್ಷ ಸ್ಥಾನಕ್ಕೆ ಅಂಜನಪ್ಪ ಹಾಗೂ ಮುನಿರೆಡ್ಡಿ ಎಲ್. ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ನೀಡಲಾಗಿದ್ದರೂ ಇಬ್ಬರೂ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆಯದ ಕಾರಣ, ನಿಯಮಾನುಸಾರ ಮತದಾನ ನಡೆಯಿತು.
ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಗುಪ್ತ ಮತದಾನದಲ್ಲಿ ಎಚ್.ವಿ.ಆಂಜನಪ್ಪ ಅವರಿಗೆ 9 ಮತ ಬಿದ್ದರೆ ಮುನಿರೆಡ್ಡಿ ಎಲ್ ರವರು ಕೇವಲ 3 ಮತಗಳನ್ನು ಪಡೆದಿದ್ದು, ಎಚ್.ವಿ.ಅಂಜನಪ್ಪ ಹೆಚ್ಚು ಮತ ಪಡೆದು ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡರೆಂದು ಚುನಾವಣಾಧಿಕಾರಿ ಎನ್ .ವನಿತ ತಿಳಿಸಿದರು.ಉಪಾಧ್ಯಕ್ಷರ ಅವಿರೋಧ ಆಯ್ಕೆ:
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಬು, ರಾಜಣ್ಣ , ಮುನಿರೆಡ್ಡಿ , ಚಂದ್ರ, ಕ್ಯಾತಪ್ಪ, ವೆಂಕಟೇಶ್, ಗಂಗರೆಡ್ಡಿ ಎ, ವಿಜಯ್ ಕುಮಾರ್, ಆಂಜಿನಪ್ಪ , ಮಮತ , ಆಂಜಿನಪ್ಪ ರಾಮಚಂದ್ರಪ್ಪ, ಮುಖಂಡರಾದ ಶ್ರೀನಿವಾಸ್, ಮುರಳಿ, ದೇವರಾಜ್, ಮುನಿರಾಜ್, ವೆಂಕಟೇಶ್, ಮದನ್, ವರುಣ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.ಸುದ್ದಿ ಚಿತ್ರ ೧ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಅವರ ಬೆಂಬಲಿಗರು ಹೂ ಹಾರ ಹಾಕಿ ಅಭಿನಂದಿಸಿದರು.